ಬಿಗ್ ನ್ಯೂಸ್: ನೂರಲ್ಲ ಇನ್ನೂರಲ್ಲ 1000 ಕೋಟಿ ಬಜೆಟ್ ನೊಂದಿಗೆ ಸಿನಿಮಾ ಮಾಡಲು ಮುಂದಾದ ಶಂಕರ್: ನಟ ಯಾರು ಗೊತ್ತೇ??

ಭಾರತ ಚಿತ್ರರಂಗದಲ್ಲಿ ಬಹಳ ಸದ್ದು ಮಾಡಿ, ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ಶಂಕರ್. ಇಂಡಿಯನ್, ಮುದಲ್ವನ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಇತ್ತೀಚಿಗೆ ಇವರ ಸಿನಿಮಾ ಅಷ್ಟೇನು ಸದ್ದು ಮಾಡಿಲ್ಲ, ಹಾಗಾಗಿ ಶಂಕರ್ ಅವರು ಕಂಬ್ಯಾಕ್ ಮಾಡುವ ಪ್ಲಾನ್ ನಲ್ಲಿದ್ದಾರೆ. ಸಧ್ಯಕ್ಕೆ ಎರಡು ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ ನಟ ಶಂಕರ್. ನಟ ರಾಮ್ ಚರಣ್ ತೇಜ್ ಅವರ 15ನೇ ಸಿನಿಮಾವನ್ನು ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ, ಬಹುನಿರೀಕ್ಷಿತ ಇಂಡಿಯನ್2 ಸಿನಿಮಾ ಕೂಡ ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆ ಶಂಕರ್ ಅವರು ಮತ್ತೊಂದು ಅತಿದೊಡ್ಡ ಪ್ರಾಜೆಕ್ಟ್ ಮಾಡುತ್ತಾರೆ ಎನ್ನಲಾಗಿದೆ, ಈ ಸಿನಿಮಾದ ಬಜೆಟ್ ಸುಮಾರು 1000 ಕೋಟಿ ಇರುತ್ತದೆ ಎಂದು ಸಹ ಹೇಳಲಾಗುತ್ತಿದೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿರಲಿದೆಯಂತೆ. ತಮಿಳು ಸಾಹಿತಿ ವೆಂಕಟೇಶನ್ ಅವರು ಬರೆದಿರುವ ವೇಲ್ ಪರಿ ಎನ್ನುವ ಕಾದಂಬರಿ ಆಧಾರಿತ ಸಿನಿಮಾ ಆಗಿರಲಿದ್ದು, ಇದೊಂದು ಐತಿಹಾಸಿಕ ಸಿನಿಮಾ ಆಗಿರಲಿದೆ, ರಾಜ ವೇಲ್ ಪರಿ ಅವರ ಕಥೆಯನ್ನು ಹೊಂದಿರಲಿದೆಯಂತೆ.

ಈ ಸಿನಿಮಾಗೆ ಖ್ಯಾತ ನಟ ಸೂರ್ಯ ನಾಯಕ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಸೂರ್ಯ ಅವರ 42ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತಿಚೆಗೆ ಬಿಡುಗಡೆ ಆಯಿತು, 10 ಭಾಷೆಗಳಲ್ಲಿ 3ಡಿ ಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆಯಂತೆ. ಇದರ ಬೆನ್ನಲ್ಲೇ ಈಗ ಶಂಕರ್ ಅವರ ಜೊತೆಗಿನ ಪ್ರಾಜೆಕ್ಟ್ ಜೋರಾಗಿಯೇ ಸದ್ದು ಮಾಡುತ್ತಿದೆ, ಆಗಿನ ಕಾಲಘಟ್ಟವನ್ನು ಮರುಸೃಷ್ಟಿ ಮಾಡಬೇಕಿರುವ ಕಾರಣ, 1000 ಕೋಟಿ ಬಜೆಟ್ ಆಗಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಾಜೆಕ್ಟ್ ಮೇಲೆ ಎಲ್ಲರ ಕಣ್ಣು ಇದ್ದು, ಈ ಸಿನಿಮಾ ಸೆಟ್ಟೇರುವುದು ಯಾವಾಗ, ಹೇಗೆ ಮೂಡಿ ಬರುತ್ತದೆ ಎಂದು ಕಾದು ನೋಡಬೇಕಿದೆ.