ಪ್ರೀತಿಸಿದವರಿಗೆ ಕೈಕೊಟ್ಟ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಪ್ರೀತಿ ಮಾಡಿ, ಮದುವೆ ಎಂದು ಶಾಕ್ ಕೊಟ್ಟವರು ಯಾರ್ಯಾರು ಗೊತ್ತೇ?

ತ್ರಿಷಾ ಯಾಕೆ ಹೀಗೆ ಮಾಡಿದರು? :- ನಟಿ ತ್ರಿಷಾ ಕೆಲ ವರ್ಷಗಳ ಹಿಂದೆ ವರುಣ್ ಮಣಿಯನ್ ಎಂಬ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಗೆ ಕೆಲವೇ ದಿನಗಳಿರುವಾಗ ತ್ರಿಶಾ ಅನಿರೀಕ್ಷಿತವಾಗಿ ಝಲಕ್ ಕೊಟ್ಟರು. ಇಬ್ಬರೂ ಮದುವೆಯಾಗದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದರು ನಟಿ ತ್ರಿಷಾ. ಈಗಲೂ ಅದೊಂದು ದೊಡ್ಡ ಸಸ್ಪೆನ್ಸ್ ಆಗಿದೆ ಉಳಿದಿದೆ. ಪ್ರೀತಿಸಿ ಮದುವೆಯಾಗಲು ತಯಾರಾದ ತ್ರಿಶಾ ಯಾಕೆ ಹೀಗೆ ಮಾಡಿದರು?

ರಶ್ಮಿಕಾ ಬಗ್ಗೆ ಆಗ ಅದೇ ಸಂಚಲನ :- ಈಗ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಒಮ್ಮೆ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿಯಲು ಬಯಸಿದ್ದರು. ರಶ್ಮಿಕಾ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಂತರವೇ ನಿಜವಾದ ಕಥೆ ಪ್ರಾರಂಭವಾಯಿತು ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು ರಶ್ಮಿಕಾ,ಅದೊಂದು ದೊಡ್ಡ ಜಗಳ ಅಂತೆ. ನಂತರದ ಕಥೆ ಎಲ್ಲರಿಗೂ ತಿಳಿದಿದೆ. ಈಗ ಸಿನಿಮಾಗಳಲ್ಲಿ ತುಂಬಾ ಬ್ಯುಸಿ ಅವರನ್ನು ರಶ್ಮಿಕಾ ಅವರನ್ನು ಮದುವೆಯಾಗಲು ವಿಫಲರಾದವರು ಕನ್ನಡದ ನಟ ರಕ್ಷಿತ್ ಶೆಟ್ಟಿ.

ಕತ್ರಿನಾ ಕೈಫ್ ಅನೇಕ ಪ್ರೇಮ ಕಥೆಗಳನ್ನು ಹೊಂದಿದ್ದಾರೆ :- ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಮದುವೆಯಾಗಲು ಇಬ್ಬರು ಜೊತೆಯಾಗಿ ದುಬಾರಿ ಫ್ಲಾಟ್ ಅನ್ನು ಸಹ ಖರೀದಿಸಿದರು. ಆ ನಂತರ ಇಬ್ಬರು ಬೇರೆಯಾದರು. ಹಿಂದಿ ಚಿತ್ರರಂಗದಲ್ಲಿ ಇಂತಹ ಹಲವು ಕಥೆಗಳಿವೆ. ಕತ್ರಿನಾ ಸಲ್ಮಾನ್ ಖಾನ್ ಜೊತೆ ಸಹ ಅದೇ ರೀತಿ ಮಾಡಿದ್ದರು. ಕತ್ರಿನಾ ತನಗೆ ಮೋಸ ಮಾಡಿದ್ದಾಳೆ ಎಂದು ಸಲ್ಮಾನ್ ಕೋಪಗೊಂಡ ಸಂದರ್ಭಗಳೂ ಇವೆ.

