ತಾನು ಅಂದು ಮಾಡಿದ ತಪ್ಪಿಗೆ ಈಗಲೂ ಕೊರಗುತ್ತಿರುವರೇ ನಾಗ ಚೈತನ್ಯ: ಭಾವುಕರಾಗಿ ಹೇಳಿದ್ದೇನು ಗೊತ್ತೇ?

ಬಹಳ ದಿನಗಳ ನಂತರ ಥ್ಯಾಂಕ್ ಯೂ ಸಿನಿಮಾದೊಂದಿಗೆ ನಾಗಚೈತನ್ಯ ತೆರೆಮೇಲೆ ಬರಲಿದ್ದಾರೆ. ವಿಚ್ಛೇದನದ ನಂತರ ಅವರ ಸೋಲೋ ಹೀರೋ ಚಿತ್ರ ಇದಾಗಿದೆ. ಆದರೆ ಇತ್ತೀಚೆಗಷ್ಟೇ ಈ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡು ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಇದುವರೆಗೂ ಯಾರಿಗೂ ತಿಳಿಯದ ವಿಷಯಗಳನ್ನು ಈ ಯಂಗ್ ಹೀರೋ ಹೇಳಿದ್ದಾರೆ. ಜುಲೈ 22 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ರಾಶಿ ಖನ್ನಾ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಆದರೆ ಇತ್ತೀಚೆಗೆ ಪ್ರಚಾರದ ಸಂದರ್ಶನದಲ್ಲಿ ನಿರೂಪಕರು ಮೊದಲ ಪ್ರೀತಿಯ ಬಗ್ಗೆ  ನಾಗಚೈತನ್ಯ ಅವರನ್ನು ಕೇಳಿದರು. ರಾಶಿ ಖನ್ನಾ ಅದೊಂದು ಅದ್ಭುತವಾದ ಭಾವನೆ ಎಂದು ಹೇಳಿದ್ದಾರೆ. ಚೈತನ್ಯ ಅವರಿಗೂ ಕೂಡ ಇದೇ ಪ್ರಶ್ನೆ ಕೇಳಲಾಯಿತು. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ತಾವು ಹುಡುಗಿಯೊಬ್ಬಳನ್ನು ಪ್ರೀತಿಸಿದ್ದು, ವಿಚಿತ್ರವೆಂದರೆ ಮೂವರು ಸ್ನೇಹಿತರು ಸಹ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ವಿವರಿಸಿದರು. ಕೊನೆಗೆ ಆ ಹುಡುಗಿ ನಮ್ಮೆಲ್ಲರ ಹೃದಯ ಒಡೆದು ಹೋದಳು ಎಂದು ಎಂದು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ.

ಕೊನೆಗೆ ನಾವು ಮೂವರೂ ಮತ್ತೆ ಒಳ್ಳೆ ಗೆಳೆಯರಾದೆವು ಎಂದರು.
ಸಧ್ಯಕ್ಕೆ ನಾಗಚೈತನ್ಯ ಅವರ ಕಾಮೆಂಟ್ ಸಾಮಾಜಿಕ್ ಜಾಲತಾಣಗಳಲ್ಲಿ ನಲ್ಲಿ ವೈರಲ್ ಆಗುತ್ತಿದೆ. ಆದರೆ ಪ್ರೀತಿಯ ಬಗ್ಗೆ ಚೈತನ್ಯ ಅವರ ಭಾವನಾತ್ಮಕ ಕಾಮೆಂಟ್‌ಗಳು ಸಮಂತಾ ಅವರಿಗೆ ಪ್ರೇರಣೆ ನೀಡಿವೆ ಎನ್ನಲಾಗಿದೆ. ಅದಕ್ಕಾಗಿಯೇ ಚೈತನ್ಯ ಅವರು ತುಂಬಾ ಭಾವುಕರಾದರು ಎನ್ನುತ್ತಿದ್ದಾರೆ ನೆಟ್ಟಿಗರು. ನೆಟ್ಟಿಗರು ಚೈತನ್ಯ ಅವರ ಬಗ್ಗೆ ಸಹಾನುಭೂತಿ ತೋರಿಸುತ್ತಾರೆ.  ಪ್ರಸ್ತುತ ಚೈತನ್ಯ ಅವರ ಕಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.