ಶುರುವಾಯಿತು ಅಸಲಿ ಕಹಾನಿ: ಸೋನು ಗೌಡ ಆದಮೇಲೆ ಆರ್ಯವರ್ಧನ್ ವಿಚಾರದಲ್ಲಿ ಕಿರಿಕ್: ಮೊದಲ ಬಿಗ್ ಫೈಟ್ ನಲ್ಲಿ ಗುರೂಜಿಗೆ ಚಳಿ ಬಿಡಿಸಿದ್ದು ಯಾರು ಗೊತ್ತೇ??

ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸ್ಪರ್ಧಿಗಳಲ್ಲಿ ಒಬ್ಬರು ಆರ್ಯವರ್ಧನ್ ಗುರುಜಿ. ಎಲ್ಲಾ ಸ್ಪರ್ಧಿಗಳಿಗೂ ಭವಿಷ್ಯ ಹೇಳುತ್ತಾ, ಹೊರಗಡೆ ಇರುವ ಜನರಿಗೂ ಮನರಂಜನೆ ನೀಡುತ್ತಿದ್ದಾರೆ. ಜೊತೆಗೆ ಮನೆಯಲ್ಲಿ ಜಗಳದಿಂದಲು ಗುರೂಜಿ ಸದ್ದು ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ಹಾಗೂ ಸೋನು ಶ್ರೀನಿವಾಸ್ ಗೌಡ ನಡುವೆ ಮೊಟ್ಟೆ ವಿಚಾರಕ್ಕೆ ಜಗಳ ನಡೆದು, ಜೋರಾಗಿಯೇ ಸದ್ದು ಮಾಡಿತ್ತು. ಇದೀಗ ಮತ್ತೊಬ್ಬ ಸ್ಪರ್ಧಿಯ ಜೊತೆಗೆ ಹೊಡೆಯುವ ಮಟ್ಟಕ್ಕೆ ಜಗಳವಾಡಿದ್ದಾರೆ ಆರ್ಯವರ್ಧನ್ ಗುರೂಜಿ.

ಗುರೂಜಿ ಮತ್ತೊಮ್ಮೆ ಜಗಳ ಆಡಿರುವುದು ಉದಯ್ ಸೂರ್ಯ ಜೊತೆಗೆ. ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಉದಯ್ ರನ್ನು ಗುರೂಜಿ ತಳ್ಳಿದ್ದಾರೆ ಎಂದು ಉದಯ್ ಗುರೂಜಿ ಬಳಿ ಬಂದು, ನೀವು ಯಾಕೆ ನನ್ನ ತಳ್ಳಿದ್ರಿ ಎಂದು ಕೇಳಿದ್ದಾರೆ. ಅದಕ್ಕೆ ಗುರೂಜಿ ನಾನು ನಿನ್ನ ತಳ್ಳಿಲ್ಲ, ಟಾಸ್ಕ್ ಆಡುತ್ತಿದ್ದೆ ಎಂದು ಹೇಳಿದ್ದಾರೆ. ಆಗ ಉದಯ್ ಇಲ್ಲ ನೀವು ನನ್ನನ್ನ ಬೇಕು ಎಂದೇ ತಳ್ಳಿದ್ರಿ ಎಂದು ಹೇಳಿ, ಈ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಜಗಳವೆ ನಡೆದು ಹೋಗಿದೆ. ಇಬ್ಬರು ಮಾತಿಗೆ ಮಾತು ನೀಡುತ್ತಾ, ಹೊಡೆಯುವ ಮಟ್ಟಕ್ಕೆ ತಲುಪಿದ್ದಾರೆ.

ಕೊನೆಗೆ ಗುರೂಜಿ ಮತ್ತೊಂದು ಮಾತನ್ನು ಹೇಳಿದ್ದಾರೆ, ನಾನು ನಿನ್ನನ್ನು ತಳ್ಳಿಲ್ಲ ಒಂದು ವೇಳೆ ನಾನು ನಿನ್ನನ್ನು ತಳ್ಳಿದ್ದರೆ, ನೀನು 22 ಅಡಿ ದೂರಕ್ಕೆ ಹೋಗಿ ಬೀಳುತ್ತಿದ್ದೆ ಎಂದು ಹೇಳಿದ್ದಾರೆ. ಇವರಿಬ್ಬರ ಜಗಳ ಈಗ ಮನೆಯಲ್ಲಿ ಚರ್ಚೆಯಾಗುತ್ತಿದೆ. ಇದೀಗ ಗುರೂಜಿ ಹೊಸ ಲುಕ್ ಸಹ ವೈರಲ್ ಆಗಿದೆ. ಗಡ್ಡ ಮೀಸೆ ಮತ್ತು ಕೂದಲನ್ನು ತೆಗೆದು ಆರ್ಯವರ್ಧನ್ ಗುರೂಜಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಈ ಲುಕ್ ಈಗ ವೈರಲ್ ಆಗುತ್ತಿದೆ. ಇನ್ನು ತಮ್ಮ ಆಸ್ತಿಯ ಬಗ್ಗೆ ಸಹ ಮಾತನಾಡಿ, ಗುರೂಜಿ ಹೇಳಿಕೆಗಳು ವೈರಲ್ ಆಗಿದ್ದವು.