Neer Dose Karnataka
Take a fresh look at your lifestyle.

Kannada News: ಫೋನ್ ನಲ್ಲಿ ಮಾತನಾಡುತ್ತಿರುವಾಗ ಮುತ್ತು ಕೊಟ್ಟು ಓಡಿ ಹೋದ ಯುವಕ ನಿಜಕ್ಕೂ ಯಾರು ಗೊತ್ತೇ?? ಆಕೆಗೆ ಏನಾಗಬೇಕು ಅಂತೇ ಗೊತ್ತೇ??

Kannada News: ಈಗಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ಭದ್ರತೆ ಇಲ್ಲ, ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ. ಇಂತಹ ಹಲವು ಘಟನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಪಾಟ್ನಾದ ಜಮುಯಿ ಜಿಲ್ಲೆಯ ಸದರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ, ಆಕೆ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ, ಆಸ್ಪತ್ರೆಯ ಆವರಣದಲ್ಲಿ ಆಕೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗ, ಒಂದು ಹುಡುಗ ಬಂದು ಬಲವಂತವಾಗಿ ಮುತ್ತು ಕೊಟ್ಟು ಓಡಿ ಹೋಗಿದ್ದಾನೆ.

ಈ ಮಹಿಳೆ ಆರೋಗ್ಯ ಕಾರ್ಯಕರ್ತೆಯಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾಳೆ, ಅಂದು ಕೂಡ ಅದೇ ರೀತಿ, ಆಸ್ಪತ್ರೆಯ ಆವರಣದಲ್ಲಿ ಫೋನಿನಲ್ಲಿ ಮಾತನಾಡುತ್ತಾ ಇರುವಾಗ, ಆಕೆಯ ಹತ್ತಿರ ಬಂದ ಒಂದು ಹುಡುಗ ಆಕೆಗೆ ಒತ್ತಾಯವಾಗಿ ಮುತ್ತು ಕೊಟ್ಟು, ಕಾಂಪೌಂಡ್ ಹಾರಿ ಓಡಿ ಹೋಗಿದ್ದಾನೆ. ಹೀಗೆ ಮಾಡಿದ ಈ ವ್ಯಕ್ತಿ ಅದೇ ಆಸ್ಪತ್ರೆಗೆ ತನ್ನ ಸ್ನೇಹಿತನನ್ನು ನೋಡಲು ಬಂದಿದ್ದ. ಈ ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ರೀತಿ ಆ ಹುಡುಗ ಬೇಕೆಂದೇ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಟ್ರಾಫಿಕ್ ನಿಯಮದಲ್ಲಿ ಬದಲಾವಣೆ: ಇನ್ನು ಮುಂದೆ ಹೆಲ್ಮೆಟ್ ಹಾಕಿದ್ರು 2000 ಸಾವಿರ ದಂಡ ಫಿಕ್ಸ್. ಈ ಹೊಸ ರೂಲ್ಸ್ ಏನು ಹೇಳುತ್ತದೆ ಗೊತ್ತೇ??

ಘಟನೆ ನಡೆದ ತಕ್ಷಣವೇ ಆ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಎಫ್.ಐ.ಆರ್ ಹಾಕಿರುವ ಪೊಲೀಸರು ಸಿಸಿಟಿವಿ ಆಧಾರ ಇಟ್ಟುಕೊಂಡ ಆ ಹುಡುಗನನ್ನು ಹಿಡಿದು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವನನ್ನು ಹಿಡಿದು ಬಂಧಿಸುತ್ತೇವೆ ಎಂದು ಜಮುಯಿ ಜಿಲ್ಲೆಯ ಎಸ್ಪಿ ಆಗಿರುವ ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಮಹಿಳೆಯರಿಗೆ ಸೇಫ್ಟಿ ಇಲ್ಲ, ಇಂಥವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಸಂಪೂರ್ಣ ತಲೆ ಕೆಡಿಸ್ಕೊಂಡ ಪೊಲೀಸರು: ಹುಡುಗಿ ಕಾಣೆಯಾದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಗೊತ್ತೇ??

Comments are closed.