Neer Dose Karnataka
Take a fresh look at your lifestyle.

ನಿಮಗೆ ಈ ಅದೃಷ್ಟದ ಕನಸುಗಳು ಬಂದರೆ ಅಪ್ಪಿ ತಪ್ಪಿಯೂ ಕೂಡ ಯಾರಿಗೂ ಹೇಳಬೇಡಿ, ಅದೃಷ್ಟ ಹಾಗೆ ಹಿಂದಕ್ಕೆ ಹೋಗಿ ಬಿಡುತ್ತದೆ.

ಕನಸು ಎನ್ನುವುದು ಮನುಷ್ಯರು ನಿದ್ದೆ ಮಾಡುವಾಗ ನಡೆಯುವ ಸಾಮಾನ್ಯವಾದ ಪ್ರಕ್ರಿಯೆ. ಎಲ್ಲರೂ ಕನಸು ಕಾಣುತ್ತೇವೆ, ಆದರೆ ಕನಸುಗಳಿಗೆ ಅರ್ಥವಿದೆ. ಕನಸುಗಳು ಸೂಚನೆ ನೀಡುತ್ತದೆ. ಶುಭ ಮತ್ತು ಅಶುಭಫಲದ ಸೂಚನೆಯನ್ನು ಕನಸು ನೀಡುತ್ತದೆ. ಇಂತಹ ಸಮಯದಲ್ಲಿ ಬೀಳುವ ಕನಸು ನನಸಾಗುತ್ತದೆ, ಅಥವಾ ಒಳ್ಳೆಯ ಫಲ ಸಿಗುತ್ತಡೆ ಎಂದು ಹೇಳುತ್ತಾರೆ. ಕೆಲವು ಕನಸುಗಳು, ನಿಮ್ಮ ಜೀವನಕ್ಕೆ ಅಪಾರವಾದ ಸಂತೋಷ ಮತ್ತು ಹಣವನ್ನು ತರುತ್ತದೆ. ಆ ಕನಸುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಸ್ವಪ್ನ ಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ಒಂದು ಕಲಶದಲ್ಲಿ ಬೆಳ್ಳಿಯ ಆಭರಣಗಳು ಅಥವಾ ಬೆಳ್ಳಿಯ ನಾಣ್ಯಗಳು ತುಂಬಿರುವುದನ್ನು ನೋಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಈ ಕನಸಿನ ಬಗ್ಗೆ ಯಾರ ಜೊತೆಗೂ ಹೇಳಬಾರದು, ಇದು ಅದೃಷ್ಟದ ಸಂಕೇತ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗೂ ಸಂತೋಷ ಸಮೃದ್ಧಿ ನಿಮ್ಮದಾಗುತ್ತದೆ.
*ಕನಸಿನಲ್ಲಿ ಮೀನು ಈಜುತ್ತಿರುವುದು ಅಥವಾ ಮೀನು ಹಿಡಿಯುತ್ತಿರುವುದನ್ನು ನೋಡಿದರೆ ಒಳ್ಳೆಯದು ಎಂದು ಹೇಳುತ್ತಾರೆ..ಈ ಕನಸು ಬಿದ್ದರೆ, ಹೆಚ್ಚಿನ ಹಣ ನಿಮ್ಮ ಬಳಿಗೆ ಬರುತ್ತದೆ. ಈ ಕನಸಿನ ಬಗ್ಗೆ ಯಾರಿಗೂ ಹೇಳಬಾರದು.

*ಸಂಪತ್ತಿನ ರಕ್ಷಕ ಎಂದು ಕರೆಯುವ ನಾಗದೇವರು, ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ ಬೇಗ ಶ್ರೀಮಂತರಾಗುತ್ತೀರಿ ಎಂದು ಅರ್ಥ. ಲಕ್ಷ್ಮಿದೇವಿಗೆ ಪ್ರಿಯವಾಗಿರುವ ಕಮಲದ ಹೂವು ಕನಸಿನಲ್ಲಿ ಕಂಡರೆ, ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ ಎಂದು ಅರ್ಥ. ಈ ಕನಸಿನ ಬಗ್ಗೆ ಯಾರಿಗೂ ಹೇಳಬೇಡಿ.
*ನಿಮ್ಮ ಕನಸಿನಲ್ಲಿ ಹೂವಿನ ಉದ್ಯಾನ ಕಂಡರೆ, ಹೆಚ್ಚಿನ ಸಂತೋಷ ನಿಮ್ಮ ಜೀವನಕ್ಕೆ ಬರುತ್ತದೆ ಎಂದು ಅರ್ಥ. ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ ಎನ್ನುವುದನ್ನು ಈ ಕನಸು ಸೂಚಿಸುತ್ತದೆ

Comments are closed.