ಕಾರ್ತಿಕ ಮಾಸದ ಬಗ್ಗೆ ಷಾಕಿಂಗ್ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ; ಮುಂದೆ ಏನು ಆಗಲಿದೆ ಅಂತೇ ಗೊತ್ತೇ?? ಭವಿಷ್ಯ ಕೇಳಿ ಶಾಕ್ ಆದ ದೇಶ.

ಕೋಡಿ ಮಠದ ಶ್ರೀಗಳು ನುಡಿಯುತ್ತಿರುವ ಭವಿಷ್ಯ ನಿಜ ಆಗುತ್ತಿರುವುದನ್ನು ನೋಡುತ್ತಲಿದ್ದೇವೆ, ಶ್ರೀಗಳು ಜಲಪ್ರಳಯ ಆಗುತ್ತದೆ ಎಂದು ಏಪ್ರಿಲ್ ನಲ್ಲಿ ಭವಿಷ್ಯ ಹೇಳಿದ್ದರು, ಅದು ನಿಜ ಆಗಿದೆ, ಬೆಂಗಳೂರು ಮಳೆಯೇ ಅದಕ್ಕೆ ಸಾಕ್ಷಿ. ಎರಡು ವಾರಗಳ ಹಿಂದೆ ಶಿವಮೊಗ್ಗದಲ್ಲಿ ಶ್ರೀಗಳು ಭವಿಷ್ಯ ಹೇಳಿದ್ದು, ಮುಂದಿನ ದಿನಗಳಲ್ಲಿ ಬರುವ ರಾಜಕೀಯ ವಿಪತ್ತು ಹಾಗೂ ಪ್ರಕೃತಿ ವಿಕೋಪಗಳ ಬಗ್ಗೆ ಮಾತನಾಡಿದ್ದಾರೆ. ಕಾರ್ತಿಕ ಮಾಸದಲ್ಲಿ ಇನ್ನು ಹೆಚ್ಚಿನ ತೊಂದರೆ ಆಗುತ್ತದೆ, ಅದಕ್ಕೆಲ್ಲ ದೇವರ ಸ್ಮರಣೆ ಮಾಡುವುದು ಒಂದೇ ಪರಿಹಾರ ಎಂದು ಶ್ರೀಗಳು ಹೇಳಿದ್ದಾರೆ. ಭಕ್ತರು ಈ ಭವಿಷ್ಯ ಕೇಳಿ ಆತಂಕಕ್ಕೆ ಒಳಗಾಗಿದ್ದಾರೆ.

ದೇಶ ರಾಜಕಾರಣದಲ್ಲಿ ಗಲಭೆ ಉಂಟಾಗುತ್ತದೆ ಎಂದು ಶ್ರೀಗಳು ಹೇಳಿದ್ದರು, ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕ ನೂಪುರ್ ಶರ್ಮ ನೀಡಿರುವ ಹೇಳಿಕೆಗೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರೀಗಳು, ದೇವರ ಕೃಪೆಯಿಂದ ವಿಪರೀತ ಮಳೆಯಾಗಿದೆ, ನಾಡಿಗೆ ನೀರು ಬಂದಿದೆ, ಕೆರೆಯಿಂದ, ಗುರುಗಳು ಸ್ಥಾಪನೆ ಮಾಡಿರುವ ಕೆರೆಯಿಂದ ಏನು ತೊಂದರೆ ಆಗುವುದಿಲ್ಲ. ಬೆಂಕಿ ಅವಘಡ ಆಗುವ ಮುನ್ಸೂಚನೆ ಸಿಕ್ಕಿದೆ.. ಎಂದು ಶ್ರೀಗಳು ಹೇಳಿದ್ದಾರೆ. ಈಗಿನಿಂದ ಮುಂದೆ ಎಲ್ಲವೂ ಚೆನ್ನಾಗಿರುತ್ತದೆ, ಜನರಿಗೆ ಸುಖ ಶಾಂತಿ ಸಿಗುತ್ತದೆ. ಆದರೆ ಜಲದ ಸಮಸ್ಯೆ ಇನ್ನು ಮುಂದುವರೆಯುವ ಹಾಗೆ ಕಾಣುತ್ತಿದೆ.

ಜಲಬಾಧೆ ಮತ್ತು ಭೂಮಿಯೇ ನಡುಗುವಂಥ ಘಟನೆಗಳು ನಡೆಯುತ್ತವೆ, ಅಗ್ನಿಭಂಗ ಮತ್ತು ಭೂಕಂಪ ಜಾಸ್ತಿ ಆಗುವ ಸೂಚನೆ ಇದೆ. ಕಾರ್ತಿಕ ಮಾಸದಲ್ಲಿ ಇನ್ನು ತೊಂದರೆ ಆಗುವ ಲಕ್ಷಣ ಇದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಅಶುಭವೇ ಹೆಚ್ಚು ಎಂದು ಹೇಳಿದ್ದನ್ನು ಮತ್ತೆ ಹೇಳುತ್ತಿದ್ದೇನೆ, ಗಾಳಿ ಮಳೆ ಜಾಸ್ತಿಯಾಗುತ್ತದೆ. ಮಿಂಚು ಹೆಚ್ಚಾಗುತ್ತದೆ. ಸಾವು ನೋವು ಜಾಸ್ತಿಯಾಗುತ್ತದೆ. ಮಲೆನಾಡು ಬಯಲು ಸೀಮೆ ಆದೀತು..ಜನರು ದೇವರ ಮೇಲೆ ನಂಬಿಕೆ ಇಟ್ಟು ದೇವರ ಸ್ಮರಣೆ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ..ಎಂದು ಹುಬ್ಬಳ್ಳಿಯಲ್ಲಿ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅಪಮೃತ್ಯು, ಕೊಲೆ, ಮತೀಯ ಗಲಭೆ, ಕೊಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕೋಪ ಬರಲಿದೆ. ಮಳೆ ಬಂದರೂ ಬೆಳೆ ಸಿಗುವುದಿಲ್ಲ ಇದು ಅಶುಭ ವರ್ಷ..ಎಂದು ಹೇಳಿದ್ದಾರೆ.