ಶ್ರುತಿ ಹಾಸನ್ ಡಬಲ್ ಧಮಾಕಾ :- ಶ್ರುತಿ ಹಾಸನ್ ಮತ್ತು ಮೈಕೆಲ್ ಕೊರ್ಸಾಲೆ ಕೆಲವು ವರ್ಷಗಳಿಂದ ಅಫೇರ್ ಹೊಂದಿದ್ದರು. ಮೈಕಲ್ ಅವರನ್ನು ಶ್ರುತಿ ಅವರ ತಂದೆ ಕಮಲ್ ಹಾಸನ್ ಕೂಡ ಇಷ್ಟಪಟ್ಟಿದ್ದರು. ಶ್ರುತಿ ಅವರ ಕುಟುಂಬದ ಸದಸ್ಯರೊಂದಿಗೆ ಮೈಕೆಲ್ ಚೆನ್ನಾಗಿಯೇ ಇದ್ದರು. ಆದರೆ, ಅನಿರೀಕ್ಷಿತವಾಗಿ ಶ್ರುತಿ ಮೈಕೆಲ್ ಬೇರ್ಪಟ್ಟರು. ಪ್ರಸ್ತುತ ಹೊಸ ಸ್ನೇಹಿತನೊಂದಿಗೆ ಡೇಟಿಂಗ್‌ ನಲ್ಲಿದ್ದಾರೆ ಶ್ರುತಿ. ಹಾಗಾಗಿ ಇದು ಎರಡನೇ ಪ್ರೇಮಕಥೆ. ಇದು ಲವ್ ಸ್ಟೋರಿಯೇ ಆಗಿದ್ದರು ಮದುವೆ ಆಗುತ್ತಾತಾ ಎಂದು ಕಾದು ನೋಡಬೇಕಿದೆ. ಅಕ್ಕನ ಹಾದಿಯಲ್ಲಿ ತಂಗಿ ಅಕ್ಷರಾ :- ಕೆಲ ವರ್ಷಗಳ ಹಿಂದೆ ಅಕ್ಷರಾ ಹಾಸನ್ ಕೂಡ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿ ಡೇಟಿಂಗ್ ಎಲ್ಲವೂ ನಡೆಯಿತು. ಆತ ಬೇರೆ ಯಾರು ಅಲ್ಲ, ನಟ ತನುಜ್.. ನಾವು ಪ್ರೀತಿಸುತ್ತಿದ್ದೆವು, ನಂತರ ಬ್ರೇಕಪ್ ಮಾಡಿಕೊಂಡೆವು ಎಂದು ಸುಲಭವಾಗಿ ಹೇಳಿದ್ದರು ಅಕ್ಷರ.

ನಯನತಾರ :- ನಯನತಾರಾ ಈ ಹಿಂದೆ ನಟ ಸಿಂಬು ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದರು. ಅದಾದ ಬಳಿಕ ಪ್ರಭುದೇವ ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದರು. ನಯನತಾರಾ ಅವರಿಂದಗಿ ಪ್ರಭುದೇವ ತನ್ನ ಹೆಂಡತಿಯೊಂದಿಗೆ ಜಗಳವಾಡಿದರು. ಪ್ರಭುದೇವ ಮತ್ತು ನಯನತಾರಾ ನಡುವಿನ ರಿಲೇಶನ್ಷಿಪ್ ಕೊನೆಗೂ ಅಂತ್ಯಗೊಂಡಿದ್ದು ಬ್ರೇಕಪ್ ಮೂಲಕ. ನಂತರ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದು, ಈ ಜೋಡಿ ಜೂನ್ ತಿಂಗಳಿನಲ್ಲಿ ಮದುವೆಯಾದರು. ಅಂಜಲಿ :- ತೆಲುಗು ನಟಿ ಅಂಜಲಿ ತಮಿಳು ನಟ ಜೈ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಕೆಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಅದು ಮುರಿದುಬಿತ್ತು. ತಾನು ಪ್ರೀತಿಸಿ ಮೋಸ ಹೋಗಿದ್ದೇನೆ ಎಂದು ಅಂಜಲಿ ಭಾವಿಸುತ್ತಾರೆ.