Lakshana: ಲಕ್ಷಣದಲ್ಲಿ ಅಸಲಿ ಆಟ ಈಗ ಶುರು, ಡೆವಿಲ್ ಗಿಂತ ದೊಡ್ಡ ವಿಲ್ಲನ್ ಎಂಟ್ರಿ. ಯಾರು ಗೊತ್ತೇ??

Lakshana: ಲಕ್ಷಣ ಧಾರವಾಹಿಯಲ್ಲಿ ಹೊಸ ಟ್ವಿಸ್ಟ್ ಗಳು ಬರುತ್ತಲೇ ಇದ್ದು, ಇದನ್ನು ನೋಡಿ ಅಭಿಮಾನಿಗಳ ಕುತೂಹಲ ಇನ್ನಷ್ಟು ಹೆಚ್ಚಿದೆ. ಇದೀಗ ಎಲ್ಲರೂ ಅಂದುಕೊಂಡಿದ್ದಕ್ಕೆ ಉಲ್ಟಾ ಎನ್ನುವಂತಹ ಟ್ವಿಸ್ಟ್ ನೀಡಲಾಗಿದೆ. ಇಷ್ಟು ದಿನ ವಿಲ್ಲನ್ ಆಗಿ ನಕ್ಷತ್ರ ಮತ್ತು ಸಿ.ಎಸ್ ಅವರನ್ನು ಕೊಲ್ಲಬೇಕು, ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿದ್ದ ಮೌರ್ಯ ಈಗ, ತಣ್ಣಗಾಗಿ, ತನ್ನ ತಪ್ಪಿನ ಅರಿವಾಗಿದೆ ಎಂದು ನಕ್ಷತ್ರ ಕಾಲಿಗೆ ಬಿದ್ದು ಕ್ಷಮೆ ಕೇಳುವುದು ಮಾತ್ರವಲ್ಲದೆ, ನಕ್ಷತ್ರಳನ್ನು ಅತ್ತಿಗೆ ಎಂದು ಕೂಡ ಒಪ್ಪಿಕೊಂಡಿದ್ದಾನೆ.

ಈ ಹೊಸ ಟ್ವಿಸ್ಟ್ ವೀಕ್ಷಕರಿಗೂ ಶಾಕ್ ನೀಡಿದೆ ಎಂದು ಹೇಳಿದರೆ ತಪ್ಪಲ್ಲ. ಏಕೆಂದರೆ ಇಷ್ಟು ದಿನ ಡೆವಿಲ್ ಜೊತೆಗೂ ಸೇರಿ ನಕ್ಷತ್ರ ಮತ್ತು ಸಿಎಸ್ ಗೆ ಹಾನಿ ಮಾಡಬೇಕು ಎಂದುಕೊಂಡಿದ್ದ ಮೌರ್ಯ ದಿಢೀರ್ ಬದಲಾಗಿದ್ದಾನೆ. ನಕ್ಷತ್ರಳನ್ನು ತಾನೇ ಸೇವ್ ಮಾಡಿ, ಅತ್ತಿಗೆ ನನ್ನನ್ನು ಕ್ಷಮಿಸಿ ನಾನು ಮಾಡಿದ್ದು ತಪ್ಪಾಯಿತು ಎಂದು ಕೇಳಿಕೊಂಡಿದ್ದಾನೆ. ಇನ್ನು ನಕ್ಷತ್ರ ಮೌರ್ಯ ಬದಲಾಗಿರುವುದನ್ನು ನಂಬಿ ಕ್ಷಮಿಸಿದ್ದಾಳೆ. ಅಷ್ಟೇ ಅಲ್ಲದೆ, ಮೌರ್ಯನನ್ನು ತನ್ನ ತಂದೆ ಕೊಲ್ಲಲು ಬಂದಾಗ, ತಂದೆಯನ್ನು ತಡೆದಿದ್ದಾಳೆ. ಇದನ್ನು ಓದಿ..Kannada News: ಹತ್ತು ವರ್ಷಗಳ ಬಳಿಕ ಮನೆಗೆ ಬರುತ್ತಿರುವ ಸಮಯದಲ್ಲಿ ನಯನತಾರ ಮಡಿದ ತಪ್ಪನ್ನೇ ಮಾಡುತ್ತಿರುವ ರಾಮ್ ಚರಣ್ ಪತ್ನಿ. ಏನಾಗಿದೆ ಗೊತ್ತೆ?

