ಹೆಚ್ಚು ದಿನ ಬೇಡವೇ ಬೇಡ, ದೀಪಾವಳಿ ಮುಗಿಯುವ ವರೆಗೂ ಅಷ್ಟೇ ನಿಮ್ಮ ಕಷ್ಟ. ಆಮೇಲೆ ಮುಗಿಯಲಿದೆ ಈ ರಾಶಿಗಳ ಕಷ್ಟ. ಯಾವ ರಾಶಿಗಳಿಗೆ ಅದೃಷ್ಟದ ಸಮಯ ಗೊತ್ತೇ?

ದೀಪಾವಳಿ ಹಬ್ಬ ಇನ್ನೇನು ಸಮೀಪವಾಗುತ್ತಿದೆ. ಈ ಸಮಯದಲ್ಲೂ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ನಿಮಗೆ ವಿಶೇಷಫಲ ಲಭಿಸುತ್ತದೆ. ದೇವರ ಕೃಪೆಯ ಜೊತೆಗೆ ಗ್ರಹಗಳ ಸ್ಥಾನ ಬದಲಾವಣೆಗಳು ಕೂಡ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಗ್ರಹಗಳು ಸಹ ಸ್ಥಾನ ಬದಲಾವಣೆ ಮಾಡಲು ನಿರ್ಧಿಷ್ಟ ಸಮಯ ತೆಗೆದುಕೊಳ್ಳುತ್ತದೆ. ದೀಪಾವಳಿ ಹಬ್ಬ ಮುಗಿದ ಬಳಿಕ ಬುಧ ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಲಿದೆ.

ಅಕ್ಟೋಬರ್ 26ರಂದು ಬುಧ ಗ್ರಹದ ಸ್ಥಾನ ಬದಲಾವಣೆ ಆಗಿ, ಬುಧ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದಾಗಿ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀರುತ್ತದೆ, ವಿಶೇಷವಾಗಿ ನಾಲ್ಕು ರಾಶಿಗಳ ಮೇಲೆ ಶುಭ ಪರಿಣಾಮ ಬೀರಲಿದ್ದು, ಆ ನಾಲ್ಕು ರಾಶಿಗಳು ಯಾವುವು, ಅವುಗಳ ಮೇಲೆ ಬೀರುವ ಪರಿಣಾಮಗಳು ಹೇಗಿರುತ್ತದೆ? ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಬುಧಗ್ರಹದ ಸ್ಥಾನ ಬದಲಾವಣೆ ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ಆ ರಾಶಿಗಳಲ್ಲಿ ಒಂದು ಮಕರ ರಾಶಿ. ಬುಧನ ಸ್ಥಾನ ಬದಲಾವಣೆ ಇಂದ ಮಕರ ರಾಶಿಯವರಿಗೆ ಹಣ ಬರುವಿಕೆಯ ಮೂಲಗಳು ಹೆಚ್ಚಾಗುತ್ತದೆ. ಉದ್ಯೋಗದಿಂದಾಗಿ ಪ್ರಯಾಣ ಮಾಡುವ ಅವಕಾಶ ಬರುತ್ತದೆ. ಮುಂದಿನ ದಿನಗಳಲ್ಲಿ ವಿತ್ತೀಯ ಲಾಭವಾಗುತ್ತದೆ.

ಧನು ರಾಶಿ :- ಬುಧಗ್ರಹ ಸ್ಥಾನ ಬದಲಾವಣೆ ಮಾಡಿ ತುಲಾ ರಾಶಿಗೆ ಬರುವುದರಿಂದ, ಧನು ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಲಾಭವಾಗುತ್ತದೆ. ಜೊತೆಗೆ ಹೆಚ್ಚು ಮೂಲಗಳಿಂದ ಆದಾಯ ಬರುತ್ತದೆ. ಈ ಸಮಯದಲ್ಲಿ ನೀವು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಪ್ರೀತಿ ಮಾಡುತ್ತಿರುವವರಿಗೆ ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವವರ ವೃತ್ತಿಯಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ, ನೀಲಿಮಣಿ ಧರಿಸುವುದರಿಂದ ನಿಮಗೆ ಶುಭವಾಗುತ್ತದೆ.

ಕುಂಭ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ, ಕುಂಭ ರಾಶಿಯವರಿಗೆ ಮಂಗಳಕರ ಸಮಯ ಶುರುವಾಗಲಿದೆ. ನಿಮಗೆ ಹಣಕಾಸಿನ ವಿಚಾರದಲ್ಲಿ ಲಭ್ಯವಾಗುತ್ತದೆ., ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಕೆಲಸ ಸಿಗುತ್ತದೆ. ನಿಮ್ಮ ಮೇಲೆ ಹೊಸ ಜವಾಬ್ದಾರಿಗಳು ಬರುತ್ತವೆ.

ಕನ್ಯಾ ರಾಶಿ :- ಈ ರಾಶಿಯವರಿಗೆ ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಎಲ್ಲವೂ ಒಳ್ಳೆಯದಾಗುತ್ತದೆ. ಕನ್ಯಾ ರಾಶಿಯ ಎರಡನೇ ಮನೆಯಲ್ಲಿ ಬುಧ ಗ್ರಹದ ಸಂಚಾರ ಆಗುವುದರಿಂದ ದಿಢೀರ್ ಧನಲಾಭ ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಮಾರ್ಕೆಟಿಂಗ್ ಕ್ಷೇತ್ರಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಸಮಯ ಚೆನ್ನಾಗಿರುತ್ತದೆ.