Neer Dose Karnataka
Take a fresh look at your lifestyle.

ಪುನೀತ್ ರವರಿಗೆ ದಿಡೀರ್ ಕಾಲ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋನ ಕಾರಣದಿಂದ ಬಹುತೇಕ ಜಗತ್ತು ಸ್ತಬ್ಧವಾಗಿದೆ, ಇತ್ತೀಚಿನ ದಿನಗಳಲ್ಲಿ ಜನ ಜೀವನ ಸಾಮಾನ್ಯ ರೀತಿಗೆ ಮರಳುತ್ತಿರುವ ಸಂದರ್ಭದಲ್ಲಿ ಇದೀಗ ಭಾರತದಲ್ಲಿ ಎರಡನೆಯ ಅಲೆ ಆರಂಭವಾಗಿದೆ, ಮೊದಲನೇ ಅಲೆಯ ಸಂದರ್ಭದಲ್ಲಿ ಸಂಪೂರ್ಣ ದೇಶವೇ ಸ್ತಬ್ಧವಾಗಿತ್ತು. ಎಲ್ಲರೂ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿತ್ತು.

ಆದರೆ ಈ ಬಾರಿ ಈ ರೀತಿ ಮಾಡಲು ಸಾಧ್ಯವಿಲ್ಲ ಏಕೆಂದರೆ ಈಗಾಗಲೇ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ, ಇಂತಹ ಸಂದರ್ಭದಲ್ಲಿ ಮೊದಲನೇ ಅಲೆ ಬಂದಾಗ ಹಲವಾರು ಸೆಲೆಬ್ರಿಟಿಗಳು ವಿವಿಧ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಕರ್ನಾಟಕದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಪುನೀತ್ ರಾಜಕುಮಾರ್ ಅವರು ಕೂಡ ವಿವಿಧ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಮೊದಲಿಗೆ ಕೊರೊನ ನಿರ್ವಹಣೆಯ ನಿಧಿಗೆ ಲಕ್ಷ ಲಕ್ಷ ದುಡ್ಡನ್ನು ನೀಡಿದ ಪುನೀತ್ ರಾಜಕುಮಾರ್ ರವರು ತದ ನಂತರ ಜನ ಸಾಮಾನ್ಯರ ಹಿತಕ್ಕಾಗಿ ಎಲ್ಲರೂ ಮನೆಯಲ್ಲಿ ಇದ್ದೀರಾ ಇಂತಹ ಸಂದರ್ಭದಲ್ಲಿ ನಿಮ್ಮ ಫಿಟ್ನೆಸ್ ಕುರಿತು ಗಮನ ಹರಿಸಿ, ನೀವು ಫಿಟ್ ಆಗಿದ್ದರೆ ಕೊರೋನಾ ನಿಮ್ಮನ್ನು ಕಾಡುವ ಸಾಧ್ಯತೆ ಬಹಳ ಕಡಿಮೆ ಒಂದು ವೇಳೆ ಕೋರೋಣ ಬಂದರು ಕೂಡ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು

ಈ ವಿಡಿಯೋ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಇದ್ದ ಕಾರಣ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ವಿವಿಧ ರಾಜ್ಯಗಳಲ್ಲಿ ಯು ಕೂಡ ಪುನೀತ್ ರಾಜಕುಮಾರ್ ರವರ ವಿಡಿಯೋ ಕೋಟ್ಯಂತರ ಜನರನ್ನು ತಲುಪುವುದರಲ್ಲಿ ಯಶಸ್ವಿಯಾಗಿತ್ತು, ಇನ್ನು ಇದೇ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ರವರ ಆಪ್ತ ಸ್ನೇಹಿತರೋಬ್ಬರು ಕೂಡ ಈ ವಿಡಿಯೋ ನೋಡಿ ಬಹಳ ಸ್ಪೂರ್ತಿ ಪಡೆದು ಕೊಂಡು ಆ ವಿಡಿಯೋವನ್ನು ಧೋನಿ ರವರ ಜೊತೆ ಕೂಡ ಹಂಚಿಕೊಂಡಿದ್ದರು

ಈ ವಿಡಿಯೋ ನೋಡಿದ ಮಹೇಂದ್ರ ಸಿಂಗ್ ದೋನಿ ರವರು ನಿಜಕ್ಕೂ ಸ್ಪೂರ್ತಿ ಪಡೆದು ಕೊಂಡು ನಿಮ್ಮ ವೀಡಿಯೋ ನೋಡಿದ ಬಳಿಕ ನಾನು ಕೂಡ ಮನೆಯಲ್ಲಿ ವರ್ಕೌಟ್ ಮಾಡಲು ನಿರ್ಧಾರ ಮಾಡಿದ್ದೇನೆ, ಈ ವೀಡಿಯೋ ಮೂಲಕ ನೀವು ಜನರ ಜಾಗೃತಿಗೆ ಕಾಳಜಿ ವಹಿಸಿರುವುದು ನಿಜಕ್ಕೂ ಒಂದು ಉತ್ತಮ ಸಂದೇಶವಾಗಿದೆ ಎಂದು ಪುನೀತ್ ರಾಜಕುಮಾರ್ ಅವರಿಗೆ ಕರೆ ಮಾಡಿ ಹೇಳಿದ್ದಾರೆ.

ಈ ಕುರಿತು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಯುವ ರತ್ನ ಸಿನಿಮಾ ನಿರ್ದೇಶಕರಾಗಿರುವ ಸಂತೋಷ ಆನಂದ ರವರು ಮಾತನಾಡಿ ಈ ವಿಷಯವನ್ನು ಬಹಿರಂಗ ಪಡಿಸಿ, ಮಹೇಂದ್ರ ಸಿಂಗ್ ದೋನಿ ರವರು ನೇರವಾಗಿ ಪುನೀತ್ ರಾಜಕುಮಾರ್ ಅವರಿಗೆ ಕಾಲ್ ಮಾಡಿ ಈ ರೀತಿ ಹೇಳಿದರು ಎಂದು ವಿವರಣೆ ನೀಡಿದ್ದಾರೆ.

Comments are closed.