ಸುನಿಲ್ ರವರು ದಿಡೀರ್ ಎಂದು ಕೆಂಡಸಂಪಿಗೆ ಧಾರವಾಹಿ ಬಿಡಲು ಕಾರಣ ಏನು ಗೊತ್ತೇ?? ಕೊನೆಗೂ ತಿಳಿಯಿತು ಅಸಲಿ ಕಾರಣ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಹೊಸ ಸೀರಿಯಲ್ ಕೆಂಡಸಂಪಿಗೆ. ಅಕ್ಕ ಸುಮನಾ ಹಾಗೂ ತಮ್ಮ ರಾಜೇಶ್ ಪಾತ್ರ ಈ ಧಾರಾವಾಹಿಯ ಮುಖ್ಯ ಪಾತ್ರಗಳಾಗಿತ್ತು, ಅಕ್ಕ ತಮ್ಮನ ನಡುವಿನ ಬಾಂಧವ್ಯದ ಮೇಲೆ ಈ ಕಥೆ ಸಾಗುತ್ತಿತ್ತು, ಆದರೆ ಇದೀಗ ರಾಜೇಶ್ ಪಾತ್ರವನ್ನು ಧಾರವಾಹಿಯಲ್ಲಿ ಮುಗಿಸಲಾಗುತ್ತಿದೆ ಎನ್ನುವುದು ಈಗಿನ ಎಪಿಸೋಡ್ ಗಳಲ್ಲಿ ಗೊತ್ತಾಗುತ್ತಿದೆ. ರಾಜೇಶ್ ಪಾತ್ರ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ಮಾಡುವ ಹಾಗೆ ತೋರಿಸಲಾಗಿತ್ತು, ಕೊನೆಗೆ ರಾಜೇಶ್ ಇನ್ನಿಲ್ಲ ಎಂದು ಹೇಳಲಾಯಿತು. ಈಗಷ್ಟೇ ಶುರುವಾಗಿದ್ದ ಧಾರವಾಹಿಯಲ್ಲಿ ಮುಖ್ಯಪಾತ್ರವನ್ನೇ ಮುಗಿಸಿದ್ದಕ್ಕೆ ಕಾರಣ ಏನು ಎಂದು ಕಿರುತೆರೆ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ.

ರಾಜೇಶ್ ಪಾತ್ರದಲ್ಲಿ ನಟಿಸಿದ್ದು ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಕ್ರಿಯರಾಗಿದ್ದ ನಟ ಸುನೀಲ್. ಶನಿ ಧಾರವಾಹಿಯಲ್ಲಿ ಶನಿದೇವನ ಪಾತ್ರದ ಮೂಲಕ ಅದ್ಭುತವಾಗಿ ನಟಿಸಿ, ಕಿರುತೆರೆಯಲ್ಲಿ ಮನೆಮಾತಾಗಿದ್ದರು ಸುನೀಲ್. ಇದಾದ ಬಳಿಕ ಡ್ಯಾನ್ಸಿಂಗ್ ಸ್ಟಾರ್ ಶೋನಲ್ಲಿ ಸಹ ಭಾಗವಹಿಸಿ ಒಳ್ಳೆಯ ಸಕತ್ತಾಗಿ ಡ್ಯಾನ್ಸ್ ಮಾಡಿದ್ದರು. ಅದಾದ ಬಳಿಕ ಸುನೀಲ್ ಅವರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ಕೆಂಡ ಸಂಪಿಗೆ ಧಾರವಾಹಿ ಮೂಲಕ ಸುನೀಲ್ ಅವರಿಗೆ ಅವಕಾಶ ಸಿಕ್ಕಿ ರಾಜೇಶ್ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇವರ ಪಾತ್ರ ಮುಗಿಸಲು ಸಹ ಒಂದು ಕಾರಣ ತಿಳಿದುಬಂದಿದೆ. ರಾಜೇಶ್ ಅವರಿಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿರುವ ಕಾರಣ ಕೆಂಡಸಂಪಿಗೆ ಧಾರವಾಹಿಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ಸುನೀಲ್ ಅವರು ಧಾರವಾಹಿಯಿಂದ ಹೊರಹೋಗಬೇಕಿದ್ದ ಕಾರಣ, ಅವರ ಬದಲಾಗಿ ಮತ್ತೊಬ್ಬ ನಟನನ್ನು ಬದಲಿಸುವ ಹೊರತು, ಆ ಪಾತ್ರವನ್ನೇ ಕೊನೆಗೊಳಿಸಿ ಧಾರವಾಹಿಗೆ ಹೊಸ ಟ್ವಿಸ್ಟ್ ನೀಡಲಾಗಿದೆ. ಇನ್ನು ಸುನೀಲ್ ಅವರು ಬ್ಯುಸಿ ಆಗಿರುವುದಾದರು ಯಾವ ಕಾರಣಕ್ಕೆ ಎನ್ನುವ ಪ್ರಶ್ನೆ ಈಗ ಶುರುವಾಗಿದೆ, ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟಪಟ್ಟು ಆಶ್ರಮದಲ್ಲಿ ಬೆಳೆದ ಸುನೀಲ್ ಅವರಿಗೆ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆ ಇದೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗುತ್ತಿದ್ದು, ಬಿಗ್ ಬಾಸ್ ಮನೆಗೆ ಹೋಗಲು ಸುನೀಲ್ ಅವರಿಗೆ ಆಫರ್ ಬಂದಿರುವ ಕಾರಣ, ಬಿಗ್ ಬಾಸ್ ಶೋ ಇನ್ನು ದೊಡ್ಡ ವೇದಿಕೆ ಆಗಿರುವುದರಿಂದ ಸುನೀಲ್ ಅವರು ಕೆಂಡಸಂಪಿಗೆ ಧಾರವಾಹಿಯಿಂದ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಸುನೀಲ್ ಅವರು ಎಲ್ಲರನ್ನು ಹೇಗೆ ರಂಜಿಸುತ್ತಾರೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು.