Kannada News: ಒಂಟಿ ಕಾಲಲ್ಲಿಯೇ ದೊಣ್ಣೆ ಏಟಿಗೂ ಅಲುಗಾಡದ ರಾಮಾಚಾರಿ; ಸೀರಿಯಲ್ ನೋಡಿದ ಪ್ರತಿಯೊಬ್ಬರೂ ಹೇಳಿದ್ದೇನು ಗೊತ್ತೇ?

Kannada News: ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ರಾತ್ರಿ 9 ಗಂಟೆಗೆ ಕಿರುತೆರೆ ವೀಕ್ಷಕರು ತಪ್ಪದೇ ಈ ಸೀರಿಯಲ್ ನೋಡುತ್ತಾರೆ. ಆದರೆ ಈಗ ಈ ಧಾರವಾಹಿ ಅಭಿಮಾನಿಗಳೇ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣ ಈಗ ಕಥೆ ಹೋಗುತ್ತಿರುವ ರೀತಿ. ರಾಮಾಚಾರಿ ಮತ್ತು ಚಾರು ತಮ್ಮ ಕಂಪನಿ ಕಡೆಯಿಂದ ಮತ್ತೊಂದು ಕಂಪನಿ ವಿಸಿಟ್ ಗೆ ಹೋಗಿದ್ದಾಗ, ಅಲ್ಲಿ ಚಾರು ರಾಮಾಚಾರಿಗೆ ನೀನು ನನ್ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳೋವರೆಗೂ ಬಿಡೋದಿಲ್ಲ ಎಂದು ಹಿಂದೆ ಇಂದ ಅಪ್ಪಿಕೊಂಡಾಗ, ರಾಮಾಚಾರಿ ತಳ್ಳುತ್ತಾನೆ, ಆಗ ಚಾರು ಕಣ್ಣಿಗೆ ಕೆಮಿಕಲ್ ಬಿದ್ದು ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ. ಈ ವಿಚಾರ ಚಾರು ಮನೆಯಲ್ಲಿ ಗೊತ್ತಿರಲಿಲ್ಲ.

ರಾಮಾಚಾರಿ ಮನೆಯಲ್ಲಿ ಇದ್ದುಕೊಂಡೇ ಹೇಗೋ ಮ್ಯಾನೇಜ್ ಮಾಡಿದ್ದಳು. ಆದರೆ ಈ ವಿಷಯ ಚಾರು ತಾಯಿ ಮಾನ್ಯತಾಗೆ ಗೊತ್ತಾಗಿ, ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಬಳಿಕ ಚಾರುಗೆ ಕಣ್ಣು ಹೋಗಿದ್ದು, ರಾಮಾಚಾರಿ ಇಂದಾನೆ ಎಂದು ಮಾನ್ಯತಾಗೆ ಗೊತ್ತಾದ ನಂತರ ತಕ್ಷಣವೇ ರಾಮಾಚಾರಿ ಮನೆಗೆ ಬಂದು, ಮನೆಯವರನ್ನೆಲ್ಲ ಸಾಯಿಸಬೇಕು ಎಂದು ಅವರನ್ನೆಲ್ಲ ಕಟ್ಟಿ ಹಾಕಿಸಿದ್ದಾಳೆ. ಮನೆಯಲ್ಲಿ ರಾಮಾಚಾರಿ ಇಲ್ಲ, ಚಾರುಗೆ ಕಣ್ಣು ಬರಬೇಕು ಎಂದು ರಾಮಾಚಾರಿ ಒಂಟಿ ಕಾಲಲ್ಲಿ ನಿಂತು ವ್ರತ ಮಾಡ್ತಾ ಇದ್ದಾನೆ. ಅದೇ ಜಾಗಕ್ಕೆ ಬರುವ ಮಾನ್ಯತಾ ನನಗೆ ಎಲ್ಲಾ ವಿಷಯ ಗೊತ್ತಾಯಿತು ಎಂದು ರಾಮಾಚರಿಗೆ ಚೆನ್ನಾಗಿ ಹೊಡೆಯುತ್ತಾಳೆ. ಇದನ್ನು ಓದಿ..Kannada News: ವಿಷ್ಣು ಪ್ರತಿಮೆ ನಿರ್ಮಾಣ ಮಾಡಿದಕ್ಕೆ ಖುಷಿಯಿಂದ ದರ್ಶನ್ ಧನ್ಯವಾದ ತಿಳಿಸಿದ್ದು ಯಾರಿಗೆ ಗೊತ್ತೇ?? ತೆರೆ ಹಿಂದೆ ಕೆಲಸ ಮಾಡಿದ್ದು ನಿಜಕ್ಕೂ ಯಾರು ಗೊತ್ತೇ??

ಆದರೆ ರಾಮಾಚಾರಿ ಅಲುಗಾಡುವುದಿಲ್ಲ, ಆಗ ಮಾನ್ಯತಾ ನನ್ನಿಂದ ತಪ್ಪಿಸಿಕೊಳ್ಳೋದಕ್ಕೆ ದೇವರು ಅಂತ ಹೀಗೆ ನಾಟಕ ಆಡ್ತಿದ್ದೀಯ ಎಂದು ಇನ್ನು ಹೊಡೆದು, ರಾಮಾಚಾರಿ ಮನೆಯವರನ್ನು ಕಟ್ಟಿ ಹಾಕಿರುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದಾಗ, ರಾಮಾಚಾರಿ ವ್ರತವನ್ನು ನಿಲ್ಲಿಸಿದ್ದಾನೆ. ಈ ದೃಶ್ಯಗಳನ್ನು ನೋಡಿದ ಕಿರುತೆರೆ ವೀಕ್ಷಕರು, ಇದೆಲ್ಲಾ ಅರಿ ಆಯಿತು, ಒಂದು ಧಾರವಾಹಿಯನ್ನು ಪಾಸಿಟಿವ್ ಆಗಿ ಜನರಿಗೆ ಇಷ್ಟ ಆಗುವ ಹಾಗೆ ತೋರಿಸಬೇಕು.. ಈ ರೀತಿ ಮಾಡಬಾರದು ಎಂದು ಹೇಳುತ್ತಿದ್ದಾರೆ.. ಇದನ್ನು ಓದಿ..Kannada News: ದೇಶವನ್ನೇ ಶೇಕ್ ಶೇಕ್ ಮಾಡುವಂತೆ ಹಾಡು ಹೇಳುವ ಮಂಗಲಿ, ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದರೆ, ನೀವೇ ಶೇಕ್ ಆಗ್ತೀರಾ.