Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಕಂಡಕ್ಟರ್ ಬೆಂ’ಕಿಗಾಹುತಿ ಕೇಸ್ ಗೆ ಊಹಿಸದ ತಿರುವುದು; ಪೊಲೀಸರಿಂದ ಭರ್ಜರಿ ಹೆಜ್ಜೆ. ಶಾಕ್ ಆದ ರಾಜ್ಯದ ಜನತೆ.

Kannada News: ಬೆಂಗಳೂರಿನ ಬ್ಯಾಡರ ಹಳ್ಳಿಯ ಲಿಂಗಧೀರನ ಹಳ್ಳಿಯಲ್ಲಿ ಮೂರು ದಿನಗಳ ಹಿಂದೆ ನಡೆದ ಅವಘಡ ಈಗ ಭಾರಿ ಚರ್ಚೆಗೆ ಒಳಗಾಗಿದೆ. ರಾತ್ರಿ ನಾರ್ಮಲ್ ಆಗಿಯೇ ಬಸ್ ಸ್ಟ್ಯಾಂಡ್ ಗೆ ಹೋಗಿ ನಿಂತ ಬಸ್ ನಲ್ಲಿ ಇದ್ದಕ್ಕಿದ್ದ ಹಾಗೆ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಸ್ಥಳದಲ್ಲಿಯೇ ಬಸ್ ಕಂಡಕ್ಟಟ್ ನ ಸಜೀವ ದಹನ ನಡೆದು ಹೋಯಿತು. ಈ ಘಟನೆ ಅಲ್ಲಿದ್ದವರನ್ನು ಬೆಚ್ಚಿ ಬೀಳಿಸಿದೆ. ಪಾಪ ಮುತ್ತಪ್ಪ ಎನ್ನುವ ಆ ಕಂಡಕ್ಟರ್ ಗೆ ಇಂತ ಅನ್ಯಾಯ ಆಗಬಾರದಿತ್ತು ಎಂದು ಎಲ್ಲರೂ ಅನುಕಂಪ ತೋರಿಸುತ್ತಿದ್ದಾರೆ. ಆದರೆ ಈ ಕೇಸ್ ದಿನದಿಂದ ದಿನಕ್ಕೆ ಬೇರೆಯದೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ರಾತ್ರಿ 10:30 ಗಂಟೆಗೆ ಸರಿಯಾಗಿ ಬಸ್ ಬಂದು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದು, ಬೆಳಗ್ಗಿನ ಜಾವ 04:27ರ ಸಮಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿ ಅವಘಡ ಸಂಭವಿಸಿದೆ. ಇದು ನಡೆದಿರುವುದೋ ಸಹಜವಾಗಿಯೋ ಅಥವಾ ಬೇರೆ ಯಾರದ್ದಾದರು ಕೈವಾಡ ಇದರಲ್ಲಿ ಇದೆಯಾ ಎನ್ನುವ ಅನುಮಾನ ಈಗ ಪೊಲೀಸರಲ್ಲಿ ಶುರುವಾಗಿದ್ದು, ಇದಕ್ಕ ಸಂಬಂಧಿಸಿದ ಹಾಗೆ, ಈಗಾಗಲೇ ತನಿಖೆ ಎಲ್ಲವೂ ಶುರುವಾಗಿದೆ. ಎಫ್.ಎಸ್.ಸೈ.ಎಲ್ ಅಧಿಕಾರಿಗಳು ಬಸ್ ಸ್ಟ್ಯಾಂಡ್ ಗೆ ಬಂದು ಸ್ಥಳವನ್ನು ಪರೀಕ್ಷೆ ಮಾಡಿ, ಸಿಕ್ಕ ಸ್ಯಾಂಪಲ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇತ್ತೀಚೆಗೆ ಪರೀಕ್ಷೆ ಬಸ್ ಅನ್ನು ಪರೀಕ್ಷೆ ಮಾಡಲಾಗಿದ್ದು, ಬಸ್ ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಸಂಪೂರ್ಣ ತಲೆ ಕೆಡಿಸ್ಕೊಂಡ ಪೊಲೀಸರು: ಹುಡುಗಿ ಕಾಣೆಯಾದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಗೊತ್ತೇ??

ಹಾಗಾಗಿ ಈ ಘಟನೆಯ ಹಿಂದೆ ಮತ್ತೊಬ್ಬ ವ್ಯಕ್ತಿ ಅಂದರೆ ಆ ಬಸ್ ನ ಡ್ರೈವರ್ ನ ಕೆಲಸ ಇದೆಯಾ ಎನ್ನುವ ಹೊಸ ದೃಷ್ಟಿಕೋನ ಶುರುವಾಗಿದೆ. ಏಕೆಂದರೆ ಅಂದು ಈ ರೀತಿ ಆದ ದಿನ, ಮಧ್ಯರಾತ್ರಿ 3 ಗಂಟೆಗೆ ಒಂದು ಸಾರಿ, 4 ಗಂಟೆಗೆ ಒಂದು ಸಾರಿ ಡ್ರೈವರ್ ಎಚ್ಚರಗೊಂಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಕೇಳಿದರೆ, ಮೂತ್ರವಿಸರ್ಜನೆಗೆ ಎದ್ದಿದ್ದೆ ಎಂದು ಹೇಳಿದ್ದಾನೆ. ಆದರೆ ಈತ ಎದ್ದಿದ್ದ ಅರ್ಧ ಗಂಟೆಯ ಒಳಗೆ ಇಂಥ ದೊಡ್ಡ ಅನಾಹುತ ನಡೆದು ಹೋಗಿದೆ, ಹಾಗಾಗಿ ಈ ಡ್ರೈವರ್ ಇಂದಲೇ ಇಂಥಹ ಕೆಲಸ ನಡೆದಿದೆಯಾ ಎನ್ನುವ ಅನುಮಾನ ಶುರುವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ಫೋನ್ ನಲ್ಲಿ ಮಾತನಾಡುತ್ತಿರುವಾಗ ಮುತ್ತು ಕೊಟ್ಟು ಓಡಿ ಹೋದ ಯುವಕ ನಿಜಕ್ಕೂ ಯಾರು ಗೊತ್ತೇ?? ಆಕೆಗೆ ಏನಾಗಬೇಕು ಅಂತೇ ಗೊತ್ತೇ??

Comments are closed.