ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಬಂದಿರುವ ಹಾಗೆ, ರಾಹು ಮತ್ತು ಕೇತು ಎರಡು ಗ್ರಹಗಳು ಸಹ ಏಪ್ರಿಲ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡಿದ್ದಾರೆ. ಪ್ರಸ್ತುತ ರಾಹು ಮೇಷ ರಾಶಿಯಲ್ಲಿದ್ದಾನೆ, ಈ ರಾಶಿಯ ಅಧಿಪತಿ ಮಂಗಳ ಗ್ರಹ ಆಗಿದೆ. ಮೇಷ ರಾಶಿಯಲ್ಲಿ ಶುಕ್ರ ಸಹ ಇದ್ದಾನೆ, ಈ ಎರಡು ಗ್ರಹಗಳು ಜೊತೆಯಾಗಿರುವುದು ಸಂತೋಷ ಮತ್ತು ವೈಭವವನ್ನು ನೀಡುತ್ತದೆ. ಈ ಎರಡು ಗ್ರಹಗಳ ನಡುವೆ ಸ್ನೇಹ ಇದೆ. ಆದರೆ ಈಗ ರಾಹು ಗ್ರಹವು ಕೃತಿಕಾ ನಕ್ಷತ್ರವನ್ನು ಬಿಟ್ಟು, ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಲಿದೆ. ಜೂನ್ 14ರಂದು, ಬೆಳಗ್ಗೆ 8:15 ಕ್ಕೆ ರಾಹು ಗ್ರಹವು ಭರಣಿ ನಕ್ಷತ್ರವನ್ನು ಪ್ರವೇಶಿಸಲಿದೆ. ಈ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಸಹ ಬೀರಲಿದೆ. ಆದರೆ ಈ ಬದಲಾವಣೆಯಿಂದ ಒಳ್ಳೆಯ ಲಾಭ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ರಾಹುವು ತನ್ನ ಸ್ಥಾನ ಬದಲಾವಣೆ ಮಾಡುತ್ತಲಿರುವುದು ಮೇಷ ರಾಶಿಯವರಿಗೆ ಲಾಭ ತಂದು ಕೊಡಲಿದೆ. ಈ ಬದಲಾವಣೆಯು ಮೇಷ ರಾಶಿಯವರಿಗೆ ಹಣದ ಲಾಭ ತಂದುಕೊಡಲಿದೆ, ಜೊತೆಗೆ ಮಾಡುವ ಎಲ್ಲಾ ಕೆಲಸಗಳಲ್ಲು ಯಶಸ್ಸು ಸಿಗಲಿದೆ. ಬೇರೆಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣವು ನಿಮ್ಮ ಕೈ ಸೇರುತ್ತದೆ. ಈ ನಕ್ಷತ್ರ ಬದಲಾವಣೆಯು ವೃತ್ತಿ ಮತ್ತು ವ್ಯವಹಾರ ಕ್ಷೇತ್ರಕ್ಕೆ ಒಳ್ಳೆಯದನ್ನು ಮಾಡುತ್ತದೆ.
ವೃಷಭ ರಾಶಿ :- ಈ ರಾಶಿಗೆ ಶುಕ್ರನು ಅಧಿಪತಿ ಆಗಿದ್ದಾನೆ. ರಾಹು ಭರಣಿ ನಕ್ಷತ್ರವನ್ನು ಪ್ರವೇಶ ಮಾಡುತ್ತಿದ್ದು, ಆ ನಕ್ಷತ್ರದ ಅಧಿಪತಿ ಸಹ ಶುಕ್ರನೆ ಆಗಿದ್ದಾನೆ, ಹಾಗಾಗಿ ಈ ಎರಡರ ಸ್ನೇಹದಿಂದ ವೃಷಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಕಟಕ ರಾಶಿ :- ಈ ರಾಶಿಯವರಿಗೆ ರಾಹುವಿನ ಸ್ಥಾನ ಬದಲಾವಣೆಯಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಲಾಭ ಸಿಗುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಉತ್ತಮವಾದ ಫಲವಿದೆ.
ತುಲಾ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲವನ್ನು ತಂದುಕೊಡುತ್ತದೆ. ಹೊಸ ವ್ಯವಹಾರ ಶುರುಮಾಡಲು ನೀವು ಬಯಸಿದ್ದರೆ, ಅದಕ್ಕಾಗಿ ಇದು ಒಳ್ಳೆಯ ಸಮಯ ಆಗಿದೆ. ಸಂತೋಷ ಮತ್ತು ಸಮೃದ್ಧಿ ನಿಮ್ಮನ್ನು ಅರಸಿ ಬರಲಿದ್ದು, ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ವೃತಿಯಲ್ಲಿ ಪ್ರೊಮೋಷನ್ ಸಿಗುತ್ತದೆ