ಸಿನೆಮಾಗೆ ನಟಿ ಪೂಜಾ ಹೇಗೆ, ಆದರೆ ಬೇರೆ ಪಾತ್ರಕ್ಕೆ ಬಾಲಿವುಡ್ ನಿಂದ ಬೆಣ್ಣೆಯಂತಹ ನಟಿಯರನ್ನು ಕರೆತಂದ ಮಹೇಶ್. ನೋಡಿದರೆ, ಲವ್ ಆಗೋದು ಪಕ್ಕ. ಯಾರು ಗೊತ್ತೇ?

ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಅವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸಕ್ಸಸ್ ರೇಟ್ ನಲ್ಲಿಯೇ ಇದ್ದಾರೆ. ಕಳೆದ ವರ್ಷ ಇವರ ಸರ್ಕಾರು ವಾರಿ ಪಾಟ ಸಿನಿಮಾ ತೆರೆಕಂಡು ಸೂಪರ್ ಹಿಟ್ ಎನ್ನಿಸಿಕೊಂಡಿತು. ಈ ಸಿನಿಮಾ ಗೆಲುವಿನ ನಂತರ ಮುಂದಿನ ಸಿನಿಮಾ ಚಿತ್ರೀಕರಣ ಅರ್ಧ ಕೂಡ ಮುಗಿದಿಲ್ಲ. ಮಹೇಶ್ ಬಾಬು ಅವರ ಮುಂದಿನ ಸಿನಿಮಾ ತ್ರಿವಿಕ್ರಂ ಶ್ರೀನಿವಾಸ್ ಅವರ ಜೊತೆಗೆ ಎಂದು ಗೊತ್ತಿದೆ. ಈ ಸಿನಿಮಾ ಮೇಲೆ ಈಗಾಗಲೇ ಎಲ್ಲಾ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ.

ಬರೋಬ್ಬರಿ 11 ವರ್ಷಗಳ ನಂತರ ಮಹೇಶ್ ಬಾಬು ಮತ್ತು ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿಬರಲಿದ್ದು, ಇನ್ನು ಹೆಸರಿಡದ ಈ ಸಿನಿಮಾಗೆ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಎರಡನೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಇವರಿಬ್ಬರು ಕರ್ನಾಟಕದ ನಟಿಯರು ಎನ್ನುವುದು ಮತ್ತೊಂದು ಸಂತೋಷದ ವಿಚಾರ. ಈ ಸುದ್ದಿ ಒಂದುಕಡೆಯಾದರೆ, ಈ ಸಿನಿಮಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಇದನ್ನು ಓದಿ..Kannada News: ನಿಜಕ್ಕೂ Dr ರಾಜ್ ಹಾಗೂ Dr ವಿಷ್ಣುವರ್ಧನ್ ರವರ ನಡುವೆ ಇತ್ತೇ ‘ಮಹಾ’ ದ್ವೇಷ?? ತೆರೆ ಹಿಂದೆ ನಿಜಕ್ಕೂ ನಡೆದದ್ದು ಏನು ಗೊತ್ತೇ??

ಅದೇನೆಂದರೆ, ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಶ್ರೀಲೀಲಾ ಅವರನ್ನು ಹೊರತುಪಡಿಸಿ ಬಾಲಿವುಡ್ ನಟಿಯೊಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಆಕೆ ಮತ್ಯಾರು ಅಲ್ಲ, ಖ್ಯಾತ ಬಾಲಿವುಡ್ ನಟಿ ಭೂಮಿ ಫೆಡ್ನೇಕರ್, ಇವರು ಮಹೇಶ್ ಬಾಬು ಅವರ ಸಿನಿಮದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾತೆ ಎನ್ನಲಾಗಿದ್ದು, ಇವರು Constable ಪಾತ್ರದಲ್ಲಿ ನಟಿಸುತ್ತಾರಂತೆ. ಈ ವಿಷಯದ ಬಗ್ಗೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ಜಗಪತಿ ಬಾಬು ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರಂತೆ.. ಇದನ್ನು ಓದಿ..Kannada News: ಒಮ್ಮೆ ಹೇಳಿದರೆ ಕೇಳೋದಿಲ್ಲವೇ ಸಮಂತಾ?? ಬೇಡ ಬೇಡ ಎಂದರು ಮತ್ತದೇ ಕೆಲಸ ಮಾಡುತ್ತಿರುವುದು ಯಾಕೆ ಗೊತ್ತೆ? ಸ್ವಲ್ಪ ದಿನ ತಡೆದುಕೊಳ್ಳಿ.