Kannada News: ಮತ್ತೊಂದು ಮಹತ್ವದ ಟ್ವಿಸ್ಟ್ ಪಡೆದುಕೊಂಡ ಭಾಗ್ಯಲಕ್ಷ್ಮಿ: ಮುಂದೇನಾಗಲಿದೆ ಗೊತ್ತೇ? ಪ್ರೇಕ್ಷಕರಿಗೆ ಬಾರಿ ಮನರಂಜನೆ ಫಿಕ್ಸ್ .

Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ, ಚಾನೆಲ್ ನ ನಂಬರ್ 1 ಧಾರವಾಹಿ ಎನ್ನಿಸಿಕೊಂಡಿರುವುದು ಭಾಗ್ಯಲಕ್ಷ್ಮಿ ಧಾರವಾಹಿ, ಈ ಧಾರವಾಹಿ ಮೂಲಕ ನಿರೂಪಕಿ ಸುಷ್ಮಾ ಅವರು ಬಹಳ ವರ್ಷಗಳ ನಂತರ್ಸ್ ಕಿರುತೆರೆ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇವರು ಭಾಗ್ಯನ ಪಾತ್ರದಲ್ಲಿ, ಮಿಡ್ಲ್ ಕ್ಲಾಸ್ ಮಹಿಳೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇವರ ತಂಗಿ ಲಕ್ಷ್ಮಿಗೆ ಶ್ರೀರಾಮನಂಥ ಹುಡುಗನನ್ನು ಹುಡುಕುತ್ತಿರುವ ಅಕ್ಕ ಭಾಗ್ಯ. ಇನ್ನು ಸಿಂಗರ್ ವೈಷ್ಣವ್ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಶಮಂತ್ ಅಭಿನಯಿಸುತ್ತಿದ್ದಾರೆ.

ಭಾಗ್ಯಲಕ್ಷ್ಮಿ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಫೇಮಸ್ ಸಿಂಗರ್ ಆಗಿರುವ ವೈಷ್ಣವ್ ಕೀರ್ತಿಯನ್ನು ಬಹಳ ಸಮಯದಿಂದ ಪ್ರೀತಿ ಮಾಡುತ್ತಿದ್ದ, ವೈಷ್ಣವ್ ತಾಯಿ ಕಾವೇರಿಗೆ ಹುಡುಗಿ ಇಷ್ಟವಿಲ್ಲದೆ ಹೋದರು ಕೂಡ ಮಗನ ಆಸೆಗಾಗಿ ಮದುವೆ ಮಾಡಲು ಒಪ್ಪಿಕೊಂಡಿದ್ದಳು, ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಕೀರ್ತಿ ವೈಷ್ಣವ್ ಜೊತೆಗೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ವೈಷ್ಣವ್ ಎಷ್ಟೇ ರಿಕ್ವೆಸ್ಟ್ ಮಾಡಿ ಕೇಳಿಕೊಂಡರು ಕೂಡ ಈ ಮದುವೆ ತನಗೆ ಇಷ್ಟವಿಲ್ಲ ಎಂದು ಕೀರ್ತಿ ಹೇಳುತ್ತಾರೆ. ಇದನ್ನು ಓದಿ..Kannada News: ಯಪ್ಪಾ ಅಲ್ಲೂ ಅರ್ಜುನ ಮುಂದಿನ ಸಿನೆಮಾಗೆ ಅಪ್ಸರೆಯನ್ನು ಕರೆತರುವುದು ಫಿಕ್ಸ್: ಈಕೆಯನ್ನು ನೋಡಿ ಚುಮು ಚುಮು ಅನ್ನುತ್ತೆ. ಹೇಗಿದ್ದಾಳೆ ಗೊತ್ತೇ?

