ಹೆಂಡತಿಯ ಜೊತೆ ಜಗಳ ಆಡಿ ಪವಿತ್ರ ರವರನ್ನು ಪ್ರೀತಿ ಮಾಡಿದ್ದ ನರೇಶ್, ದೂರ ಹೋಗಲು ಕಾರಣ ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ??

ತೆಲುಗಿನ ಖ್ಯಾತ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಇಬ್ಬರು ರಿಲೇಶನ್ಷಿಪ್ ನಲ್ಲಿರುವ ವಿಚಾರ ಕೆಲವು ತಿಂಗಳುಗಳಿಂದ ಜೋರಾಗಿ ಸದ್ದು ಮಾಡುತ್ತಲೇ ಇದೆ. ನಟ ನರೇಶ್ ಅವರಿಗೆ ಎರಡು ಮದುವೆ ಆಗಿ ವಿಚ್ಛೇದನ ಪಡೆದು, ಬೆಂಗಳೂರು ಮೂಲದ ರಮ್ಯಾ ರಘುಪತಿ ಅವರನ್ನು ಪ್ರೀತಿಸಿ ಮೂರನೇ ಸಾರಿ ಮದುವೆಯಾದರು. ಆದರೆ ಅವರ ಜೊತೆಗೂ ಮನಸ್ತಾಪಗಳು ಶುರುವಾಗಿ, ಇಬ್ಬರು ಬೇರೆಯಾಗಿ, ನಂತರ ಪವಿತ್ರಾ ಲೋಕೇಶ್ ಅವರ ಜೊತೆಗೆ ಒಟ್ಟಿಗೆ ಇರಲು ಶುರು ಮಾಡಿದರು. ಇತ್ತ ಪವಿತ್ರಾ ಲೋಕೇಶ್ ಅವರು ಸಹ, ಗಂಡ ಸುಚೇಂದ್ರ ಪ್ರಸಾದ್ ಅವರಿಂದ ದೂರವಾಗಿದ್ದರು.

ಸುಚೇಂದ್ರ ಅವರೊಡನೆ ವಿಚ್ಛೇದನ ಪಡೆಯುವ ಮೊದಲೇ, ನರೇಶ್ ಅವರೊಡನೆ ಇರಲು ಶುರು ಮಾಡಿದ್ದರು ಪವಿತ್ರಾ. ತೆಲುಗಿನ ಹಲವು ಸಿನಿಮಾಗಳು ಮತ್ತು ಧಾರವಾಹಿಗಳಲ್ಲಿ ನರೇಶ್ ಮತ್ತು ಪವಿತ್ರಾ ಜೋಡಿ ನಟಿಸಿದ್ದಾರೆ. ಆಗಿನಿಂದ ಇಬ್ಬರ ನಡುಗೆ ಸ್ನೇಹ ಆತ್ಮೀಯತೆ ಬೆಳೆದು, ಇಬ್ಬರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದರು. ಈ ವಿಚಾರ ಎಲ್ಲಿಯೂ ಹೊರಬಂದಿರಲಿಲ್ಲ. ಇದೆಲ್ಲವು ದೊಡ್ಡದಾಗಿದ್ದು ರಮ್ಯಾ ರಘುಪತಿ ಅವರು ಈ ವಿಚಾರಕ್ಕೆ ಎಂಟ್ರಿ ಕೊಟ್ಟು, ತಾವು ನರೇಶ್ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎಂದು ಹೇಳಿದ ಬಳಿಕ, ಈ ವಿಚಾರ ಭಾರಿ ಸುದ್ದಿಯಾಗಿತ್ತು. ಮೀಡಿಯಾ ಮುಂದೆ ದೊಡ್ಡ ಡ್ರಾಮಾ ನಡೆದಿತ್ತು, ನರೇಶ್ ಹಾಗು ಪವಿತ್ರಾ ಇಬ್ಬರು ಸಹ ಸ್ಪಷ್ಟನೆಗಳನ್ನು ನೀಡಿದ್ದರು.

ಆದರೆ ಈಗ ನರೇಶ್ ಹಾಗು ಪವಿತ್ರಾ ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತು ಕೇಳಿರುತ್ತಿದೆ. ನರೇಶ್ ಅವರು ಮತ್ತೊಬ್ಬ ನಟಿಯ ಪ್ರೀತಿಯಲ್ಲಿ ಬಿದ್ದಿದ್ದು ಪವಿತ್ರಾ ಅವರನ್ನು ಕಡೆಗಣಿಸುತ್ತಿದ್ದಾರಂತೆ. ಇವರಿಬ್ಬರು ಜೊತೆಯಲ್ಲಿ ಇದ್ದದ್ದು ಕಾಂಟ್ರ್ಯಾಕ್ಟ್ ಇಂದ. ಕಾಂಟ್ರ್ಯಾಕ್ಟ್ ಪ್ರಕಾರ ಪ್ರತಿ ತಿಂಗಳು ಪವಿತ್ರಾ ಅವರಿಗೆ ನರೇಶ್ ಅವರು 25 ಲಕ್ಷ ರೂಪಾಯಿ ಲಕ್ಷ ರೂಪಾಯಿ ಕೊಡಬೇಕಿತ್ತು, ಒಂದು ವೇಳೆ ಸಂಬಂಧ ಮುರಿದರೆ 50 ಕೋಟಿ ಪರಿಹಾರ ಕೊಡಬೇಕಿತ್ತು. ಆದರೆ ಈಗ ಬೇರೆ ಹುಡುಗಿಯ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿರುವ ನರೇಶ್, ಪವಿತ್ರಾ ಅವರಿಗೆ ಪರಿಹಾರ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ಪವಿತ್ರಾ ಹಾಗೂ ನರೇಶ್ ಸಂಬಂಧ ಮುರಿದು ಬಿದ್ದಿದೆ ಎನ್ನುವ ಸುದ್ದಿಗಳು ಟಾಲಿವುಡ್ ನಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರದ ಬಗ್ಗೆ ಇವರಿಬ್ಬರು ಸ್ಪಷ್ಟನೆ ಕೊಡಬೇಕಿದೆ.