ಅಪ್ಪು ಅವರು ಸದಾ ನಮ್ಮ ಜೊತೆಯಲ್ಲೇ ಇರುತ್ತಾರೆ ಎನ್ನುವುದು ಎಲ್ಲರ ನಂಬಿಕೆ. ಅಪ್ಪು ಅವರು ದೈಹಿಕವಾಗಿ ಈ ಪ್ರಪಂಚ ಬಿಟ್ಟು ಹೋಗಿ 1 ವರ್ಷ ಕಳೆಯಿತು. ಬಿಗ್ ಬಾಸ್ ಮನೆಯಲ್ಲಿ ಸಹ ಈ ದಿನ ಅಪ್ಪು ಅವರ ಸ್ಮರಣೆ ಮಾಡಲಾಗಿದೆ. ನಿನ್ನೆಯ ದಿನ ಬೊಂಬೆ ಹೇಳುತೈತೆ ಹಾಡನ್ನು ವೇಕಪ್ ಸಾಂಗ್ ಆಗಿ ಹಾಕಲಾಗಿತ್ತು, ಅಪ್ಪು ಅವರ ದೊಡ್ಡ ಭಾವಚಿತ್ರ ಮತ್ತು ಅದಕ್ಕೆ ಹೂವುಗಳನ್ನು ಇಡಲಾಗಿತ್ತು. ಮನೆಯ ಎಲ್ಲಾ ಸ್ಪರ್ಧಿಗಳು ಅಪ್ಪು ಅವರಿಗೆ ಪುಷ್ಪ ನಮನ ಸಲ್ಲಿಸಿ, ಅಪ್ಪು ಅವರ ಬಗ್ಗೆ ಎಲ್ಲರೂ ಮಾತನಾಡಿದರು. ಮೊದಲಿಗೆ ಅಪ್ಪು ಅವರಿಗೆ ಮೌನಾಚರಣೆ ಮಾಡಿ, ಸ್ಪರ್ಧಿಗಳು ಅಪ್ಪು ಅವರ ಬಗ್ಗೆ ಮಾತನಾಡಬೇಕು ಎನ್ನುವ ಪ್ಲಾನ್ ಮಾಡಲಾಗಿತ್ತು. ಆದರೆ ಕೊನೆಯ ಸಮಯದಲ್ಲಿ ಈ ಪ್ಲಾನ್ ಬದಲಾಯಿತು.
ಈ ಪ್ಲಾನ್ ಬದಲಾಯಿಸಿದ್ದು ಮತ್ಯಾರು ಅಲ್ಲ, ಕಿಚ್ಚ ಸುದೀಪ್ ಅವರೇ ಆಗಿದ್ದಾರೆ. ಸುದೀಪ್ ಅವರು ಅಪ್ಪು ಅವರ ಬಗ್ಗೆ ಒಂದು ಹಾಡನ್ನು ಬರೆದು, ವಿಶೇಷವಾಗಿ ನಮನ ಸಲ್ಲಿಸಬೇಕು ಎಂದು ರಾಕೇಶ್ ಅವರಿಗೆ ಸೂಚನೆ ನೀಡಿದರು. ಅದೇ ರೀತಿ ರಾಕೇಶ್ ಅವರು ಅಪ್ಪು ಅವರಿಗಾಗಿ ವಿಶೇಷವಾದ ಹಾಡೊಂದನ್ನು ಬರೆದರು.
“ದೀಪವೊಂದು ಆರಿ ಹೋಗಿ ವರುಷ ಆಗಿದೆ.. ಆರುವ ಮುನ್ನ ಎಷ್ಟೋ ಮನೆಯ ಬೆಳಗಿ ಹೋಗಿದೆ.. ಉತ್ತರ ಸಿಗದೆ ಪ್ರಶ್ನೆ ಒಂಟಿಯಾಗಿದೆ.. ಕಾರಣ ಹೇಳದೆ ಯಾಕೆ ತೆರಳಿದೆ.. ಮನಸ್ಸು ಭಾರವಾಗಿ ಇಂದು ಮೌನವಾಗಿದೆ.. ಹಳೆಯ ನೆನಪು ಬಳಿಗೆ ಬಂದು ಕಾಡತೊಡಗಿದೆ.. ಅಭಿಮಾನಿಗೆ ನೀವೇ ದೇವರು..
ಮನಸ್ಸಲ್ಲಿ ದೇವಾಲಯ ಕಟ್ಟಿಹರು.. ನೀವೆಂದೂ ಜೀವಂತ ದೂರಾದರೂ.. ನಿಮ್ಮ ಹೆಸರು ಮರೆಯಲ್ಲ ಮರೆಯಾದರು.. ನೀವಲ್ಲ ವ್ಯಕ್ತಿ ನೀವೊಂದು ಶಕ್ತಿ.. ಹೆಚ್ಚಾಗಿದೆ ನಮ್ಮ ಭಕ್ತಿ.. ಅಪ್ಪು ಅಪ್ಪು ವಿ ಮಿಸ್ ಯೂ ಅಪ್ಪು.. ಯಾಕೀ ಶಿಕ್ಷೆ ನಮ್ಮದ್ಯಾವ ತಪ್ಪು?..” ಎಂದು ರೂಪೇಶ್ ಶೆಟ್ಟಿ ಅವರು ಅಪ್ಪು ಅವರಿಗಾಗಿ ಹಾಡೊಂದನ್ನು ಬರೆದು ಹಾಡಿದರು. ಕಿಚ್ಚ ಸುದೀಪ್ ಅವರು ಸಹ ವೀಕೆಂಡ್ ಎಪಿಸೋಡ್ ಶುರುವಾಗುವ ಆರಂಭದಲ್ಲೇ ಅಪ್ಪು ಅವರ ಬಗ್ಗೆ ಮಾತನಾಡಿದರು, “ಅಪ್ಪು ಅವರು ನೆಮ್ಮೆಲ್ಲರಿಗೂ ಒಂದು ಸಿಹಿ ನೆನಪಾಗಬೇಕು. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋಗಿರಬಹುದು. ಆದರೆ, ನಾವು ಮೇಲೆ ಬಂದಿರುವ ಚಂದ್ರನನ್ನ ನೋಡಬೇಕು. ಎಷ್ಟೋ ವರ್ಷಗಳ ಗೆಳೆತನ, ಜೊತೆಯಾಗಿ ಮಾಡಿರುವ ಎಷ್ಟೋ ಕೆಲಸಗಳು, ಆಡಿದ ಮಾತುಗಳು, ಭೇಟಿ.. ಒಂದೊಂದರ ಹಿಂದೆ ಸಿಕ್ಕಾಪಟ್ಟೆ ನೆನಪುಗಳಿವೆ. ಅಪ್ಪು ಅವರು ಈಗಲೂ ಎಲ್ಲರ ಜೊತೆ ಇದ್ದಾರೆ. ದಾರಿ ಎಷ್ಟೇ ದೂರ ಇದ್ದರೂ ಜೊತೆಗಿರುವ ಆ ಚಂದ್ರನ ಥರ..” ಎಂದು ಹೇಳಿದರು ಕಿಚ್ಚ ಸುದೀಪ್.