Kannada News: ದೈವದ ಕಡೆಯಿಂದ ರಿಷಬ್ ಶೆಟ್ಟಿ ಗೆ ಬಂತು ಎಚ್ಚರಿಕೆ; ಯಾಕೆ ಗೊತ್ತೇ? ಎಲ್ಲವೂ ಸುಸೂತ್ರವಾಗಿ ಇದ್ದಾಗ ರಿಷಬ್ ಮಾಡಿದ್ದೇನು ಗೊತ್ತೇ??

Kannada News: ಕಾಂತಾರ, ಈ ಸಿನಿಮಾ ದಿನದಿಂದ ಬೆಳೆಯುತ್ತಲೇ ಹೋಗುತ್ತಿದೆ ಹೊರತು, ಕಾಂತಾರ ಸಿನಿಮಾದ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಬಿಡುಗಡೆ ಆದ ದಿನದಿಂದ ಇಂದಿನವರೆಗೂ ಕಾಂತಾರ ಕ್ರೇಜ್ ಹೆಚ್ಚುತ್ತಲೆ ಇದೆ. ದಿನದಿಂದ ಸಿನಿಮಾ ನೋಡುವ ಸಿನಿಪ್ರಿಯರು ಜಾಸ್ತಿ ಆಗುತ್ತಲೇ ಇದ್ದಾರೆ. ನಮ್ಮ ಕನ್ನಡ ಸಿನಿಮಾಗೆ ವರ್ಲ್ಡ್ ವೈಡ್ ರೆಕಗ್ನಿಶನ್ ಸಿಗುತ್ತಿರುವುದು ಕನ್ನಡಿಗರಾಗಿ ನಮಗೆ ಹೆಮ್ಮೆ ತರುವ ವಿಷಯ ಆಗಿದೆ. ಕನ್ನಡದ ಕಾಂತಾರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಡಬ್ ಆಗಿ, ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಾಣುತ್ತಿದೆ. 50 ದಿನ ಪೂರೈಸಿದರು ಕಾಂತಾರ ಹವಾ ಕಡಿಮೆ ಆಗಿಲ್ಲ.

ಸಿನಿಮಾ 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಲು ಮುಖ್ಯ ಕಾರಣ ದೈವದ ಆಶೀರ್ವಾದ ಕಾರಣ ಎಂದು ರಿಷಬ್ ಶೆಟ್ಟಿಯವರು ನಂಬಿದ್ದಾರೆ. ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಕಾಂತಾರ2 ಬಗ್ಗೆ ಮಾತುಗಳು ಕೇಳಿಬಂದಿದ್ದವು. ಕಾಂತಾರ2 ಮಾಡಬಹುದಾ ಎನ್ನುವ ಬಗ್ಗೆ ರಿಷಬ್ ಶೆಟ್ಟಿ ಅವರು ತಂಡದ ಜೊತೆಗೆ ದೈವದ ಅನುಪತಿ ಪಡೆಯಲು ಹೋಗಿದ್ದು, ಪಂಜುರ್ಲಿ ದೈವ ಎಚ್ಚರಿಕೆ ನೀಡಿದ್ದಾರಂತೆ. ಮಂಗಳೂರು ನಗರದಿಂದ ಹೋರಾಗಿರುಬ ಬಂದಲೆ ಮನೆಯಲ್ಲಿ ನಡೆದಿರುವ ಪಂಜುರ್ಲಿ ಕೋಲದಲ್ಲಿ ರಿಷಬ್ ಶೆಟ್ಟಿ ಅವರು ಚಿತ್ರತಂಡದ ಜೊತೆಗೆ ಭಾಗವಹಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣ ಅಡಿಗ ಅವರ ಎದುರು ನಡೆದ ಕೋಲದಲ್ಲಿ ದೈವದ ಬಳಿ ರಿಷಬ್ ಅವರು ಪ್ರಶ್ನೆ ಕೇಳಿದ್ದಾರೆ. ಇದನ್ನು ಓದಿ..Kannada News: ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತ ರವಿ ಚಂದ್ರನ್, ಕುಲಾಯಿಸಿದ ಅದೃಷ್ಟ ಏನು ಗೊತ್ತೇ?

ಕಾಂತಾರ2 ಮಾಡುವುದಕ್ಕೆ ದೈವ ಅನುಮತಿ ನೀಡಿದ್ದು, ಕೆಲವು ಷರತ್ತು ಹಾಕಿದೆ, “ಮೊದಲ ಸಾರಿ ಸಿನಿಮಾ ಮಾಡುವಾಗ 10 ಸಾರಿ ಯೋಚನೆ ಮಾಡಿದ್ರಿ, ಈ ಸಾರಿ ನೂರು ಸಾರಿ ಯೋಚನೆ ಮಾಡಿ, ನಿಮ್ಮ ಪ್ರಯತ್ನಕ್ಕೆ ಜಯ ಸಿಗುವ ಹಾಗೆ ಮಾಡುತ್ತೇನೆ. ಹಿಂದೆ ನಿಮ್ಮ ಜೊತೆಗಿದ್ದ ತಂಡದ ಜೊತೆಗೆ ಅಷ್ಟೇ ಶುಧ್ಧದ ಆಚರಣೆ ಇಂದ ಮುಂದುವರಿಯಿರಿ..” ಎಂದು ದೈವ ಹೇಳಿದೆ. ಅಂತೂ ದೈವದ ಕಡೆಯಿಂದ ಕಾಂತಾರ2 ಮಾಡಲು ಅನುಮತಿ ಸಿಕ್ಕಿದ್ದು, ಮುಂದಿನ ವರ್ಷ ಮಳೆಗಾಲದ ಸಮಯದಿಂದ ಸಿನಿಮಾ ಚಿತ್ರೀಕರಣ ಶುರುಮಾಡಲು, ಚಿತ್ರತಂಡ ಪ್ಲಾನ್ ಮಾಡಿದೆ. ರಿಷಬ್ ಅವರು ಕಾಂತಾರ2 ಮಾಡುತ್ತಾರೆ ಎಂದು ಚಿತ್ರೆಪ್ರೇಮಿಗಳು ಎಕ್ಸೈಟ್ ಆಗಿದ್ದಾರೆ. ಇದನ್ನು ಓದಿ..Kannada News: ಕನ್ನಡ ಚಿತ್ರರಂಗದಲ್ಲಿ ನಟರ ನಡುವೆ ನಡೆಯುತ್ತಿರುವ ವಾರ್ ಗೆ ನೇರವಾಗಿ ಕಾರಣ ಹೇಳಿದ ದರ್ಶನ್, ಈ ಬಾರಿ ಕೆಣಕಿದ್ದು ಯಾರನ್ನು ಗೊತ್ತೇ?