ಶಕ್ತಿಶಾಲಿ ಹುಣ್ಣಿಮೆಯ ದಿನ ಶುರುವಾಗಿದೆ ವಿಶೇಷ ಯೋಗ: ನಾಲ್ಕು ರಾಶಿಗಳಿಗೆ ಈ ಕ್ಷಣದಿಂದಲೇ ಅದೃಷ್ಟ ಶುರು: ಕಷ್ಟಗಳೆಲ್ಲ ಮಾಯ. ಯಾರಿಗೆ ಗೊತ್ತೇ??

ಅಶ್ವಿನಿ ಮಾಸದ ಶುಕ್ಲಪಕ್ಷದ ಸಮಯದಲ್ಲಿ ಬರುವ ಹುಣ್ಣಿಮೆಯನ್ನು ಶಾರದಿಯ ಹುಣ್ಣಿಮೆ ಅಥವಾ ಶೀಗೆ ಹುಣ್ಣಿಗೆ ಎಂದು ಕರೆಯಲಾಗುತ್ತದೆ. ಈ ಹುಣ್ಣಿಮೆಗೆ ಬಹಳ ಮಹತ್ವ ಇದೆ. ಈ ಹುಣ್ಣಿಮೆಯ ದಿನದಂದು ಗ್ರಹಗಳ ವಿಚಾರದಲ್ಲಿ ಒಂದು ಶುಭವಾದ ಕಾಕತಾಳೀಯ ಸೃಷ್ಟಿಯಾಗುತ್ತದೆ. ಈ ದಿನ ಚಂದ್ರ ಮತ್ತು ಗುರುದೇವನಿಂದಾಗಿ ಮೀನ ರಾಶಿಯಲ್ಲಿ ಗಜಕೇಸರಿ ಯೋಗ ಸೃಷ್ಟಿಯಾಗುತ್ತದೆ. ಈ ಯೋಗ ಅತ್ಯಂತ ಶುಭವಾದ ಯೋಗ ಆಗಿದ್ದು, ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವ ಇದೆ. ಈ ಯೋಗದಿಂದ 4 ರಾಶಿಗಳ ಮೇಲೆ ಭಾಗ್ಯದ ಪರಿಣಾಮ ಬೀರುತ್ತದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರ ಮಾತು ಮಧುರವಾಗಿರುತ್ತದೆ, ಮಕ್ಕಳಿಂದ ಶುಭ ಸುದ್ದಿ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗುತ್ತದೆ. ಒಡಹುಟ್ಟಿದವರಿಂದ ನಿಮ್ಮ ಬ್ಯುಸಿನೆಸ್ ಗೆ ಸಪೋರ್ಟ್ ಸಿಗುತ್ತದೆ. ಓದಿನ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ.

ಕನ್ಯಾ ರಾಶಿ :- ಈ ಸಮಯದಲ್ಲಿ ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ, ನಿಮ್ಮ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಸಹಾಯ ಪಡೆಯಬಹುದು. ನಿಮಗೆ ಲಾಭದ ಅವಕಾಶಗಳು ಹೆಚ್ಚಾಗಿರುತ್ತದೆ. ನಿಮ್ಮ ಆದಾಯ ಚೆನ್ನಾಗಿರುತ್ತದೆ, ನಿಮ್ಮ ಮಾತುಗಳ ಪ್ರಭಾವ ಸಹ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಸ್ನೇಹಿತರ ಬೆಂಬಲ ನಿಮಗೆ ಸಿಗುತ್ತದೆ.

ವೃಶ್ಚಿಕ ರಾಶಿ : ಓದುವ ಕಡೆಗೆ ನಿಮ್ಮ ಗಮನ ಹೆಚ್ಚಾಗುತ್ತದೆ. ನಿಮ್ಮ ಶೈಕ್ಷಣಿಕ ಭಾಗದಲ್ಲಿ ನಿಮ್ಮ ಕೆಲಸ ಚೆನ್ನಾಗಿರುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಸಂಬಂಧಿಕರ ಸಪೋರ್ಟ್ ಇಂದ ನಿಮ್ಮ ಬ್ಯುಸಿನೆಸ್ ನಲ್ಲಿ ಸುಧಾರಣೆ ಕಾಣುತ್ತೀರಿ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಮೀನ ರಾಶಿ :- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ, ಮನಸ್ಸಿಗೆ ಸಂತೋಷವಾಗುತ್ತದೆ. ಕೆಲಸದ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಸಿಗಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸ್ನೇಹಿತರ ಸಹಾಯವನ್ನು ನೀವು ಪಡೆಯಬಹುದು. ಧಾರ್ಮಿಕ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ತಂದೆ ತಾಯಿಯರ ಬೆಂಬಲ ಪಡೆಯುತ್ತೀರಿ.