ಕಾವೇರಿಗೆ ಮಗನ ಮದುವೆ ಮಾಡಬೇಕು ಎನ್ನುವ ಯೋಚನೆ ಇದ್ದಾಗ, ಕಾವೇರಿ ಅಕ್ಕ ಭಾಗ್ಯಳ ಅತ್ತೆ ಒಂದು ಹುಡುಗಿಯನ್ನ ಸಜೆಸ್ಟ್ ಮಾಡ್ತೀನಿ ಎಂದು ಭಾಗ್ಯನ ತಂಗಿ ಲಕ್ಷ್ಮಿ ತುಂಬಾ ಒಳ್ಳೆ ಹುಡುಗಿ, ಮನೆಗೆ ಒಳ್ಳೆಯ ಸೊಸೆ ಆಗ್ತಾಳೆ ಎಂದು ಹೇಳುತ್ತಾರೆ. ಈ ಮದುವೆ ವೈಷ್ಣವ್ ಗು ಇಷ್ಟ ಇರೋದಿಲ್ಲ,. ಈ ಕಡೆ ಭಾಗ್ಯಗೆ ಬೇರೆ ಹುಡುಗಿಯನ್ನ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಹುಡುಗ ತನ್ನ ತಂಗಿಯನ್ನು ಮದುವೆ ಆಗ್ಬೇಕಾ ಎಂದು ಒಂದು ಅಳುಕು ಕೂಡ ಇರುತ್ತದೆ. ಹೀಗೆ ಮದುವೆ ಆಗಬೇಕೋ ಬೇಡವೋ ಎನ್ನುವ ಮನೆಯವರ ಗೊಂದಲದಲ್ಲಿ..

ವೈಷ್ಣವ್ ಮತ್ತು ಲಕ್ಷ್ಮಿ ಭೇಟಿಯಾದಾಗ ವೈಷ್ಣವ್ ಆಕೆಗೆ ಮಾಡರ್ನ್ ಡ್ರೆಸ್ ಹಾಕಿಸುವುದು ಲಕ್ಷ್ಮಿಗೂ ಇಷ್ಟ ಆಗುವುದಿಲ್ಲ, ಮನೆಯವರಿಗೆ ಕೂಡ ಇಷ್ಟ ಆಗುವುದಿಲ್ಲ. ಕೊನೆಗೆ ಲಕ್ಷ್ಮಿಗೆ ಕ್ಷಮೆ ಕೇಳಬೇಕು ಎಂದು ಡಿಸೈಡ್ ಮಾಡುವ ವೈಷ್ಣವ್, ಕೀರ್ತಿ ಗೆ ಹೊಟ್ಟೆ ಉರಿಸಬೇಕು ಎಂದು, ಮದುವೆ ಆಗುವ ಹಾಗೆ ನಾಟಕ ಆಡೋಣ ಎಂದು ಲಕ್ಷ್ಮಿಗೆ ಪತ್ರ ಬರೆದಿರುತ್ತಾನೆ, ಆದರೆ ಆ ಪತ್ರವನ್ನು ವೈಷ್ಣವ್ ಚಿಕ್ಕಮ್ಮ ಬದಲಾಯಿಸಿರುತ್ತಾಳೆ, ಇದರಿಂದ ಲಕ್ಷ್ಮಿಗೆ ಅಸಲಿ ವಿಚಾರ ಗೊತ್ತಿರುವುದಿಲ್ಲ. ಲಕ್ಷ್ಮಿ ಆ ಪತ್ರ ನೋಡಿ ಒಪ್ಪಿಗೆ ಎಂದು ಹೇಳಿದ್ದಕ್ಕೆ ವೈಷ್ಣವ್ ಗು ಬಹಳ ಸಂತೋಷ ಆಗಿದೆ. ಲಕ್ಷ್ಮಿಯನ್ನು ಅಪ್ಪಿಕೊಂಡು ಥ್ಯಾಂಕ್ಸ್ ಹೇಳಿ ಸಂತೋಷ ಪಡುತ್ತಾನೆ. ಇದನ್ನು ಓದಿ..Kannada News: ಇರುವ ಹಣವೆಲ್ಲ ಆರೋಗ್ಯಕ್ಕಾಗಿ ಖರ್ಚು ಮಾಡಿರುವ ಸಮಂತಾ, ಹೊಸ ಸಿನೆಮಾಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೆ? ಅದು ಈ ರೇಂಜ್ ನಲ್ಲಿ ಕಾಣಿಸಿಕೊಳ್ಳಲು ಪಡೆದದ್ದು ಎಷ್ಟು ಗೊತ್ತೇ?