ನಕ್ಷತ್ರಳನ್ನು ಕೊಲ್ಲಲು ಬಂದಿದ್ದಾನೆ ಎಂದು ಸಿಎಸ್ ಮೌರ್ಯನನ್ನು ಕೊಲ್ಲಲು ಹೋದಾಗ, ನಕ್ಷತ್ರ ಬಂದು ತನ್ನ ಪ್ರಾಣ ಉಳಿಸಿದ್ದು ಮೌರ್ಯ ಎಂದು ಹೇಳಿದಾಗ ಸಿ.ಎಸ್.ಕೂಡ ಶಾಕ್ ಆಗುತ್ತಾನೆ. ಕೊನೆಗೆ ಮಗಳು ಹೇಳಿದ್ದು ಕೇಳಿ ನಂಬುತ್ತಾನೆ. ನಂತರ ಪತ್ನಿಗೆ ಕರೆಮಾಡಿ ಈ ವಿಷಯ ಹೇಳಿ, ನಕ್ಷತ್ರಳನ್ನು ಮನೆಗೆ ಕರೆದುಕೊಂಡು ಹೋಗುವಾಗ, ದಾರಿ ನಡುವೆ ಕಾರ್ ನಲ್ಲಿ ಒಂದು ರಿಕ್ವೆಸ್ಟ್ ಎಂದು ಅಪ್ಪನಿಗೆ ಕೇಳುವ ನಕ್ಷತ್ರ, ಮೌರ್ಯ ಈಗ ಬದಲಾಗಿದ್ದಾನೆ, ಅವನು ಹೀಗೆ ಆಗುವುದಕ್ಕೆ ನಾವೆಲ್ಲರೂ ಕಾರಣ, ಅವನ ಮೇಲಿರುವ ಎಲ್ಲಾ ಕೇಸ್ ಗಳನ್ನು ತೆಗೆದುಹಾಕಿ ಎಂದು ಕೇಳುತ್ತಾಳೆ.

ಮೊದಲಿಗೆ ಸಿಎಸ್ ಇದಕ್ಕೆ ಒಪ್ಪುವುದಿಲ್ಲ. ನಂತರ ನಕ್ಷತ್ರ ಹೇಳಿದ್ದು ಕೇಳಿ ಒಪ್ಪಿಕೊಳ್ಳುತ್ತಾರೆ. ಮೌರ್ಯನ ಮೇಲಿರುವ ಕೇಸ್ ಗಳನ್ನು ತೆಗೆದುಹಾಕಲು ಒಪ್ಪಿಕೊಂಡ ನಂತರ, ಮೌರ್ಯ ಮನೆಗೆ ಬರುತ್ತಾನೆ. ಆದರೆ ಮನೆಯ ಒಳಗೆ ಸೆಕ್ಯೂರಿಟಿ ಅವರಿಂದ ಹಿಡಿದು ಯಾರು ಕೂಡ ಮೌರ್ಯನನ್ನು ಮನೆಯ ಒಳಗೆ ಬಿಡುವುದಿಲ್ಲ. ಶೌರ್ಯ ಮತ್ತು ಇನ್ನೊಬ್ಬ ಅಣ್ಣ ಬಂದು, ಏನೋ ಪ್ಲಾನ್ ಮಾಡಿಕೊಂಡೆ ಬಂದಿದ್ದೀಯಾ ಮನೆಯೊಳಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಮೌರ್ಯ ಚಿಕ್ಕ ಮಗುವಿನ ಹಾಗೆ ಒಂದೇ ಒಂದು ಸಾರಿ ಅಮ್ಮನ ಜೊತೆ ಭೂಪತಿ ಜೊತೆಗೆ ಮಾತನಾಡಬೇಕು ಎಂದು ಕೇಳಿಕೊಳ್ಳುತ್ತಾನೆ.. ಇದನ್ನು ಓದಿ..Kannada News: ರಶ್ಮಿಕಾ ಕನ್ನಡಕ್ಕೆ ಬರದೇ ಹೋದರೇನು ಅವರ ಸ್ಥಾನವನ್ನು ಗಟ್ಟಿಯಾಗಿ ತುಂಬುವ ನಟಿ ಸಿಕ್ಕೇ ಬಿಟ್ಟರು. ಆ ನಟಿ ಯಾರು ಗೊತ್ತೇ?

