Neer Dose Karnataka
Take a fresh look at your lifestyle.

ತೆಲುಗು ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಕುರಿತು ಶಾಕಿಂಗ್ ಹೇಳಿಕೆ ನೀಡಿದ ನಟ ವಸಿಷ್ಟ ಸಿಂಹ?? ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರತಿಭಾನ್ವಿತ ನಟರು ಇದ್ದಾರೆ. ಆದರೆ ಧ್ವನಿಯ ವಿಚಾರಕ್ಕೆ ಬಂದಾಗ ನಮಗೆ ಮೊದಲು ನೆನಪಾಗುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಂತರ ಆರುಮುಗ ರವಿಶಂಕರ್ ನಂತರ ಇತ್ತೀಚಿನ ದಿನಗಳಲ್ಲಿ ಜನಪ್ರಿಯರಾಗಿರುವ ನಮ್ಮ ನೆಚ್ಚಿನ ವಸಿಷ್ಠ ಸಿಂಹ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ವಸಿಷ್ಟ ಸಿಂಹ ರವರ ಗರುಡ ಕಂಠ ಎಲ್ಲರ ಮನಗೆದ್ದು ಹಾಗೂ ನಟನೆಯ ಮೂಲಕ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಎಲ್ಲಾ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿರುವ ವಸಿಷ್ಠ ಸಿಂಹ ರವರು ಇತ್ತೀಚಿಗಷ್ಟೇ ವಿಕ್ಟರಿ ವೆಂಕಟೇಶ್ ನಟನೆಯ ನಾರಪ್ಪ ಚಿತ್ರದಲ್ಲಿ ನಟಿಸಿದ್ದರು. ಇನ್ನು ಈಗಾಗಲೇ ವಸಿಷ್ಠರ ಅವರ ಕೈಯಲ್ಲಿ ಸಾಕಷ್ಟು ತೆಲುಗು ಚಿತ್ರಗಳು ಕೂಡ ಇವೆ. ಮುಂದಿನ ದಿನಗಳಲ್ಲಿ ವಸಿಷ್ಠ ಅವರು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಕಾರಣ ನಿಮಗೆಲ್ಲ ಗೊತ್ತಿರೋ ಹಾಗೆ ವಸಿಷ್ಟ ಸಿಂಹ ರವರು ಯಾವ ಪಾತ್ರವನ್ನು ಕೂಡ ಸುಲಲಿತವಾಗಿ ಮಾಡಬಲ್ಲರು. ಇನ್ನು ಇತ್ತೀಚಿಗಷ್ಟೇ ತೆಲುಗು ಸಂದರ್ಶನವೊಂದರಲ್ಲಿ ಭಾಗವಹಿಸಿರುವ ನಟ ವಸಿಷ್ಟ ಸಿಂಹ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರ ಕುರಿತಂತೆ ಏನು ಹೇಳಿದ್ದಾರೆ ಗೊತ್ತಾ.

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ತೆಲುಗು ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ನಟ ವಸಿಷ್ಠ ಸಿಂಹ ರವರು ಕೆಜಿಎಫ್ ಚಾಪ್ಟರ್ 1 10ರೂಪಾಯಿ ಎಂದುಕೊಂಡರೆ ಕೆಜಿಎಫ್ ಚಾಪ್ಟರ್ 2 ನೂರು ಸಾವಿರ ರೂಪಾಯಿ ಆಗಿದೆ. ಅಂದರೆ ಆ ಮಟ್ಟಕ್ಕೆ ಉನ್ನತಮಟ್ಟದಲ್ಲಿ ಮೂಡಿಬಂದಿದೆ ಎಂದರ್ಥ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಹೇಳುವುದಾದರೆ ನನ್ನ ಮೊದಲ ಸೂಪರ್ ಹಿಟ್ ಚಿತ್ರ ರಾಜಾಹುಲಿ ಅವರ ನಾಯಕತ್ವದಲ್ಲಿ ಮೂಡಿ ಬಂದಿತ್ತು. ಅಂದಿನಿಂದ ಇಂದಿನವರೆಗೂ ಅವರು ಕೊಂಚವು ಕೂಡ ಬದಲಾವಣೆಯಾಗಿಲ್ಲ. ಇನ್ನು ಐದು ವರ್ಷದ ಹಿಂದೆ ನಮ್ಮ ಕನ್ನಡ ಚಿತ್ರರಂಗವನ್ನು ವಿಶ್ವಾದ್ಯಂತ ಎತ್ತರಕ್ಕೆ ಬೆಳೆಸುವ ಮಾತನಾಡಿದರು ಮಾತಿನಂತೆ ನಡೆದುಕೊಂಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

Comments are closed.