Bhagyalakshmi: ಕಾವೇರಿ ಪ್ಲಾನ್ ಉಲ್ಟಾ: ಖಡಕ್ ಎಂಟ್ರಿ ಕೊಡುತ್ತಾರ ಕೀರ್ತಿ: ವೈಷ್ಣವಿ ಮನಸಿನಲ್ಲಿ ಈಗ ಏನಿದೆ ಗೊತ್ತೇ? ಮತ್ತೊಂದು ಟ್ವಿಸ್ಟ್. ಏನು ಗೊತ್ತೇ??

Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ವೀಕ್ಷಕರು ಕಾಯುತ್ತಿದ್ದ ಕ್ಷಣ, ಭಾಗ್ಯ ಕಾಯುತ್ತಿದ್ದ ಕ್ಷಣ ಎಲ್ಲವೂ ನಡೆದಿದೆ. ಭಾಗ್ಯ ತನ್ನ ಲಡ್ಡುವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಹುಡುಗ ಬೇಕು ಎಂದು ಬೇಡಿಕೊಂಡಿದ್ದಳು, ಅಂಥ ಹುಡುಗನೆ ಈಗ ಸಿಕ್ಕಿದ್ದಾನೆ, ಕಾವೇರಿ ಕೂಡ ಮಗನ ಮೇಲೆ ಹಿಡಿತ ಸಾಧಿಸುವ ಹುಡುಗಿ ಬೇಡ ತನ್ನ ಮಾತು ಕೇಳಿಕೊಂಡು ಮನೆಯಲ್ಲಿ ಎಲ್ಲರನ್ನು ನೋಡಿಕೊಂಡು ಇರುವ ಹುಡುಗಿ ಬೇಕು ಎಂದುಕೊಂಡಿದ್ದಳು, ಅದು ಕೂಡ ನಡೆದಿದೆ. ಇದೀಗ ವೈಷ್ಣವ್ ಲಕ್ಷ್ಮಿ ಮದುವೆ ನಡೆದಿದ್ದು, ವೈಷ್ಣವ್ ಕೀರ್ತಿಯನ್ನು ಮರೆಯುವ ಪ್ರಯತ್ನದಲ್ಲಿದ್ದಾನೆ..

ಇತ್ತ ಕೀರ್ತಿ ಕಾವೇರಿ ಹೇಳಿದ್ದ ಮಾತನ್ನು ನಂಬಿ, ತಾನು ಕೂಡ ಮತ್ತೆ ವೈಷ್ಣವ್ ಜೀವನದಲ್ಲಿ ಎಂಟ್ರಿ ಕೊಡೋದಕ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ. ಆದರೆ ವೈಷ್ಣವ್ ಈಗ ಕೀರ್ತಿಯ ಗುಂಗಿನಿಂದ ಹೊರಬಂದಿದ್ದಾನೆ, ಲಕ್ಷ್ಮಿಯ ಮುಗ್ಧತೆ, ಒಳ್ಳೆಯಗುಣ ಇದೆಲ್ಲವೂ ವೈಷ್ಣವ್ ಗೆ ಈಗಾಗಲೇ ಇಷ್ಟ, ಅದರಿಂದಲೇ ಆಕೆಯನ್ನು ಮಹಾಲಕ್ಷ್ಮಿ ಎಂದು ಕರೆಯುತ್ತಾನೆ, ಇದೀಗ ವೈಷ್ಣವ್ ಲಕ್ಷ್ಮಿಯನ್ನು ಹೆಂಡತಿಯಾಗಿ ಸ್ವೀಕರಿಸಲು ರೆಡಿಯಾಗಿದ್ದಾನೆ. ಲಕ್ಷ್ಮಿಗೆ ಮೊಗ್ಗಿನ ಜಡೆ ಬಿಚ್ಚುವುದಕ್ಕೆ ಸಹಾಯ ಮಾಡಲು ಕೂಡ ಹೋಗಿದ್ದಾನೆ. ಆದರೆ ಲಕ್ಷ್ಮಿ ಅದಕ್ಕೆ ಬೇಡ ಎಂದಳು.. ಇದನ್ನು ಓದಿ..Kannada News: ಸಾಕಷ್ಟು ಕಷ್ಟ, ಅನಾರೋಗ್ಯ ಇವೆಲ್ಲದರ ನಡುವೆಯೂ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದ ವಿನೋದ್ ಅಣ್ಣ ಹಾಗೂ ಲೀಲಾವತಿ ಅಮ್ಮ. ಏನು ಮಾಡುತ್ತಿದ್ದಾರೆ ಗೊತ್ತೇ?

ವೈಷ್ಣವ್ ಗೆ ಈಗ ಮೊದಲಿದ್ದ ಹಾಗೆ ಲಕ್ಷ್ಮಿ ಜೊತೆ ಇರಬೇಕಾ, ಹೇಗಿರಬೇಕು ಎನ್ನುವ ಗೊಂದಲದಲ್ಲಿ ನನ್ನನ್ನ ನಿಮ್ಮ ಫ್ರೆಂಡ್ ಎಂದುಕೊಳ್ಳಿ, ನನ್ನ ಹೆಂಡತಿ ನೀವು ಎಂದಿದ್ದು, ಆ ಮಾತಿಗೆ ಲಕ್ಷ್ಮಿ ನಿಮ್ಮ ಮನಸ್ಸಿಗೆ ಹೇಗನ್ನಿಸುತ್ತೆ ಹಾಗಿರಿ, ನನ್ನ ಮೇಲೆ ಸಿಂಪತಿ ಬರುವುದು ಬೇಡ ಎಂದು ಹೇಳಿದ್ದಾಳೆ, ಅದಕ್ಕೆ ಇಲ್ಲ, ಇನ್ನುಮುಂದೆ ಏನೇ ಮಾಡಿದರೂ ಮನಸ್ಸಿನಿಂದಲೇ ಮಾಡುವುದು, ನನ್ನ ಜೊತೆಗೆ ನೀವು ಇರ್ತೀರ ಅಲ್ವಾ ಎಂದು ಕೇಳಿದ್ದಾನೆ. ವೈಷ್ಣವ್ ಲಕ್ಷ್ಮಿ ನಡುವೆ ಪ್ರೀತಿ ಶುರುವಾಗುವುದಕ್ಕಿದೆ ಆದರೆ ಕೀರ್ತಿ ವಿಷಯದಲ್ಲಿ ಕಾವೇರಿಯ ನೆಕ್ಸ್ಟ್ ಪ್ಲಾನ್ ಏನು? ಕಾವೇರಿ ಏನು ಮಾಡುತ್ತಾಳೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಶುರುವಾಗಿದೆ. ಇದನ್ನು ಓದಿ..Film News: ತನ್ನ ಜೊತೆ ನಟಿಯಾಗಿ ನಟಿಸಿದ್ದ ನಟಿಯನ್ನೇ ಬ್ಲಾಕ್ ಮಾಡಿದ ಅಲ್ಲೂ ಅರ್ಜುನ್: ಆಕೆಯ ಪರಿಸ್ಥಿತಿ ನೋಡಿ ಅಲ್ಲುಗೆ ಏನಾಯ್ತು?? ನಟಿಗೆ ಇಂತಹ ಪರಿಸ್ಥಿತಿ ಬಂದಿದೆ ಗೊತ್ತೇ?