ಇಬ್ಬರು ಒಪ್ಪಿದ್ದಾರೆ ಎಂದು ಮನೆಯಲ್ಲಿ ದೊಡ್ಡವರು ಎಂಗೇಜ್ಮೆಂಟ್ ಕೂಡ ಮಾಡಿ, ಮದುವೆಗೂ ತಯಾರಿ ಮಾಡಿಕೊಂಡಿದ್ದಾರೆ. ಈಗ ಲಕ್ಷ್ಮಿ ಮತ್ತು ವೈಷ್ಣವ್ ಗೆ ಮದುವೆಗಿಂಯ ಮೊದಲಿನ ಶಾಸ್ತ್ರಗಳು ಕೂಡ ನಡೆಯುತ್ತಿದೆ. ವೈಷ್ಣವ್ ಲಕ್ಷ್ಮಿ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಕಾವೇರಿ ಪ್ಲಾನ್ ಮಾಡಿದ್ದಳು, ಆದರೆ ಭಾಗ್ಯ ತಾನು ಲಕ್ಷ್ಮಿ ಮದುವೆ ಬಗ್ಗೆ ಹರಕೆ ಮಾಡಿಕೊಂಡಿದ್ದು, ಮನೆದೇವರ ದೇವಸ್ಥಾನದಲ್ಲಿ ಇಬ್ಬರ ಮದುವೆ ಆಗಬೇಕು ಎಂದಿದ್ದಾಳೆ.. ವೈಷ್ಣವ್ ದೊಡ್ಡ ಸಿಂಗರ್ ಆಗಿರುವುದರಿಂದ, ಕಾವೇರಿ ಗೆ ಪೂರ್ತಿ ಒಪ್ಪಿಗೆ ಇಲ್ಲದಿದ್ದರೂ.. ಮನೆದೇವರ ದೇವಸ್ಥಾನದಲ್ಲಿ ಮದುವೆ ಮಾಡಿ, ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಮಾಡೋಣ ಎಂದು ಗಂಡ ಹೇಳಿದ ಮಾತಿಗೆ ಒಪ್ಪಿದ್ದಾಳೆ.

ವೈಷ್ಣವ್ ಗೆ ಈಗ ಲಕ್ಷ್ಮಿ ಮದುವೆಗೆ ಒಪ್ಪಿದ್ದಾಳಾ ಎಂದು ಅನುಮಾನ ಶುರುವಾಗಿ, ಲಕ್ಷ್ಮಿ ಜೊತೆ ಮಾತನಾಡಬೇಕು ಎಂದು ಕೇಳಿದ್ದಾನೆ.. ಆದರೆ ವೈಷ್ಣವ್ ಮನಸ್ಸಿನಲ್ಲಿ ನಿಜವಾಗಲೂ ಏನಿದೆ ಎನ್ನುವ ನಿಜವಾದ ವಿಷಯ ಭಾಗ್ಯಳಿಗೆ ಗೊತ್ತಾಗುತ್ತದೆ, ಮದುವೆಯ ದಿನ ಈ ವಿಷಯ ಲಕ್ಷ್ಮಿಗೂ ಗೊತ್ತಾಗುತ್ತದೆ, ಆದರೆ ತನ್ನ ಅಕ್ಕಮ್ಮನಿಗೆ ಇದರಿಂದ ಬೇಸರ ಆಗಬಹುದು ಎಂದು ಲಕ್ಷ್ಮಿ ಎದುರು ಮಾತನಾಡದೆ ಸುಮ್ಮನಾಗುತ್ತಾಳೆ, ತಂಗಿಗೆ ಒಳ್ಳೆಯ ಹುಡುಗ ಸಿಗಬೇಕು ಎನ್ನುವ ಭಾಗ್ಯ, ಈ ಮದುವೆಯನ್ನು ನಿಲ್ಲಿಸುತ್ತಾಳಾ ಎಂದು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಬಂಗಾರದ ಬೆಣ್ಣೆಯಂತಿದ್ದ ನಮಿತಾ, ದಿಡೀರ್ ಎಂದು ದಪ್ಪ ಆಗಲು ಕಾರಣ ಏನಂತೆ ಗೊತ್ತೇ?? ಅವರೇ ಬಿಚ್ಚಿಟ್ಟ ತೆರೆ ಹಿಂದೆ ಕಹಾನಿ ಏನು ಗೊತ್ತೇ?