ತಂಗಿ ಹಾಕಿದ ಸೆಲ್ಫಿಯೇ ನೋಡಿ, ಸ್ಥಳಕ್ಕೆ ಹುಡುಕಿಕೊಂಡ ಹೋದ ಅಣ್ಣನಿಗೆ ಕಾದಿತ್ತು ಶಾಕ್. ತಂಗಿಯ ಸ್ಥಿತಿ ಏನಾಗಿ ಹೋಗಿತ್ತು ಗೊತ್ತೇ??

ಯುವಕ ಯುವತಿಯರು ಈಗ ದುಡುಕು ನಿರ್ಧಾರಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಅಂತಹ ಹಲವಾರು ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇಂಥದ್ದೇ ಒಂದು ಘಟನೆ ಇದೀಗ ಕೇರಳದ ವಯನಾಡಿನಲ್ಲಿ ನಡೆದಿದೆ. ಹುಡುಗಿಯೊಬ್ಬಳು ಕಲ್ಲು ಕ್ವಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ರೀತಿ ಮಾಡಿಕೊಳ್ಳುವ ಮೊದಲು, ಹರಿಯುವ ನೀರಿನ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾಳೆ. ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದ ಹತ್ತಿರ ಇರುವ ವಿಕಾಸ್ ಕಾಲೋನಿ ಬಳಿ ಇರುವ ಕಲ್ಲು ಕ್ವಾರಿಗೆ ಹಾರಿದ್ದಾಳೆ.

ಮೃತ ಹುಡುಗಿಯ ಹೆಸರು ಪ್ರವೀಣಾ, ಈಕೆಯ ವಯಸ್ಸು 20, ಈ ರೀತಿ ಮಾಡಿಕೊಳ್ಳುವುದಕ್ಕಿಂತ ಮೊದಲು, ಫೋಟೋ ತೆಗೆದು ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾಳೆ. ಅದನ್ನು ನೋಡಿದ ಆಕೆಯ ಅಣ್ಣ, ತಕ್ಷಣವೇ ತಂಗಿ ಇದ್ದ ಸ್ಥಳಕ್ಕೆ ಬಂದಿದ್ದಾನೆ. ಅಣ್ಣನನ್ನು ನೋಡಿದ ಕೂಡಲೇ ತಂಗಿ ಕ್ವಾರಿಯ ಒಳಗೆ ಹಾರಿದ್ದಾಳೆ. ತಂಗಿಯನ್ನು ಉಳಿಸಿಕೊಳ್ಳಲು ತಕ್ಷಣವೇ ಆಕೆಯ ಅಣ್ಣ ಸಹ ನೀರಿಗೆ ಹಾರಿದ್ದಾನೆ, ಆದರೆ ಆತನಿಗೆ ಬರದ ಕಾರಣ ತಂಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇಬ್ಬರು ಹಾರುವುದನ್ನು ನೋಡಿದ ಸ್ಥಳೀಯರು, ಆಕೆಯ ಸಹೋದರನ ಬಳಿ ಹಗ್ಗ ಎಸೆದಿದ್ದು, ಅದನ್ನು ಹಿಡಿದು ಆತ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ ತಂಗಿಯ ಪ್ರಾಣ ಹೋಯಿತು, ಮಗಳನ್ನು ಕಳೆದುಕೊಂಡ ಆಕೆಯ ತಂದೆ ತಾಯಿ ನೋವಿನಲ್ಲಿದ್ದಾರೆ. ಸುಲ್ತಾನ್ ಬತೇರಿಯ ನರ್ಸಿಂಗ್ ಶಾಲೆಯಲ್ಲಿ ಪ್ರವೀಣಾ ಓದು ಮುಗಿಸಿ, ಅಲ್ಲಿಯೇ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಸಹ ಮಾಡುತ್ತಿದ್ದಳು. ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಏನು ಎಂದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.