ರಸ್ತೆಯಲ್ಲಿ ಸಿಕ್ಕವಳನ್ನು ಪ್ರೀತಿಸಿ ಮದುವೆಯಾದ, ಆದರೆ ಸತ್ಯ ಗೊತ್ತಾದ ಮೇಲೆ ಏನು ಮಾಡಿದ ಗೊತ್ತಾ?? ಇಂತವರು ಇರ್ತಾರ??

ನಮಸ್ಕಾರ ಸ್ನೇಹಿತರೇ ಈ ಪ್ರೀತಿ ಯಾವಾಗ ಹುಟ್ಟುತ್ತೆ ಯಾವಾಗ ಮುಗಿಯುತ್ತೆ ಅಂತ ಗೊತ್ತಾಗುವುದಿಲ್ಲ. ಪ್ರೀತಿಗೆ ಯಾವುದೇ ಭೇದ ಭಾವಗಳಿಲ್ಲ ಅದು ಹುಟ್ಟುವುದಕ್ಕೆ ಕೂಡ ಸಮಯದ ಅಡ್ಡಿಲ್ಲ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರ ಸ್ವಲ್ಪ ಬೇರೆಯದೇ ಆಗಿದೆ. ಈ ವಿಚಾರವನ್ನು ಕೇಳಿದರೆ ಖಂಡಿತ ನೀವು ಕೂಡ ಆಶ್ಚರ್ಯಚಕಿತರಾಗೋದು ಗ್ಯಾರಂಟಿ. ಯಾಕೆಂದರೆ ನಾವು ಹೇಳಹೊರಟಿರುವ ವಿಚಾರವೇ ಹಾಗೆ ಇದೆ.

ಹೌದು ಗೆಳೆಯರೇ ಲೋಕೇಶ್ ಎಂಬಾತ ಕನಕಪುರ ಮಾರ್ಗದ ಬಸ್ ಡ್ರೈವರ್ ಗೀತಾ ಎಂಬುವವಳನ್ನು ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾನೆ. ಆದರೆ ಈಗ ಆತ ಆತನ ಪತ್ನಿ ಓಡಿ ಹೋಗಿದ್ದಾಳೆ ಎಂದು ಪೋಲಿಸ್ ಬಳಿ ದೂರು ಕೊಟ್ಟಿದ್ದಾನೆ. ಆದರೆ ಆತ ಮಾಡಿ ಬಂದಿರುವ ಕೆಲಸವನ್ನು ನೋಡಿ ಈಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಾಲ್ಕು ವರ್ಷದ ಹಿಂದೆ ಬಸ್ಸಿನಲ್ಲಿ ಕೆಲಸ ಮಾಡುವುದಕ್ಕೆ ಮುನ್ನ ಲೋಕೇಶ್ ಲಾರಿಯಲ್ಲಿ ಡ್ರೈವರ್ ಆಗಿದ್ದ.

ಈ ಸಂದರ್ಭದಲ್ಲಿ ಈತ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಮೂಲತಹ ಹಾಸನದವಳು. ಇನ್ನು ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ಇವರಿಬ್ಬರು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಮೇಲೆ ಎಲ್ಲವೂ ಕೂಡ ಚೆನ್ನಾಗಿತ್ತು ಸಂಸಾರ ಕೂಡ ಸುಖದಿಂದ ಸಾಗಿತ್ತು. ಆದರೆ ಇತ್ತೀಚಿಗೆ ಲೋಕೇಶ್ ಗೆ ತನ್ನ ಹೆಂಡತಿಯ ಜಾತಿ ಬಗ್ಗೆ ತಿಳಿದು ಬಂದಿದೆ.

ಇಬ್ಬರ ಜಾತಿ ಕೂಡ ಒಂದೇ ಆಗಿರಲಿಲ್ಲ ಎಂಬುದು ಇತ್ತೀಚೆಗೆ ತಿಳಿದು ಬಂದಿದೆ. ಹೀಗಾಗಿ ಜಾತಿಯ ಕುರಿತಂತೆ ದಿನಾಲು ಮನೆಯಲ್ಲಿ ಜಗಳ ತೆಗೆಯುತ್ತಿದ್ದ. ಮುಂಚೆ ಹೆಂಡತಿಯನ್ನು ತನ್ನ ಜೀವ ಎನ್ನುತ್ತಿದ್ದ ಲೋಕೇಶ್ ಈಗ ಜಾತಿಯ ಕಾರಣಕ್ಕಾಗಿ ಪ್ರೀತಿಯ ಇಲ್ಲದಂತೆ ಆಡುತ್ತಿದ್ದ. ಈ ಸಂದರ್ಭದಲ್ಲಿ ಲೋಕೇಶ್ ಮಾಡಿರುವ ಕೆಲಸ ಎಲ್ಲರೂ ಕೂಡ ಬೆಚ್ಚಿಬೀಳುವಂತಿತ್ತು.

ಇದೇ ರೀತಿ ಇತ್ತೀಚಿಗಷ್ಟೇ ಇವರಿಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಗೀತಾ ರವರ ಉಸಿರನ್ನೇ ನಿಲ್ಲಿಸಿ ಬಿಟ್ಟಿದ್ದಾನೆ. ಹೆಂಡತಿ ಪ್ರಾಣ ಬಿಟ್ಟ ಮೇಲೆ ಏನು ಮಾಡಬೇಕು ಎಂದು ತಿಳಿಯದೆ ಆಕೆಯನ್ನು ಯೂರಿಯಾ ಚೀಲದಲ್ಲಿ ತುಂಬಿಸಿ ಹೊಲಕ್ಕೆ ಎತ್ತುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಎಳ್ಳಿನ ಪೈರನ್ನು ನಾಟಿ ಮಾಡಿ ಬಂದಿದ್ದಾನೆ. ಇನ್ನು ಇದರ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಹೋಗಿ ತನ್ನ ಹೆಂಡತಿ ಮನೆಯಲ್ಲಿರುವ ಹಣ ಆಭರಣಗಳನ್ನು ತೆಗೆದುಕೊಂಡು ಯಾರದೋ ಜೊತೆ ಓಡಿ ಹೋಗಿದ್ದಾಳೆ ಎಂಬುದಾಗಿ ಕೂಡ ಹೇಳಿದ್ದಾನೆ.

ಇದರ ಕುರಿತಂತೆ ಗೀತಾಳ ಪೋಷಕರು ಅನುಮಾನ ವ್ಯಕ್ತಪಡಿಸಿದಾಗ ಲೋಕೇಶನನ್ನು ಕರೆದುಕೊಂಡು ಬಂದು ಸರಿಯಾಗಿ ಪೋಲಿಸ್ ರೀತಿಯಲ್ಲಿ ವಿಚಾರಿಸಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಕೇವಲ ಒಂದು ಚಿಕ್ಕ ವಿಚಾರಕ್ಕೆ ಹೆಂಡತಿಯನ್ನು ಪ್ರೀತಿಯನ್ನು ಕೂಡ ಮರೆತು ಮುಗಿಸಿದ್ದಾನೆ ಎಂದರೆ ಆತನ ಮನಸ್ಸು ಜಾತಿಯ ವಿಚಾರವಾಗಿ ಯಾವ ರೀತಿಯಲ್ಲಿ ಇರಬಹುದು ಎಂಬುದನ್ನು ನೀವೇ ಲೆಕ್ಕಿಸಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.