ಕೊನೆಗೆ ಶೌರ್ಯ, ನಕ್ಷತ್ರ ಮನೆಯಲ್ಲಿಲ್ಲ ಇನ್ಯಾರಿಗೆ ತೊಂದರೆ ಮಾಡುತ್ತಾನೆ ಎಂದು ಭೂಪತಿಯನ್ನು ಮನೆಯೊಳಗೆ ಬಿಡುತ್ತಾನೆ, ಆಗ ಶಕುಂತಲಾದೇವಿ ಬಂದು, ಮೌರ್ಯನಿಗೆ ಹೊಡೆದು ಮನೆಯಿಂದ ಹೊರಗೆ ಹೋಗುವಂತೆ ಹೇಳುತ್ತಾರೆ. ಮನೆಯಲ್ಲಿ ತೊಂದರೆ ಕೊಡೋದಕ್ಕೆ ಬಂದಿದ್ದಾನೆ ಎಂದು ಬಯ್ಯುತ್ತಾರೆ ಶಕುಂತಲಾದೇವಿ. ಮೌರ್ಯ ಕ್ಷಮಿಸಿ ಎಂದು ಎಷ್ಟೇ ಕೇಳಿಕೊಂಡರು ಕೂಡ, ಶಕುಂತಲಾದೇವಿ ಮೌರ್ಯನನ್ನು ಕ್ಷಮಿಸುವುದಿಲ್ಲ. ಇದನ್ನು ನೋಡಿ ವೀಕ್ಷಕರಿಗೆ ಒಂದು ರೀತಿ ಶಾಕ್ ಆಗುವುದಂತು ನಿಜ.

ಆದರೆ ಇಲ್ಲಿ ಅಸಲಿ ವಿಚಾರ ಏನೆಂದರೆ, ಧಾರವಾಹಿಯಲ್ಲಿ ಮುಂದಿನ ವಿಲ್ಲನ್ ಶಕುಂತಲಾದೇವಿ ಅವರೇ ಆಗಿದ್ದಾರೆ.. ಈಗ ಮಗನ ಮೇಲೆ ಪ್ರೀತಿ ಇದ್ದರು ಕೂಡ, ಅವನನ್ನು ಕ್ಷಮಿಸದೇ ಇರುವುದು ಕೂಡ ನಾಟಕ ಆಗಿದೆ, ಮೌರ್ಯನ ಮೇಲೆ ಇರುವ ಕೇಸ್ ಗಳನ್ನು ಸಿಎಸ್ ವಾಪಾಸ್ ಪಡೆದ ತಕ್ಷಣವೇ ಮೌರ್ಯನನ್ನು ಬೇರೆ ಊರಿಗೆ ಕಳಿಸಿ, ನಂತರ ಸಿಎಸ್ ಮತ್ತು ನಕ್ಷತ್ರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎನ್ನುವುದು ಶಕುಂತಲಾದೇವಿ ಅವರ ಪ್ಲಾನ್ ಆಗಿದೆ. ಈ ಪ್ಲಾನ್ ಏನೋ ಇದೆ, ಮುಂದಿನ ಎಪಿಸೋಡ್ ಗಳಲ್ಲಿ ಡೆವಿಲ್ ಜೊತೆ ಕೈಜೋಡಿಸುತ್ತಾರ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.