ಅದೊಂದು ಕಾರಣದಿಂದ ತುಸು ಬಚಾವ್ ಆದ ರಶ್ಮಿಕಾ: ಬುದ್ದಿವಂತಿಕೆಯಿಂದ ನಿರ್ಧಾರ ತೆಗೆದುಕೊಂಡು ಸಿನಿ ಜೀವನ ಉಳಿಸಿಕೊಂಡಿದ್ದು ಹೇಗೆ ಗೊತ್ತೇ??

ರಶ್ಮಿಕಾ ಮಂದಣ್ಣ ಸದ್ಯ ಭಾರತ ಚಿತ್ರರಂಗವನ್ನು ಆಳುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ತನಗೆ ಮತ್ತೊಬ್ಬ ಸ್ಪರ್ಧೆಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ರಶ್ಮಿಕಾ. ರಶ್ಮಿಕಾ ಅವರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ, ಟಾಪ್ ನಟಿಯಾಗಿ ಮುಂದುವರದಿದ್ದಾರೆ. ಪುಷ್ಪಾ ಸಿನಿಮಾ ಇಂದ ರಶ್ಮಿಕಾ ರಾಷ್ಟ್ರೀಯ ಕ್ರಶ್ ಆಗಿದ್ದಾರೆ. ಆಕೆಗೆ ಬಾಲಿವುಡ್‌ ನಲ್ಲು ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ. ರಶ್ಮಿಕಾ, ಬ್ಯುಸಿಯಾಗಿದ್ದು, ನಿರ್ದೇಶಕರು, ನಿರ್ಮಾಪಕರು ಆಕೆಯ ಡೇಟ್ಸ್‌ ಗಾಗಿ ಕಾಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಟಿ ರಶ್ಮಿಕಾ ಮೊದಲು ಪ್ರೀತಿಸಿದ್ದು ಕನ್ನಡ ನಟ ರಕ್ಷಿತ್ ಶೆಟ್ಟಿ ಅವರನ್ನು. ನಂತರ ಇಬ್ಬರು ಮದುವೆಯಾಗಲು ಬಯಸಿದ್ದರು. ಬಳಿಕ ಇವರಿಬ್ಬರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯಿತು. ನಂತರ ರಶ್ಮಿಕಾ ಅವರಿಗೆ ತೆಲುಗಿನಲ್ಲಿ ಚಲೋ ಎಂಬ ಚಿತ್ರ ಆಫರ್ ಬಂದಿತು,, ಆ ಸಿನಿಮಾ ಸೂಪರ್ ಹಿಟ್ ಆದ ನಂತರ ರಶ್ಮಿಕಾ ಹಿಂದಿರುಗಿ ನೋಡಲೇ ಇಲ್ಲ. ಬಳಿಕ ರಶ್ಮಿಕಾ ತಮ್ಮ ನಿಶ್ಚಿತಾರ್ಥ ರದ್ದುಗೊಳಿಸಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ನಂತರ ವಿಜಯ್ ದೇವರಕೊಂಡ ಜೊತೆಗಿನ ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಮತ್ತು ಭೀಷ್ಮ ಮುಂತಾದ ಸಿನಿಮಾಗಳು ಹಿಟ್‌ ಆದನಂತರ, ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡರು.ಸುಕುಮಾರ್ ಅವರು ಪುಷ್ಪ ಸಿನಿಮಾ ನಿರ್ದೇಶಿಸಿದರು.

ಇದು ರಶ್ಮಿಕಾ ಅವರ ಯಶಸ್ಸಿನಲ್ಲಿ ತಡೆಯಲಾಗದಂತೆ ಮಾಡಿತು. ಇನ್ನೊಂದೆಡೆ ಎಲ್ಲೂ ಫ್ಲಾಪ್ ನೀಡದೆ ಸಿನಿಮಾ ಮಾಡುತ್ತಲೇ ಇರುವ ರಶ್ಮಿಕಾ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಾತ್ರವಲ್ಲದೆ, ಬೇರೆ ಮುಖ್ಯ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಈಗ ರಶ್ಮಿಕಾ ಅವರು ಪುಷ್ಪಾ ಕ್ರೇಜ್‌ ಇಂದ ನ್ಯಾಷನಲ್ ಕ್ರಶ್ ಆಗಿದ್ದಾರೆ. ಛಲೋ ಸಿನಿಮಾ ನಂತರ ಹೆಚ್ಚಿನ ಅವಕಾಶಗಳು ಬಂದ ಹಿನ್ನಲೆಯಲ್ಲಿ ಇದೀಗ ಆಕೆಯನ್ನು ಮದುವೆಯಾಗುವ ನಿಶ್ಚಿತಾರ್ಥವನ್ನೇ ರದ್ದುಗೊಳಿಸಿದರು. ಆ ಜಾಣತನದಿಂದಲೇ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು. ಆ ಸಮಯದಲ್ಲಿ ರಶ್ಮಿಕಾ ಸಿನಿಮಾ ಕೆರಿಯರ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.