ನಾನು ನಿತ್ಯಾ ರವರನ್ನು ಮದ್ವೆ ಆಗಲ್ಲ, ಮುಂದೆ ಆಕೆ ಪಶ್ಚಾತಾಪ ಪಟ್ಟೆ ಪಡುತ್ತಾಳೆ ಎಂದ ಸಂತೋಷ್. ಯಾಕಂತೆ ಗೊತ್ತೇ? ನಿತ್ಯಾ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಚಿತ್ರರಂಗ ಅನ್ನೋದು ಒಂದು ಮಾಯಾ ಲೋಕ. ಹಾಗಾಗಿ ಇದರಲ್ಲಿ ಇರುವ ಕಲಾವಿದರು ಸಾಮಾನ್ಯ ಜನರ ಸಂಪರ್ಕಕ್ಕೆ ಬರಲ್ಲ. ಸೆಲೆಬ್ರಿಟಿಗಳಂತೂ ಜನರ ಜೊತೆ ಒಂದು ಸೆಲ್ಪಿ ತೆಗೆದುಕೊಳ್ಳುವುದೇ ದೊಡ್ಡ ವಿಷಯ ಅಂತದ್ರಲ್ಲಿ ಮದುವೆ ಗಿದ್ವೆ ಅಂತ ಹೋದ್ರೆ ಅಷ್ಟೇ. ಪೇಚು ಮೊರೆ ಹಾಕ್ಕೊಂಡು ಹಿಂತಿರುಗಿ ಬರಬೇಕು ಅಷ್ಟೇ. ಸಂತೋಷ್ ವಾರ್ಕಿಗೆ ಅಗಿದ್ದೂ ಇದೆ ನೋಡಿ!

ಹೌದು, ಕೇರಳ ಮೂಲದ ಸಂತೋಷ್ ವಾರ್ಕಿ, ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತ ಮುಖ. ಇವರು ಬಹುಭಾಷಾ ತಾರೆ ನಿತ್ಯಾ ಮೆನನ್ ಅವರನ್ನ ಮದುವೆಯಾಗಬೇಕು ಎನ್ನುವ ಮಹದಾಸೆಯನ್ನು ಹೊತ್ತವರು. ಈ ಕಾರಣಕ್ಕಾಗಿಯೇ ನಿತ್ಯಾ ಮೆನನ್ ಅವರ ಮನೆಗೂ ಹೋಗಿ ತಮ್ಮನ್ನ ಮದುವೆಯಾಗಬೇಕು ಎಂದು ಕೇಳಿದ್ದರಂತೆ. ಆದರೆ ಇದ್ಯಾವುದಕ್ಕೂ ನಿತ್ಯಾ ಮೆನನ್ ಪ್ರತಿಕ್ರಿಯೆ ನೀಡಿರಲಿಲ್ಲ. ನಿತ್ಯಾ ಅವರನ್ನ ಅತಿಯಾಗಿ ಪ್ರೀತಿಸುತ್ತಿದ್ದ ಸಂತೋಷ್ ಸದ್ಯ ಯಾಕೋ ನಿತ್ಯಾ ಮೆನನ್ ವಿರುದ್ಧ ಗರಂ ಆಗಿದ್ದಾರೆ.

ಸಂತೋಷ್ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಅದೇನ್ ಗೊತ್ತಾ? ನಾನು ನಿತ್ಯಾ ಮೆನನ್ ಅವರನ್ನು ಮದುವೆಯಾಗುವುದಿಲ್ಲ. ಅವರಾಗೆ ನನ್ನ ಬಳಿ ಬಂದು ಮದುವೆಯಾಗು ಎಂದು ಕೇಳಿದರೂ ಮದುವೆಯಾಗದೆ ಇರುವ ನಿರ್ಧಾರ ಮಾಡಿದ್ದೇನೆ. ಎಂದು ಬರೆದುಕೊಂಡಿದ್ದಾರೆ ಸಂತೋಷ್. ಇನ್ನು ನಿತ್ಯಾ ಅಷ್ಟು ಒಳ್ಳೆಯವರೇ ಆಗಿದ್ದರೆ ಅವರ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳಬಹುದಿತ್ತು ಎಂದೂ ಕೂಡ ಸಂತೋಷ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸಂತೋಷ್ ವಾರ್ಕಿ, ಮಲಯಾಳಂ ನಟ ಮೋಹನ್ ಲಾಲ್ ಅವರ ದೊಡ್ಡ ಅಭಿಮಾನಿ. ಆಗಾಗ ಅವರ ಚಿತ್ರದ ವಿಮರ್ಶೆ ಮಾಡಿ ವಿಡಿಯೋವನ್ನು ಅಪ್ಲೋಡ್ ಮಾಡುವುದರ ಮೂಲಕ ಜನರಿಗೆ ಪರಿಚಿತ. ಸದ್ಯ ನಟಿ ನಿತ್ಯಾ ಮೆನನ್ ಅವರನ್ನ ಅತಿಯಾಗಿ ಪ್ರೀತಿಸುತ್ತಿದ್ದ ಸಂತೋಷ್ ಇಂದು ಅವರ ವಿರುದ್ಧವೇ ಕೆಂಡಾಮಂಡಲವಾಗಿದ್ದಾರೆ. ಆದರೆ ಈ ಬಗ್ಗೆ ನಿತ್ಯಾ ಮೆನನ್ ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.