Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

Kannada News: ಇತ್ತೀಚೆಗೆ ಬಂದ ನಟನಟಿಯರು ಚಿತ್ರರಂಗದಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಈಗಿನ ಯಂಗ್ ಸ್ಟಾರ್ ಗಳು ವಿಲ್ಲಾ ಖರೀದಿ ಮಾಡಿ, ವಾಸ ಮಾಡೋದಕ್ಕೆ ಶುರು ಮಾಡಿದ್ದಾರೆ. ಆದರೆ ಇದೇ ಇಂಡಸ್ಟ್ರಿಯಲ್ಲಿ ಟಾಪ್ ಡೈರೆಕ್ಟರ್ ಆಗಿರುವ ತ್ರಿವಿಕ್ರಮ್ ಶ್ರೀನಿವಾಸ್ ಅವರಿಗೆ ಚಿತ್ರರಂಗದಲ್ಲಿ ಕ್ರೇಜ್ ಹೇಗಿದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ, ಇವರು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ, ನೂರಾರು ಕೋಟಿ ಹಣ ಗಳಿಸಿದ್ದಾರೆ. ಟಾಪ್ ಹೀರೋಗಳ ಜೊತೆ ಮಾತ್ರ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ತ್ರಿವಿಕ್ರಮ್ ಜೊತೆಗೆ ಸಿನಿಮಾ ಎಂದರೆ ಟಾಪ್ ಹೀರೋಗಳು ಹಿಂದು ಮುಂದು ನೋಡದೆ ಒಪ್ಪಿಗೆ ಕೊಡುತ್ತಾರೆ.

ಅವರು ನಿರ್ದೇಶನ ಮಾಡುವ ಸಿನಿಮಾಗಳ ರೇಂಜ್ ಹಾಗಿರುತ್ತದೆ. ಈಗ ತ್ರಿವಿಕ್ರಮ್ ಅವರು ದೊಡ್ಡ ನಿರ್ದೇಶಕ. ತುಂಬಾ ಕಷ್ಟಪಟ್ಟು ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ತ್ರಿವಿಕ್ರಮ್, ಸುನೀಲ್ ಮತ್ತು ಆರ್.ಪಿ.ಪಟ್ನಾಯಕ್ ಒಳ್ಳೆಯ ಸ್ನೇಹಿತರು. ತ್ರಿವಿಕ್ರಮ್ ಅವರು ಮತ್ತು ಸುನೀಲ್ ಅವರು ಇಬ್ಬರು ಕೂಡ ಪಂಜಗುಟ್ಟದಲ್ಲಿ ಒಂದು ಬಾಡಿಗೆ ರೂಂನಲ್ಲಿ ವಾಸವಿದ್ದರು. ಆ ಬಾಡಿಗೆ ಮನೆಯಲ್ಲಿಯೇ ಇದ್ದು ಅವಕಾಶಗಳನ್ನು ಹುಡುಕುವ ಪ್ರಯತ್ನ ಮಾಡಿದರು. ಆ ಸಮಯದಲ್ಲಿ ಅವರಿಬ್ಬರು ಅನುಭವಿಸಿದ ಕಷ್ಟಗಳು ಅವರಿಗೆ ಮಾತ್ರ ಗೊತ್ತು. ಇದನ್ನು ಓದಿ..Kannada News: ಶಿವಣ್ಣ ವೇದ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಚಿಟ್ಟೆಯಂತಿರುವ ಶ್ವೇತಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ತಿಳಿದರೆ ನೀವು ನಂಬೋದಿಲ್ಲ.

ಕೆಲವೊಮ್ಮೆ ಅವರಿಬ್ಬರಿಗೆ ತಿನ್ನಲು ಊಟ ಕೂಡ ಇರುತ್ತಿರಲಿಲ್ಲ. ತ್ರಿವಿಕ್ರಮ್ ಅಂತಹ ಕಷ್ಟ ನೋಡಿ ಇಂದು ಚಿತ್ರರಂಗದಲ್ಲಿ ಟಾಪ್ ನಿರ್ದೇಶಕನಾಗಿ ಬೆಳೆದು ನಿಂತಿದ್ದಾರೆ. ಇದೇ ಕಾರಣಕ್ಕೆ, ತಾವು ಬೆಳೆದು ಬಂದ ದಾರಿಯನ್ನು ಮರೆಯಬಾರದು ಎಂದು ತ್ರಿವಿಕ್ರಮ್ ಅವರು ಪಂಜಗುಟ್ಟದಲ್ಲಿ ಬಾಡಿಗೆಗೆ ಇದ್ದ ರೂಮ್ ಗೆ ಈಗಲೂ ಬಾಡಿಗೆ ನೀಡುತ್ತಿದ್ದಾರೆ. ತ್ರಿವಿಕ್ರಮ್ ಈಗಲೂ ಆ ಕೋಣೆಯನ್ನು ತಮ್ಮ ಹೆಸರಿನಲ್ಲಿಯೇ ಇಟ್ಟುಕೊಂಡಿದ್ದಾರೆ. ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ತ್ರಿವಿಕ್ರಮ್ ಅವರಿಗೆ ಆ ರೂಮ್ ತುಂಬಾ ಇಷ್ಟ ಹಾಗೂ ಅವರಿಗೆ ಸೆಂಟಿಮೆಂಟ್ ಇಂದ ಈಗಲೂ ಆ ರೂಮ್ ಗೆ ಬಾಡಿಗೆ ನೀಡುತ್ತಿದ್ದಾರೆ. ಇದನ್ನು ಓದಿ..Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.