ಬಿಗ್ ನ್ಯೂಸ್: ಅಪ್ಪು ಇಹಲೋಕ ತ್ಯಜಿಸಿದ ಮೇಲೂ ಸಿಕ್ತು ಅತ್ಯುತ್ತಮ ನಟ ಪ್ರಶಸ್ತಿ. ಈ ಸಮಯದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು ಗೊತ್ತೇ??

ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಲಾವಿದರಿಗೆ ಹಾಗೂ ಸಿನಿಮಾಗಳಿಗೆ ಗೌರವ ಸೂಚಿಸಿ, ಕೊಡುವ ಪ್ರಶಸ್ತಿಗಳಲ್ಲಿ ಒಂದು ಸೈಮಾ ಅವಾರ್ಡ್ಸ್. ಈ ವರ್ಷ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಸೆಪ್ಟೆಂಬರ್ 10 ಮತ್ತು 11ರಂದು ಸೈಮಾ ಅವಾರ್ಡ್ಸ್ ನಡೆದಿದ್ದು, ಸೆಪ್ಟೆಂಬರ್ 10ರಂದು ಕನ್ನಡ ಮತ್ತು ತೆಲುಗು ಭಾಷೆಯ ಸಿಬಿಮಾಗಳ ಅವಾರ್ಡ್ಸ್ ಗಳನ್ನು ಘೋಷಿಸಲಾಗಿದೆ. ಇಡೀ ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಬೆಂಗಳೂರಿಗೆ ಆಗಮಿಸಿದ್ದಾರೆ..

ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಾಯಕನಟ ಕನ್ನಡ ಅವಾರ್ಡ್ ಅನ್ನು ಪಡೆದವರು ಅಭಿಮಾನಿಗಳ ಪ್ರೀತಿಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಕಳೆದ ವರ್ಷ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ ಯುವರತ್ನ ಸಿನಿಮಾ 7 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿ ಅವಾರ್ಡ್ ಗಳನ್ನು ಪಡೆದುಕೊಂಡಿದೆ, ಅವುಗಳ ಪೈಕಿ ಅತ್ಯಾತ್ತಮ ನಾಯಕನಟ ಅವಾರ್ಡ್ ಅಪ್ಪು ಅವರಿಗೆ ಬಂದಿದೆ. ಅಪ್ಪು ಅವರಿಗೆ ಅರ್ಪಣೆಯಾಗಿಯೇ ಸೈಮಾ ಅವಾರ್ಡ್ಸ್ ಶೋ ಅನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.

ಸೈಮಾ ಅವಾರ್ಡ್ಸ್ ನ 10ನೇ ವರ್ಷದ ಆಚರಣೆ ಇದಾಗಿದೆ, ಅಪ್ಪು ಅವರು ಇಲ್ಲದ ಕಾರಣ ಅವರ ಪರವಾಗಿ ಈ ಅವಾರ್ಡ್ ಅನ್ನು ನಟ ಡಾಲಿ ಧನಂಜಯ್ ಅವರು ಸ್ವೀಕರಿಸಿದ್ದಾರೆ. ಅವರಷ್ಟೇ ಅಲ್ಲದೆ, ಚಂದನವನದ ಇನ್ನಿತರ ಕೆಲವು ಕಲಾವಿದರು ಸಹ ವೇದಿಕೆ ಮೇಲೆ ಬಂದು, ಅಪ್ಪು ಅವರ ಪರವಾಗಿ ಅವಾರ್ಡ್ ಸ್ವೀಕರಿಸಿದ್ದಾರೆ. ಇನ್ನು ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಟ್ವೀಟ್ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರ ಮೇಲೆ ಎಲ್ಲರಿಗೂ ಇರುವ ಗೌರವ ಮತ್ತು ಪ್ರೀತಿ ಇರುವುದು ಗೊತ್ತಾಗುತ್ತದೆ.