ನಾಗ ಚೈತನ್ಯ ಅಮ್ಮ ಬಳಿ ವಿಚ್ಚೇದನಕ್ಕೆ ಕಾರಣ ಹೇಳಿದ ಸಮಂತಾ: ಚೈತನ್ಯ ಏನು ಮಾಡಿದ್ದನಂತೆ ಗೊತ್ತೇ? ನಾಗ್ ಇಂಗೆಲ್ಲ ಮಾಡಿದ್ದಾರಾ??

ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಭಾರಿ ಸುದ್ದಿಯಾಗುತ್ತಿದ್ದಾರೆ. ಇವರು ಏನೇ ಹೇಳಿಕೆ ಕೊಟ್ಟರು ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರು, ಜನರು ಅದರಲ್ಲಿ ಬೇರೆಯದೇ ಅರ್ಥವನ್ನು ಹುಡುಕುತ್ತಿದ್ದಾರೆ. ಇನ್ನು ಚೈತನ್ಯ ಸಮಂತಾ ವಿಚ್ಛೇದನಕ್ಕೆ ಕಾರಣ ಏನಿರಬಹುದು ಎನ್ನುವ ಚರ್ಚೆ ಇಂದಿಗೂ ಮುಂದುವರೆದಿದೆ. ಸಮಂತಾ ಚೈತನ್ಯ ಐದಾರು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾದವರು. ಬಹಳ ಸಂತೋಷದಿಂದ ಇದ್ದ ಈ ಜೋಡಿ ವಿಚ್ಛೇದನ ಪಡೆದದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕೇ ಇಲ್ಲ.

ಸಮಂತಾ ಚೈತನ್ಯ ಇಬ್ಬರು ಸಹ ಈಗ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದು, ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಅವರು ಬಾಲಿವುಡ್, ಹಾಲಿವುಡ್ ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾದ ಸ್ಪೆಷಲ್ ಹಾಡು ಸಮಂತಾ ಅವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು ಎಂದರೆ ತಪ್ಪಲ್ಲ. ಸಮಂತಾ ಅವರು ಕೆಲವು ದಿನಗಳಿಂದ ಎಲ್ಲಿಯೂ ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ, ಅವರ ಹೊಸ ಫೋಟೋಗಳು ಸಹ ಸಿಕ್ಕಿಲ್ಲ, ಹಾಗಾಗಿ ಸಮಂತಾ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಿದೆ, ಚರ್ಮ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿಗಳು ಕೇಳಿ ಬಂದಿದ್ದವು, ಆದರೆ ಸಮಂತಾ ಅವರ ಮ್ಯಾನೇಜರ್ ಅಪ್ಡೇಟ್ ನೀಡಿ ಅಂಥದೇನು ಆಗಿಲ್ಲ ಸ್ಯಾಮ್ ಚೆನ್ನಾಗಿದ್ದಾರೆ ಎಂದು ಹೇಳಿದ್ದರು.

ಇದೀಗ ಸಮಂತಾ ಅವರ ಬಗ್ಗೆ ಹೊಸದೊಂದು ಸುದ್ದಿ ಕೇಳಿ ಬರುತ್ತಿದೆ. ಅದೇನೆಂದರೆ, ಸಮಂತಾ ಅವರು ಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ಭೇಟಿ ಮಾಡಿ, ವಿಚ್ಛೇದನಕ್ಕೆ ಕಾರಣ ತಿಳಿಸಿದ್ದಾರಂಗೆ. “ನಿಮ್ಮ ಮಗ ನನಗೆ ತುಂಬಾ ಹಿಂಸೆ ಕೊಡುತ್ತಿದ್ದರು, ಅದಕ್ಕೆ ವಿಚ್ಛೇದನ ಕೊಟ್ಟೆ, ಮದುವೆ ನಂತರ ಬದಲಾದ ಚೈತು, ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು ಅದು ನನಗೆ ಇಷ್ಟ ಆಗುತ್ತಿರಲಿಲ್ಲ. ಮೊದಲಿದ್ದ ಹಾಗೆ ಚೈತು ಮದುವೆ ನಂತರ ಇರಲಿಲ್ಲ. ಇಂಥ ಬಟ್ಟೆ ಹಾಕಬೇಡ, ಇಂತಹವರ ಜೊತೆ ಮಾತನಾಡಬೇಡ ಎಂದು ನನ್ನ ಜೀವನವನ್ನ ಕಂಟ್ರೋಲ್ ಮಾಡುತ್ತಿದ್ದರು, ಅದರಿಂದ ನನ್ನ ಸ್ವಾತಂತ್ರ್ಯ ಹೋಯಿತು. ಎಷ್ಟೇ ದಿನಗಳ ಕಾಲ ನಾನು ಮಾತನಾಡಿಸದೆ ಇದ್ದರು ಸಹ ಚೈತು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಕ್ಕಿನೇನಿ ಕುಟುಂಬ ಸಹ ಅವರ ಪರವಾಗಿಯೇ ನಿಂತಿದ್ದರು..ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ವಿಚ್ಛೇದನ ಕೊಟ್ಟೆ..” ಎಂದು ಹೇಳಿದ್ದಾರಂತೆ ಸ್ಯಾಮ್. ಈ ಸುದ್ದಿ ಈಗ ಟಾಲಿವುಡ್ ನಲ್ಲಿ ವೈರಲ್ ಆಗುತ್ತಿದ್ದು, ಇದು ನಿಜವೋ ಸುಳ್ಳೋ ಗೊತ್ತಿಲ್ಲ.