Kannada News: ದಿಯಾ ಹೆಗ್ಡೆ ಹಾಡು ಕೇಳಿ, ಕಣ್ಣೀರು ಹಾಕಿದ ಶಿವಣ್ಣ ಕೊನೆಯಲ್ಲಿ ಏನು ಮಾಡಿದ್ದಾರೆ ಗೊತ್ತೇ??

Kannada News: ಜೀಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ ಶೋ ಮೂಲಕ ಈ ವರ್ಷ ಬಹಳ ಫೇಮಸ್ ಆಗಿರುವ ಮಗು ದಿಯಾ ಹೆಗ್ಡೆ, ಈ ಮಗುವಿನ ಟ್ಯಾಲೆಂಟ್ ಗೆ ಎಲ್ಲರು ಫಿದಾ ಆಗಿದ್ದಾರೆ. ದಿಯಾಳಲ್ಲಿ ಇರುವ ವಿಶೇಷ ಟ್ಯಾಲೆಂಟ್ ಏನೆಂದರೆ, ತಾನೇ ಸ್ವಂತವಾಗಿ ಸಾಹಿತ್ಯ ಬರೆದು ಹಾಡು ಹಾಡುತ್ತಾಳೆ, ಅನುಶ್ರೀ ನನ್ನ ಸೊಸೆ ಆಗಬೇಕು ಎಂದು ದಿಯಾ ಸಾಹಿತ್ಯ ಬರೆದು ಹಾಡಿದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಾರ ಸರಿಗಮಪ ಶೋಗೆ ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ಅತಿಥಿಯಾಗಿ ಬಂದಿದ್ದರು.

ಪುಟ್ಟ ದಿಯಾ ಶಿವಣ್ಣ ಅವರ ಮೇಲು ಒಂದು ಸುಂದರವಾದ ಹಾಡು ಬರೆದು ಹಾಡಿದ್ದಾಳೆ. ದಿಯಾ ಹಾಡಿದ ಹಾಡು ಕೇಳಿ ಫಿದಾ ಆಗಿದ್ದಾರೆ ಶಿವಣ್ಣ. ಪುಟ್ಟ ಮಗುವಿನ ಟ್ಯಾಲೆಂಟ್ ನೋಡಿ, ಶಿವಣ್ಣ ಅವರು ಮುದ್ದು ದಿಯಾಳನ್ನು ಎತ್ತಿಕೊಂಡು ಸಂತೋಷಪಟ್ಟಿದ್ದಾರೆ, ಮುತ್ತು ನೀಡಿ ಶುಭ ಕೋರಿದ್ದಾರೆ. ಟ್ಯಾಲೆಂಟ್ ಹೇಗಿರುತ್ತೆ ನೋಡಿ, ಆ ಮಗು ನನ್ನ ಮೇಲೆ ಹಾಡು ಬರೆಯುತ್ತೆ, ಭಗವಂತ ಹೇಗೆ ಪ್ರತಿಭೆ ಕೊಟ್ಟಿದ್ದಾನೆ, ಮುಂದಿನ ಚಿ.ಉದಯಶಂಕರ್, ಹಂಸಲೇಖ ಆಗಬಹುದು ಎಂದು ಸ್ಟೇಜ್ ಮೇಲೆ ಮಗುವನ್ನು ಹೊಗಳಿದ್ದಾರೆ ಶಿವಣ್ಣ. ಇದನ್ನು ಓದಿ..Kannada News: ಈ ಬಾರಿ ಗೆಲ್ಲುವ ಸಿನಿಮಾಗಾಗಿ ರವಿಚಂದ್ರನ್ ರವರು ನಟಿಯನ್ನು ಎಲ್ಲಿಂದ ಕರೆ ತಂದಿದ್ದಾರೆ ಗೊತ್ತೆ?? ಇದಪ್ಪ ಕ್ರೇಜಿ ಅಂದ್ರೆ.

ಸ್ಟೇಜ್ ಮೇಲೆ ಹೊಗಳುವುದು ಮಾತ್ರವಲ್ಲದೆ, ದಿಯಾಳನ್ನು ಕರೆದು, ತಮ್ಮ ಪರ್ಸನಲ್ ಫೋನ್ ನಂಬರ್ ಕೊಟ್ಟು, ಯಾವಾಗ ಏನು ಬೇಕಾದರೂ ಫೋನ್ ಮಾಡು ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲದೆ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದಾರೆ ಶಿವಣ್ಣ. ಶಿವಣ್ಣ ಅವರದ್ದು ಮಗುವಿನಂತಹ ಒಳ್ಳೆಯ ಮನಸ್ಸು ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ಅದು ಈಗ ಮತ್ತೊಮ್ಮೆ ಪ್ರೂವ್ ಆಗಿದೆ. ಇನ್ನು ದಿಯಾ ಬಗ್ಗೆ ಹೇಳುವ ಹಾಗಯೇ ಇಲ್ಲ. ಈಗಾಗಲೇ ದಿಯಾ ತನ್ನ ಟ್ಯಾಲೆಂಟ್ ಮೂಲಕ ಕರ್ನಾಟಕದ ಜನತೆಗೆ ಬಹಳ ಹತ್ತಿರವಾಗಿದ್ದಾಳೆ. ಇದನ್ನು ಓದಿ.. Kannada News: ಪವನ್ ಕಲ್ಯಾಣ್ ರವರ ಮೂರನೇ ಹೆಂಡತಿಯ ಆಸ್ತಿ ಎಷ್ಟು ಗೊತ್ತೇ?? ತಿಳಿದರೆ, ನಿಂತಲ್ಲೇ ಕಾಲು ಗಡ ಗಡ ಶೇಕ್ ಆಗುತ್ತದೆ. ಎಷ್ಟು ಗೊತ್ತೇ?