Lakshana: ದಿಡೀರ್ ಎಂದು ಟ್ವಿಸ್ಟ್ ಕೊಟ್ಟ ಲಕ್ಷಣ: ಮೌರ್ಯ ಪಾತ್ರವನ್ನೇ ಮುಗಿಸಿದ್ದು ಯಾಕೆ ಗೊತ್ತೆ?ಏನಾಗಲಿದೆ ಗೊತ್ತೇ ಮುಂದೆ?

Lakshana: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿ ಈಗ ಇನ್ನಷ್ಟು ರೋಚಕ ಹಂತವನ್ನು ತಲುಪಿದೆ. ನಕ್ಷತ್ರ ಗಂಡ ಭೂಪತಿಯ ತಮ್ಮ ಮೌರ್ಯನಿಗೆ ನಕ್ಷತ್ರ ಮಾತೃ ಚಂದ್ರಶೇಖರ್ ಕಂಡರೆ ಆಗುವುದಿಲ್ಲ, ಇಬ್ಬರನ್ನು ಮುಗಿಸಲು ಹಲವು ಸಾರಿ ಪ್ರಯತ್ನ ಮಾಡಿದ್ದಾನೆ ಮೌರ್ಯ. ಆದರೆ ಪ್ರತಿ ಸಲವು ನಕ್ಷತ್ರ ಮತ್ತು ಸಿಎಸ್ ಮೌರ್ಯನ ಪ್ಲಾನ್ ಇಂದ ತಪ್ಪಿಸಿಕೊಂಡಿದ್ದಾರೆ. ಇದೀಗ ಧಾರವಾಹಿಯಲ್ಲಿ ಖಡಕ್ ವಿಲ್ಲನ್ ಮೌರ್ಯನ ಪಾತ್ರವೇ ಮುಗಿಯುವ ಹಾಗೆ ಕಾಣುತ್ತಿದೆ.

ನಕ್ಷತ್ರಳನ್ನು ಮುಗಿಸಲು ಮೌರ್ಯ ಹೊಸ ಪ್ಲಾನ್ ಮಾಡಿದ್ದ, ಅದೇ ರೀತಿ ಶ್ವೇತಾ ನಕ್ಷತ್ರಳನ್ನು ಮೌರ್ಯನ ಬಳಿ ಕರೆದುಕೊಂಡು ಬಂದಿದ್ದಾಳೆ, ಆದರೆ ಮೌರ್ಯ ನಕ್ಷತ್ರಳನ್ನು ನೋಡುವ ಮೊದಲೇ, ಆಕೆಯನ್ನು ಕಿಡ್ನ್ಯಾಪ್ ಮಾಡಲಾಗಿತ್ತು, ನಕ್ಷತ್ರಳನ್ನು ಕಿಡ್ನ್ಯಾಪ್ ಮಾಡಿದ್ದು, ಸ್ವತಃ ಆಕೆಯ ತಂದೆ ಸಿಎಸ್. ಅಪ್ಪಾ ಯಾಕೆ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಖುದ್ದು ನಕ್ಷತ್ರ ಶಾಕ್ ಆಗಿದ್ದಾಳೆ. ಆದರೆ ಮೌರ್ಯನ ವಿರುದ್ಧ ಸಿಎಸ್ ಮಾಡಿರುವ ಪ್ಲಾನ್ ಇದಾಗಿದೆ. ಮೌರ್ಯನಿಗೆ ಬುದ್ಧಿ ಕಲಿಸೋದಕ್ಕೆ ಸಿಎಸ್ ಈ ಪ್ಲಾನ್ ಮಾಡಿದ್ದು, ನಕ್ಷತ್ರಾ ಇದ್ದ ಕಾರ್ ಹಿಂದೆ ಫಾಲೋ ಮಾಡಿಕೊಂಡು ಮೌರ್ಯ ಕೂಡ ಬಂದಿದ್ದಾನೆ. ಇದನ್ನು ಓದಿ..Kannada News: ಕೊನೆಗೂ ಮೊದಲ ಬಾರಿಗೆ ಮದುವೆ ಮುರಿದು ಬಿದ್ದ ಬಗ್ಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ. ಹೇಳಿದ್ದೇನು ಗೊತ್ತೇ?? ಕಾರಣ ಏನು ಗೊತ್ತೇ?

ಸಿಎಸ್ ಪ್ಲಾನ್ ಪ್ರಕಾರವೇ ಎಲ್ಲಾ ನಡೆದಿದ್ದು, ಅಲ್ಲಿಗೆ ಮೌರ್ಯ ಬಂದ ನಂತರ ಸಿಎಸ್ ಮೌರ್ಯನಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾನೆ, ನಿನ್ನನ್ನ ನಾನು ಕ್ಷಮಿಸಿರುವಷ್ಟು ಇನ್ಯಾರು ಕ್ಷಮಿಸಿಲ್ಲ. ನನ್ನ ಮಗಳ ವಿಚಾರಕ್ಕೆ ಬರುತ್ತೀಯಾ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ವಾರ್ನಿಂಗ್ ಕೊಟ್ಟಿರುವ ಸಿಎಸ್ ಗನ್ ಹಿಡಿದು ಮೌರ್ಯನನ್ನು ಮುಗಿಸಲು ನಿಂತಿದ್ದಾನೆ. ಮುಂದಿನ ಸಂಚಕೆಯಲ್ಲಿ ಮೌರ್ಯನ ಮೇಲೆ ಗುಂಡನ್ನು ಸಹ ಹಾರಿಸಿದ್ದು, ಅದನ್ನು ನೋಡಿ ಅಪ್ಪಾ ಮೌರ್ಯನ ಕೊಲೆ ಮಾಡಿದ್ರಾ ಎಂದು ನಕ್ಷತ್ರ ಶಾಕ್ ಆಗಿದ್ದಾಳೆ. ಇದೀಗ ನಿಜಕ್ಕೂ ಸಿಎಸ್ ಮೌರ್ಯನನ್ನು ಮುಗಿಸಿದ್ರಾ, ತಂದೆಯ ವಿರುದ್ಧವೆ ನಕ್ಷತ್ರ ಸಾಕ್ಷಿ ಹೇಳುತ್ತಾಳಾ ಎನ್ನುವ ಕುತೂಹಲ ಶುರುವಾಗಿದೆ. ಇದನ್ನು ಓದಿ.. Kannada News: ನಾನು ಪ್ರಭಾಸ್ ನನ್ನು ಮದುವೆಯಾಗಲು ಸಿದ್ದ ಎಂದ ಟಾಪ್ ನಟಿ, ಪ್ರಭಾಸ್ ಕೂಡ ಒಪ್ಪಿಕೊಳ್ಳುತ್ತಾರಾ?? ಆ ಸುಂದರಿ ಯಾರು ಗೊತ್ತೇ?