ಎಲ್ಲರೂ ಪ್ರಶಾಂತ್ ನೀಲ್ ಬೇಕು ಎನ್ನುತ್ತಿದ್ದರೇ, ಪ್ರಶಾಂತ್ ಮಾತ್ರ ಆ ನಟನ ಹಿಂದೆ ಬಿದ್ದಿದ್ದಾರೆ, ಬೇಡ ಬೇಡ ಎಂದರು ಮನವೊಲಿಸುತ್ತಿದ್ದಾರೆ. ಯಾರು ಗೊತ್ತೆ??

ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಅವರು ಸ್ಟಾರ್ ಡೈರೆಕ್ಟರ್ ಎನ್ನಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಪ್ರಶಾಂತ್ ಬ್ಯುಸಿ ಆಗಿದ್ದಾರೆ. ಪ್ರಭಾಸ್ ಅವರೊಡನೆ ಸಲಾರ್ ಸಿನಿಮಾ ಮುಗಿದ ಬಳಿಕ ಜ್ಯೂನಿಯರ್ ಎನ್.ಟಿ.ಆರ್ ಅವರೊಡನೇ ಸಿನಿಮಾ ಮಾಡಲಿದ್ದಾರೆ, ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ ಎಂದು ತಿಳಿದುಬಂದಿದೆ. ಪ್ರಶಾಂತ್ ನೀಲ್ ಹಾಗು ಎನ್.ಟಿ.ಆರ್ ಕಾಂಬಿನೇಷನ್ ನ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ಭಾರಿ ಕ್ರೇಜ್ ಸೃಷ್ಟಿಸಿದೆ. ಜ್ಯೂನಿಯರ್ ಎನ್.ಟಿ.ಆರ್ ಅವರ ಹುಟ್ಟುಹಬ್ಬದ ದಿನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ವೈರಲ್ ಆಗಿತ್ತು.

ಈ ಸಿನಿಮಾದ ಮತ್ತೊಂದು ಪಾತ್ರ ಇದ್ದು, ಆ ಪಾತ್ರ ಸಿನಿಮಾದ ಹೈಲೈಟ್ ಆಗಿರಲಿದೆ. ಹಾಗಾಗಿ ಆ ಪಾತ್ರಕ್ಕಾಗಿ ಮತ್ತೊಬ್ಬ ಪವರ್ ಫುಲ್ ನಟನೆ ಬೇಕು ಎನ್ನುವ ಕಾರಣದಿಂದ ಪ್ರಶಾಂತ್ ನೀಲ್ ಅವರು ಕಾಲಿವುಡ್ ನ ಸ್ಟಾರ್ ನಟ ವಿಕ್ರಂ ಅವರನ್ನು ಈ ಸಿನಿಮಾಗೆ ಕರೆತರಬೇಕು ಎಂದು ವಿಕ್ರಂ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತಿದ್ದಾರಂತೆ. ವಿಕ್ರಂ ಅವರು ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಆದಿತ್ಯ ಕರಿಕಾಲನ್ ಪಾತ್ರ ನಿರ್ವಹಿಸಿ ಯಶಸ್ಸು ಪಡೆದಿದ್ದಾರೆ, ಈ ಸಿನಿಮಾ ಭಾರಿ ಸದ್ದು ಮತ್ತು ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಜ್ಯೂನಿಯರ್ ಎನ್.ಟಿ.ಆರ್ ಜೊತೆಗಿನ ಸಿನಿಮಾದಲ್ಲಿ ವಿಕ್ರಂ ಅವರ ಸಿನಿಮಾಗೆ ಅವರನ್ನು ಕರೆತರುವ ಪ್ಲಾನ್ ನಡೆಯುತ್ತಿದೆ..

ವಿಕ್ರಂ ಅವರಿಗೆ ತೆಲುಗಿನಲ್ಲಿ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಇದೆ. ಈಗಾಗಲೇ ಕೆಲವು ತೆಲುಗು ಸಿನಿಮಾಗಳಲ್ಲಿ ವಿಕ್ರಂ ನಟಿಸಿದ್ದಾರೆ. ಹಾಗಾಗಿ ವಿಕ್ರಂ ಅವರು ಎನ್.ಟಿ.ಆರ್ ಅವರೊಡನೆ ನಟಿಸಿದರೆ ಚೆನ್ನಾಗಿರುತ್ತದೆ ಎನ್ನಲಾಗಿದ್ದು, ವಿಕ್ರಂ ಅವರು ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಈ ಸಿನಿಮಾಗೆ ನಾಯಕಿ ಯಾರಾಗುತ್ತಾರೆ ಎನ್ನುವ ಚರ್ಚೆ ಸಹ ನಡೆಯುತ್ತಿದೆ, ನಾಯಕಿಯಾಗಿ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕಿಸಲಾಗಿದೆ ಎನ್ನುವ ಮಾಹಿತಿ ಸಹ ಸಿಕ್ಕಿದೆ. ಶೀಘ್ರದಲ್ಲೇ ಸಿನಿಮಾ ಟೈಟಲ್ ಬಿಡುಗಡೆ ಆಗುತ್ತದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಹೊಸ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಯಾವಾಗ ಸಿಗುತ್ತದೆ ಎಂದು ಕಾದು ನೋಡಬೇಕಿದೆ.