ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಲ್ಲೂ ಅರ್ಜುನ್ ಹಾಗೂ ಯಶ್ ಎದುರುರಾಗದ ಏನು ಮಾಡಿದರು ಗೊತ್ತೇ?? ಅಲ್ಲೂ ಮಾಡಿದ್ದು ಫುಲ್ ವೈರಲ್ .

ನಮ್ಮ ಕನ್ನಡ ಚಿತ್ರರಂಗದ ಕಡೆಗೆ ಇಡೀ ವಿಶ್ವ ತಿರುಗಿ ನೋಡುವ ಹಾಗೆ ಮಾಡಿದ ಸಿನಿಮಾ ಕೆಜಿಎಫ್. ಈ ಸಿನಿಮಾ ಇಂದ ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಇದಕ್ಕೆ ಮುಖ್ಯ ಕಾರಣ ನಟ ಯಶ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೆಪ್ಟೆಂಬರ್ 10 ಮತ್ತು 11ರಂದು ಸೈಮಾ ಅವಾರ್ಡ್ಸ್ ಶೋ ಬೆಂಗಳೂರು ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಅದ್ಧೂರಿಯಾಗಿ ನಡೆಯಿತು.

ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ನ ಅನೇಕ ಗಣ್ಯರು ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದರು. ನಟ ಕಮಲ್ ಹಾಸನ್, ಅಲ್ಲು ಅರ್ಜುನ್, ಶಿವಕಾರ್ತಿಕೆಯನ್, ನಟ ರಣವೀರ್ ಸಿಂಗ್, ಶಿವ ರಾಜ್ ಕುಮಾರ್, ದರ್ಶನ್, ಅಲ್ಲು ಅರ್ಜುನ್, ಅಭಿಷೇಕ್ ಅಂಬರೀಷ್ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಸೌತ್ ನಟಿಯರಾದ ಪೂಜಾ ಹೆಗ್ಡೆ, ಕೃತಿ ಶೆಟ್ಟಿ, ಸುಮಲತಾ ಅಂಬರೀಶ್, ಮಾಲಾಶ್ರೀ, ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಬಹಳಷ್ಟು ಕಲಾವಿದರು ತಂತ್ರಜ್ಞರು ಬಂದಿದ್ದರು.

ಈ ಶೋಗೆ ಬೇರೆ ಯಾವ ನಟ ನಟಿ ಬಂದಾಗಲೂ ಇರದಷ್ಟು ಕ್ರೇಜ್ ಕಾಣಿಸಿಕೊಂಡಿದ್ದು, ನಟ ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರೊಡನೆ ಬಂದಾಗ. ಯಶ್ ಅವರು ಬಂದ ತಕ್ಷಣವೇ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಇದನ್ನು ನೋಡಿ ಚಿತ್ರರಂಗದವರು ಶಾಕ್ ಆಗಿದ್ದಂತೂ ನಿಜ. ಅದೇ ಸಮಯದಲ್ಲಿ ಯಶ್ ಅವರು ಎಂಟ್ರಿ ಕೊಟ್ಟಾಗ, ನಟ ಅಲ್ಲು ಅರ್ಜುನ್ ಅವರು ಸಹ ಅಲ್ಲಿಯೇ ಇದ್ದರು. ಇವರಿಬ್ಬರು ತಮ್ಮ ಸ್ನೇಹ ವ್ಯಕ್ತಪಡಿಸಿದ್ದು ನೋಡಲು ಬಹಳ ಚೆನ್ನಾಗಿತ್ತು ಎಂದರೆ ತಪ್ಪಾಗುವುದಿಲ್ಲ.