ಆರ್ಸಿಬಿ ತಂಡ ಎಬಿಡಿ ರವರನ್ನು ಬೋಲ್ಡ್ ಮಾಡಿದಕ್ಕಾಗಿ ಧೋನಿ ನನಗೆ ಬೈದಿದ್ದರು ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಚೆನ್ನೈ ಆಟಗಾರ. ಧೋನಿ ಹಾಗೆ ಮಾಡಿದ್ದು ಯಾಕೆ ಅಂತೇ ಗೊತ್ತೇ?

ಸಿ.ಎಸ್.ಕೆ ತಂಡದ ಮಾಜಿ ಬೌಲರ್ ಈಶ್ವರ್ ಪಾಂಡೆ ಅವರು ಈಗ ಎಲ್ಲಾ ಮಾದರಿಯ ಕ್ರಿಕೆಟ್ ಇಂದ ನಿವೃತ್ತಿ ಘೋಷಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಿವೃತ್ತಿ ಘೋಷಿಸಿ, ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ ಮೇಲೆ ಆರೋಪ ಹೊರಿಸಿದ್ದರು. ಧೋನಿ ಅವರು ಭಾರತ ತಂಡದಲ್ಲಿ ತಮಗೆ ಸರಿಯಾದ ಅವಕಾಶ ಕೊಡಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದೇ ರೀತಿ ಈಗ ಧೋನಿ ಅವರ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

ಐಪಿಎಲ್ ಸಮಯದಲ್ಲಿ ಈಶ್ವರ್ ಪಾಂಡೆ ಅವರು ಯಾರ್ಕರ್ ಬಾಲ್ ಹಾಕಿ, ಆರ್.ಸಿ.ಬಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿಡಿ ಅವರನ್ನು ಔಟ್ ಮಾಡಿದಾಗ, ಧೋನಿ ಅವರು ಬೈದಿದ್ದರಂತೆ. ಆ ಘಟನೆ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ ಈಶ್ವರ್ ಪಾಂಡೆ. 2015ರ, ಐಪಿಎಲ್ ನ 37ನೇ ಪಂದ್ಯದಲ್ಲಿ ಸಿ.ಎಸ್.ಕೆ ತಂಡ 148 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಸಿ.ಎಸ್.ಕೆ ಈ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ಬೌಲಿಂಗ್ ಮಾಡಲು ಈಶ್ವರ್ ಪಾಂಡೆ ಅವರನ್ನು ಕಳಿಸುವಾಗ, ಚೆನ್ನಾಗಿ ಬೌಲಿಂಗ್ ಮಾಡಿ ಯಾರ್ಕರ್ ಹಾಕಬೇಡಿ ಎಂದು ಧೋನಿ ಅವರು ಹೇಳಿದ್ದರಂತೆ.

ಮೊದಲ ನಾಲ್ಕು ಬಾಲ್ ಡಾಟ್ ಬಾಲ್ಸ್ ಹಾಕಿದ ಬಳಿಕ, ಐದನೇ ಬಾಲ್ ನಲ್ಲಿ ಎಬಿಡಿ ಬೌಂಡರಿ ಭಾರಿಸಿದರಂತೆ, ಕೊನೆಯ ಬಾಲ್ ನಲ್ಲಿ ಯಾರ್ಕರ್ ಹಾಕಿದಾಗ, ಎಬಿಡಿ ಅವರು ಹೊಡೆಯುವ ಯತ್ನದಲ್ಲಿ ಔಟ್ ಆದರು. ಒಂದೇ ಬಾಲ್ ಗೆ ಎಬಿಡಿ ಅವರು ಔಟ್ ಆದರಂತೆ. ಆಗ ಧೋನಿ ಅವರು ಈಶ್ವರ್ ಪಾಂಡೆ ಅವರ ಬಳಿ ಬಂದು, ಯಾರ್ಕರ್ ಹಾಕಬೇಡಿ ಎಂದು ಹೇಳಿದ್ದೆ ಅಲ್ವಾ, ಎಂದು ಹೇಳಿ.. ಆಗೇ ಸೆ ಧ್ಯಾನ್ ರಖ್ ನಾ (ಇನ್ನುಮುಂದೆ ಗಮನ ಇಟ್ಟು ಬೌಲಿಂಗ್ ಮಾಡಿ..) ಎಂದು ಹೇಳಿದರಂತೆ. ಈ ಘಟನೆಯ ನೆನಪು ಮಾಡಿಕೊಂಡಿದ್ದಾರೆ ಈಶ್ವರ್ ಪಾಂಡೆ.