ಪಾಪ ಹೆಂಡತಿಯನ್ನು ವಾಕಿಂಗ್ ಕರೆದುಕೊಂಡು ಹೋದ ಗಂಡ ಮಾಡಿದ್ದೇನು ಗೊತ್ತೇ?? ಹೀಗೂ ಇರ್ತಾರ?? ನಿಜಕ್ಕೂ ಷಾಕಿಂಗ್.

ನಮಸ್ಕಾರ ಸ್ನೇಹಿತರೇ ಗಂಡ-ಹೆಂಡಿರ ಸಂಬಂಧ ಎನ್ನುವುದು ಏಳು ಜನುಮದ ಅನುಬಂಧ ಎಂಬುದಾಗಿ ನಮ್ಮ ಹಿರಿಯರು ಹಲವಾರು ಹಾಡುಗಳಲ್ಲಿ ಹೇಳಿದ್ದಾರೆ. ನಂಬಿಕೆಯಿಂದಲೇ ದಾಂಪತ್ಯ ಎನ್ನುವುದು ದೀರ್ಘಕಾಲದವರೆಗೆ ನಡೆಯುತ್ತದೆ ಎಂಬುದು ನಿಮಗೆಲ್ಲಾ ಗೊತ್ತಿದೆ ಸ್ನೇಹಿತರೆ. ಆದರೆ ಇಲ್ಲಿ ಈ ಗಂಡ ಮಾಡಿರುವ ಕೆಲಸ ನೋಡಿದರೆ ಖಂಡಿತವಾಗಿಯೂ ನಂಬಿಕೆಯನ್ನುವ ಪದದ ಮೇಲಿರುವ ನಂಬಿಕೆಯೇ ಹೊರಟುಹೋಗುತ್ತದೆ ಸ್ನೇಹಿತರೆ.

ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆಯ ಕೂಡ ಇದಕ್ಕೆ ಹೊರತಾಗಿಲ್ಲ. ಇದು ನಡೆದಿರುವುದು ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ. ಹೌದು ಸ್ನೇಹಿತರೆ ಗಂಡನ ಹೆಸರು ಮಂಜುನಾಥ್ ಎಂಬುದಾಗಿ ಹಾಗೂ ಹೆಂಡತಿಯ ಹೆಸರು ಮಂಜುಳ ಎಂಬುದಾಗಿ. ಇಬ್ಬರು ಕೂಡ ಅಕ್ಕಪಕ್ಕದ ಊರಿನ ವರಾಗಿದ್ದು ಗುರುಹಿರಿಯರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು. ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು. ಇಬ್ಬರು ಕೂಡ ಬೇರೆ ಬೇರೆ ಕಡೆಯಲ್ಲಿ ಒಳ್ಳೆ ಸಂಭಾವನೆ ಸಿಕ್ಕುವ ಕೆಲಸದಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಮಂಜುಳಾಗೆ ಒಂದು ದಿನ ಮಂಜುನಾಥ್ ಬೇರೆಯೊಬ್ಬರ ಹುಡುಗಿಯ ಜೊತೆಗೆ ಸಂಬಂಧ ಇಟ್ಟುಕೊಂಡಿರುವುದು ತಿಳಿಯುತ್ತದೆ. ಮೊದಮೊದಲಿಗೆ ಮಂಜುಳಾ ಗೊತ್ತಿದ್ದರೂ ಕೂಡ ಏನು ಮಾತನಾಡದಂತೆ ತುಟಿ ಪಿಟಿಕ್ಕೆನ್ನದೆ ಇದ್ದಳು. ಆದರೆ ನಂತರ ಗಂಡನಿಗೆ ಬುದ್ಧಿ ಹೇಳಲು ಪ್ರಾರಂಭಿಸುತ್ತಾಳೆ. ಗಂಡ ಇವತ್ತಲ್ಲ ನಾಳೆ ಸರಿಯಾಗುತ್ತಾನೆ ಎಂಬ ನಂಬಿಕೆ ಅವಳದ್ದು.

ಆದರೆ ಗಂಡ ಒಂದು ದಿನ ಆಕೆಯನ್ನು ವಾಕಿಂಗ್ ಹೋಗೋಣ ಎಂದು ಕರೆದುಕೊಂಡು ಹೋಗಿ ತಾನು ಇನ್ನು ಮುಂದೆ ಸರಿಯಾಗುತ್ತೇನೆ ಎಂಬ ಸುಳ್ಳು ಭರವಸೆ ನೀಡಿ ಕರೆದುಕೊಂಡು ಹೋಗುತ್ತಾನೆ. ಹೌದು ಸ್ನೇಹಿತರಿಗೆ ಕರೆದುಕೊಂಡು ಹೋದವನು ಆಕೆಯನ್ನು ಮೊಬೈಲ್ ಚಾರ್ಜರ್ ನಿಂದ ಮುಗಿಸುತ್ತಾನೆ. ನಂತರ ಅಲ್ಲೇ ಪಕ್ಕದಲ್ಲಿದ್ದ ಸಜ್ಜೆ ಹೊಲದಲ್ಲಿ ಬಿಸಾಕಿ ಹೋಗುತ್ತಾನೆ. ನಂತರ ಪೊಲೀಸರ ತನಿಖೆಯಿಂದ ಮಂಜುನಾಥ್ ಸಿಕ್ಕಿಬೀಳುತ್ತಾನೆ. ನಂಬಿಕೆ ದ್ರೋಹ ಮಾಡಿರುವ ಅದರಲ್ಲೂ ಕೂಡ ಈ ತರಹದ ಕಾರ್ಯವನ್ನು ಎಸಗಿರುವ ಮಂಜುನಾಥ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.