Kannadathi: ಕನ್ನಡತಿಯಲ್ಲಿ ಮತ್ತೊಂದು ಟ್ವಿಸ್ಟ್: ಭುವಿ ಗೆ ವಿಲ್ ವಿಚಾರ ತಿಳಿದ ನಂತರ ಏನಾಗಲಿದೆ ಗೊತ್ತೇ? ಊಹಿಸದ ಟ್ವಿಸ್ಟ್ ಕೊಟ್ಟ ಕನ್ನಡತಿ.

Kannadathi: ಕನ್ನಡತಿ (Kannadathi) ಧಾರವಾಹಿಯಲ್ಲಿ ಈಗ ಹೊಸ ಟ್ವಿಸ್ಟ್ ಬಂದಿದೆ. ಅಮ್ಮಮ್ಮ ನಿಧನವಾದ ನಂತರ ಮನೆಯಲ್ಲಿ ಎಲ್ಲವೂ ಬೇಸರದಲ್ಲಿದೆ. ಈ ಸಮಯದಲ್ಲಿ ವರುಧಿನಿ ಮತ್ತು ಸಾನಿಯಾಗೆ ಬೇರೆ ರೀತಿಯ ಟೆನ್ಷನ್. ಭುವಿ ತಂಗಿ ಬಿಂದು ಜೊತೆಗೆ ವರುಧಿನಿ ಜಗಳ ಮಾಡಿಕೊಂಡಿದ್ದಳು, ಅದನ್ನು ಬಿಂದು ಅಕ್ಕನಿಗೆ ಹೇಳಿದ್ದಾಳೆ, ಇದರಿಂದ ಭುವಿಗೆ ಅನುಮಾನ ಬಂದು, ವರು ಹತ್ತಿರ ವಿಚಾರಿಸಿದಾಗ, ರತ್ನಮಾಲಾ ಅವರು ಫೈಲ್ ತರಲು ಹೇಳಿದಾಗ, ಭುವಿ ಮನೆಯಲ್ಲಿ ನಡೆದ ಘಟನೆ ಹೇಳಿದ್ದಾಳೆ ವರು. ಹರ್ಷ ಭುವಿ ಚೆನ್ನಾಗಿರುವುದು ವರುಗೆ ಇಷ್ಟವಾಗುತ್ತಿಲ್ಲೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದು, ಇಬ್ಬರನ್ನು ಬೇರೆ ಮಾಡಬೇಕು ಎಂದು ವರು ಪ್ಲಾನ್ ಮಾಡಿಕೊಂಡಿದ್ದಾಳೆ.

ವರು ವರ್ತನೆ ನೋಡಿ, ಭುವಿಗೆ ಅನುಮಾನ ಬಂದು ಆ ಲಕೋಟೆ ತೆಗೆದು ನೋಡಿದಾಗ, ವಿಲ್ ವಿಚಾರ ಭುವಿಗೆ ಗೊತ್ತಾಗಿದೆ, ಅಮ್ಮಮ್ಮ ಮತ್ತು ಭುವಿ ನಡುವೆ ಜವಾಬ್ದಾರಿಯ ಬಗ್ಗೆ ಹಲವು ಸಾರಿ ಮಾತುಕತೆ ನಡೆದಿತ್ತು, ಆಗ ಅಮ್ಮಮ್ಮ ಸಮಯ ಬಂದಾಗ ಅದನ್ನು ತೆಗೆದು ನೋಡಬೇಕು ಎಂದಿದ್ದರು. ಇದೀಗ ಭುವಿ ಲಕೋಟೆ ನೋಡಿ, ಅಮ್ಮಮ್ಮ ಇದ್ದಾಗಲೇ ಅದನ್ನು ತೆಗೆದು ನೋಡಬೇಕಿತ್ತು ಎಂದುಕೊಳ್ಳುತ್ತಿದ್ದಾಳೆ. ಅವರು ಇದ್ದಾಗ ತೆಗೆದಿದ್ದರೆ, ಹೀಗೆ ಯಾಕೆ ಮಾಡಿದ್ರಿ ಅಂತ ಕೇಳಬಹುದಿತ್ತು, ಈಗ ಕಾಲ ಮಿಂಚಿ ಹೋಗಿದೆ ಎಂದು ಮರುಗುತ್ತಿದ್ದಾಳೆ ಭುವಿ. ಇದನ್ನು ಓದಿ.. Rishab Shetty – Rashmika Mandanna : ರಶ್ಮಿಕಾ ರವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ. ಹೇಳಿದ್ದೇನು ಗೊತ್ತೇ?

ಇತ್ತ ವರು, ವಿಲ್ ವಿಚಾರವನ್ನು ಹರ್ಷನಿಗೆ ತನ್ನದೇ ರೀತಿಯಲ್ಲಿ ತಿಳಿಸಬೇಕು ಎಂದುಕೊಳ್ಳುತ್ತಿದ್ದಾಳೆ. ಅದರಿಂದ ಹರ್ಷಭುವಿ ದೂರಾಗಬೇಕು, ಆಸ್ತಿ ವಿಚಾರ ಗೊತ್ತಾದರೆ ಹರ್ಷ ಭುವಿ ದೂರವಾಗುತ್ತಾರೆ ಎಂದು ವರು ಪ್ಲಾನ್ ಮಾಡುತ್ತಿದ್ದಾಳೆ. ಆಸ್ತಿ ವಿಷಯ ಗೊತ್ತಾದರೆ ಹರ್ಷ ಹೇಗೆ ತೆಗೆದುಕೊಳ್ಳುತ್ತಾನೆ, ಭುವಿಯಿಂದ ದೂರ ಆಗುತ್ತಾನಾ ಎನ್ನುವ ಕುತೂಹಲ ಈಗ ಮನೆ ಮಾಡಿದೆ. ಜೊತೆಗೆ ವರುಧಿನಿ ಈಗ ಡ್ಯುಪ್ಲಿಕೇಟ್ ಸೌಪರ್ಣಿಕಳನ್ನು ಕರೆತಂದಿದ್ದು, ಅದರಿಂದ ಸಾನಿಯಾಗೆ ಹೊಸ ಟೆನ್ಷನ್ ಶುರುವಾಗಿದೆ. ರೋಚಕವಾಗಿ ಸಾಗುತ್ತಿರುವ ಕನ್ನಡತಿ ಕಥೆಯಲ್ಲಿ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada Astrology: ಈ ರಾಶಿಗಳು ಜೀವನದಲ್ಲಿ ಕೋಟ್ಯಧಿಪತಿಯಾಗುವುದು ಖಚಿತ: ಕುಬೇರನೇ ಬಂದು ನಿಮಗೆ ಹಣ ಕೊಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??