Samyuktha Menon: ನಟಿ ಸಂಯುಕ್ತ ಮೆನನ್ ಅವರು ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ಹೀರೊಯಿನ್ ಆಗಿದ್ದಾರೆ. ಮಲಯಾಳಂ ಬ್ಯೂಟಿ ಆಗಿರುವ ಸಂಯುಕ್ತ ಹೆಗ್ಡೆ ಇಂದು ತೆಲುಗು ಮತ್ತು ತಮಿಳಿನಲ್ಲಿ ಸಹ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇವರನ್ನು ಗೋಲ್ಡನ್ ಲೆಗ್ ಎಂದು ಕರೆಯಲಾಗುತ್ತಿದೆ. ಸಂಯುಕ್ತ ಮೆನನ್ ಅವರು ಇದೀಗ ಒಂದು ವಿಷಯದಿಂದ ಸುದ್ದಿಯಾಗುತ್ತಿದ್ದಾರ.. ಅಷ್ಟಕ್ಕೂ ಏನಾಗಿದೆ ಗೊತ್ತಾ?
ಸಂಯುಕ್ತ ಮೆನನ್ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟ ರಾಣಾ ಅವರ ಪತ್ನಿಯ ಪಾತ್ರದಲ್ಲಿ. ಬಳಿಕ ಬಿಂಬಿಸಾರ ಹಾಗೂ ನಟ ಧನುಷ್ ಅವರ ಜೊತೆಗೆ ಜೊತೆಗೆ ವಾತಿ ಸಿನಿಮಾದಲ್ಲಿ ನಟಿಸಿದರು. ಈ ಯಶಸ್ಸಿನ ನಂತರ ಸಂಯುಕ್ತ ಮೆನನ್ ಅವರು ತೆಲುಗಿನಲ್ಲಿ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹೀರೋ ಸಾಯಿ ಧರಂ ತೇಜ್ ಅವರು.
ಏಪ್ರಿಲ್ 21ರಂದು ವಿರೂಪಾಕ್ಷ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಉತ್ತಮವಾಗಿ ಹಣಗಳಿಕೆ ಮಾಡುತ್ತಾ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ. ಇನ್ನು ವಿರೂಪಾಕ್ಷ ಸಿನಿಮಾ ನಿರ್ದೇಶನ ಮಾಡಿದ್ದು ಕಾರ್ತಿಕ್ ಅವರು. ಕಾರ್ತಿಕ್ ಅವರಿಗೆ ನಟಿ ಸಂಯುಕ್ತ ಮೆನನ್ ಅವರು ದುಬಾರಿ ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದಾರೆ. ಸಿನಿಮಾಗಳು ಸೂಪರ್ ಹಿಟ್ ಆದಾಗ ನಿರ್ದೇಶಕ ಅಥವಾ ನಿರ್ಮಾಪಕರು ಕಲಾವಿದರಿಗೆ ತಂತ್ರಜ್ಞರಿಗೆ ಗಿಫ್ಟ್ ಕೊಡುವುದನ್ನು ನೋಡಿದ್ದೇವೆ..
ಆದರೆ ಇದೇ ಮೊದಲ ಸಾರಿ ಹೀರೋಯಿನ್ ಒಬ್ಬರು ನಿರ್ದೇಶಕರಿಗೆ ಗಿಫ್ಟ್ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಸಹ ಇದೆ, ಏನಾಗಿದೆ ಎಂದರೆ.. ವಿರೂಪಾಕ್ಷ ಸಿನಿಮಾ ಥಿಯೇಟರ್ ವಿಸಿಟ್ ಗೆ ಹೋಗಿದ್ದಾಗ, ಕಾರ್ತಿಕ್ ಅವರ ಫೋನ್ ಅನ್ನು ಯಾರೋ ಕದ್ದಿದ್ದು, ಈ ಕಾರಣಕ್ಕೆ ಸಂಯುಕ್ತ ಮೆನನ್ ಅವರು ಕಾರ್ತಿಕ್ ಅವರಿಗೆ ಐಫೋನ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರಂತೆ. ನಾಯಕಿಯಾಗಿ ಇವರಿಗೆ ಎಷ್ಟು ಒಳ್ಳೆಯ ಮನಸ್ಸು ಎನ್ನುವ ಸುದ್ದಿಯೊಂದು ಈಗ ವೈರಲ್ ಆಗುತ್ತಿದೆ. ಸಂಯುಕ್ತ ಅವರು ಮಾಡಿರುವ ಈ ಕೆಲಸಕ್ಕೆ ಅಭಿಮಾನಿಗಳಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.