Kannada News: ಗಂಧದಗುಡಿ ಸಿನಿಮಾ ಬಗ್ಗೆ ನಟ ಶಿವರಾಜಕುಮಾರ್ ಮೊದಲ ಬಾರಿಗೆ ಏನ್ ಹೇಳಿದ್ರು ನೋಡಿ??

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಪ್ರೀತಿಯಿಂದ ತಯಾರಿಸಿರುವ ಗಂಧದಗುಡಿ ಈ ಶುಕ್ರವಾರ ತೆರೆಕಂಡಿದೆ. ಗುರುವಾರ ಆಯೋಜಿಸಲಾಗಿದ್ದ ಪೇಯ್ಡ್ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ, ಶುಕ್ರವಾರದ ಟಿಕೆಟ್ ಗಳಿಗೆ ದಾಖಲೆಯ ಬುಕಿಂಗ್ ನಡೆದಿದೆ. ವೀಕೆಂಡ್ ನಲ್ಲೂ ಗಂಧದಗುಡಿ ಅಬ್ಬರವನ್ನು ನಿಲ್ಲಿಸಲು ಆಗುವುದಿಲ್ಲ ಎನ್ನುವುದು ಪಕ್ಕ ಆಗಿದೆ. ಗಂಧದಗುಡಿ ನೋಡಿದ ಸಿನಿಪ್ರಿಯರು ಭಾವುಕರಾಗಿದ್ದಾರೆ. ಅಪ್ಪು ಅವರು ಮನುಷ್ಯಕುಲಕ್ಕೆ ಒಂದು ಅದ್ಭುತ ಸಂದೇಶ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಸಹ ಗಂಧದಗುಡಿ ನೋಡಿ ಭಾವುಕರಾಗಿಗಿದ್ದಾರೆ..

ನಿನ್ನೆ ಬಿಡುಗಡೆ ದಿನ ಇಡೀ ದೊಡ್ಮನೆ ಕುಟುಂಬ ಥಿಯೇಟರ್ ಗೆ ಬಂದಿತ್ತು. ರಾಘಣ್ಣ ಅವರು ತಮ್ಮನ ನೆನಪಲ್ಲಿ ಭಾವುಕರಾಗಿ ಮಾತನಾಡಿದರು. ಶಿವಣ್ಣ ಅವರು ನಿನ್ನೆ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದ್ದು, ಶೋ ಬಳಿಕ ಏನು ಹೇಳಿದ್ದಾರೆ ಗೊತ್ತಾ? ಈಗ ತಿಳಿಸುತ್ತೇವೆ ನೋಡಿ.. “ಗಂಧದಗುಡಿ ಇದು ಅಪ್ಪುವಿನ ಕೊನೆಯ ಸಿನಿಮಾ ಅಲ್ಲ, ಇದು ಆರಂಭ.. ಅಪ್ಪಾಜಿ ಗಂಧದಗುಡಿ ಸಿನಿಮಾದಲ್ಲಿ ಪ್ರಕೃತಿಯ ಬಗ್ಗೆ ತಿಳಿಸಿದ್ದರು, ಆ ಸಿನಿಮಾ ಬಹಳಷ್ಟು ಜನರಿಗೆ ಪ್ರೇರಣೆಯಾಗಿತ್ತು. ನನ್ನ ಅದೃಷ್ಟ ನಾನು ಗಂಧದಗುಡಿ ಪಾರ್ಟ್ 2 ಮಾಡಿ, ಅಪ್ಪಾಜಿ ಜೊತೆಗೆ ನಟಿಸಿದೆ. ಈಗ ನಮ್ಮ ಪ್ರಕೃತಿಯಲ್ಲಿ ಅತಿವೃಷ್ಟಿ ಆಗುತ್ತಿದೆ. ಪ್ರಕೃತಿಯಲ್ಲಿ ಏರುಪೇರು ಆಗುತ್ತಿದೆ.

ಕಾಡಿನ ಪ್ರಮುಖ್ಯತೆ ಬಗ್ಗೆ ಅಪ್ಪು ತಿಳಿಸಿದ್ದಾರೆ. ಅಪ್ಪುವನ್ನು ನೋಡಲು ಅಭಿಮಾನಿಗಳು ಬರಬೇಕು. ಅಪ್ಪುಗೆ ಈ ರೀತಿಯಾಗಿ ಗೌರವ ಕೊಡಬೇಕು..” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಶಿವಣ್ಣ. ತಮ್ಮನ ಬಗ್ಗೆ ಶಿವಣ್ಣ ಆಡಿದ ಈ ಭಾವುಕ ನುಡಿ ಕೇಳಿ ಅಭಿಮಾನಿಗಳು ಸಹ ಬೇಸರಗೊಂಡರು. ಈ ದಿನ ಅಪ್ಪು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಗಂಧದಗುಡಿ ನೋಡಿದ ಪ್ರತಿ ಅಭಿಮಾನಿಗೂ ಅನ್ನಿಸದೆ ಇರದು. ಬಿಡುಗಡೆ ಹಿಂದಿನ ದಿನ ಮತ್ತು ಬಿಡುಗಡೆಯಾದ ಮೊದಲ ದಿನ ದಾಖಲೆ ಬರೆದಿರುವ ಗಂಧದಗುಡಿ, ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಮುಂದುವರೆಯುವುದು ಗ್ಯಾರಂಟಿ.

ashwini puneeth rajkumargandhadagudiGandhadagudi MovieGG-The Moviehatrick hero dr shivarajkumarKannada cinemakannada newskarnataka rathna dr puneeth rajkumarpower star puneeth rajkumarPuneeth Rajkumarsandalwoodshivarajkumar