Neer Dose Karnataka
Take a fresh look at your lifestyle.

ಆ ಒಬ್ಬರ ಜೊತೆ ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ ಎಂದು ಡಿ ಬಾಸ್ ಶಪಥ ಹಾಕಿರುವುದು ಯಾಕೆ ಗೊತ್ತೇ?? ಆತ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್ ರವರಿಗೆ ಅವರದ್ದೇ ಆದಂತಹ ವಿಪರೀತವಾದ ಅಭಿಮಾನಿ ಬಳಗ ಇದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರು ಆಗಿರುವ ತೂಗುದೀಪ್ ಶ್ರೀನಿವಾಸ್ ರವರ ಮಗನಾಗಿದ್ದರೂ ಕೂಡ ತಮ್ಮ ತಂದೆ ಹೆಸರನ್ನು ಬಳಸಿಕೊಳ್ಳದೆ ತಮ್ಮ ಸ್ವಂತ ಪ್ರತಿಭೆಯ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಬೆಳೆದು ಕೊಂಡು ಬಂದು ಇಂದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅದೆಷ್ಟು ಮಂದಿ ಯುವ ಪ್ರತಿಭೆಗಳಿಗೆ ಅವರ ಕಾರ್ಯಕ್ರಮಗಳಿಗೆ ಹೋಗಿ ಅಥವಾ ಅವರ ಟ್ರೈಲರ್ ಟೀಸರ್ ಗಳನ್ನು ಬಿಡುಗಡೆ ಮಾಡಿ ಅವರಿಗೆ ಪ್ರೋತ್ಸಾಹವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಅದೆಷ್ಟೋ ಚಿತ್ರಗಳಿಗೆ ಎಷ್ಟೊಂದು ನಿರ್ಮಾಪಕರ ಬಳಿ ಹಣವನ್ನು ತೆಗೆದುಕೊಳ್ಳದೆ ಅವರಿಗೆ ಸಹಾಯ ಮಾಡಿರುವುದು ನೀವು ಕೇಳಿರುತ್ತೀರಿ. ಇಂದು ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಮಂದಿ ನಿರ್ಮಾಪಕರು ಹಾಗೂ ನಿರ್ದೇಶಕರು ಅನ್ನ ತಿನ್ನುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿದೆ ಸ್ನೇಹಿತರೆ.

ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಬ್ಬ ನಿರ್ಮಾಪಕರ ಬಳಿ ನಾನು ಕೆಲಸ ಮಾಡುವುದಿಲ್ಲ ಎಂಬುದಾಗಿ ಶಪಥ ಹಾಕಿದ್ದಾರೆ ಸ್ನೇಹಿತರೇ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿಗೆ ಕಿಚ್ಚ ಸುದೀಪ್ ನಟನೆಯ ಹುಚ್ಚ ಚಿತ್ರದಲ್ಲಿ ಸುದೀಪ್ ರವರ ಸ್ನೇಹಿತನ ಪಾತ್ರಕ್ಕಾಗಿ ನಿರ್ಮಾಪಕರಾಗಿರುವ ರೆಹಮಾನ್ ರವರ ಬಳಿ ಹೋಗಿ ಕೇಳಿಕೊಳ್ಳುತ್ತಾರೆ. ಆದರೆ ರಹಮಾನ್ ರವರು ನೀವು ಹೀರೋ ಕ್ವಾಲಿಟಿ ಉಳ್ಳವರು ಸ್ನೇಹಿತ ಪಾತ್ರವನ್ನು ಮಾಡುವುದು ಸರಿಯಲ್ಲ ಎಂಬುದಾಗಿ ಹೇಳಿ ನನ್ನ ಇನ್ನೊಂದು ಸಿನಿಮಾದಲ್ಲಿ ನಿಮ್ಮನ್ನು ಹೀರೋ ಆಗಿ ಹಾಕಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸುತ್ತಾರೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಂತಹ ಡಿ ಬಾಸ್ ಇನ್ನುಮುಂದೆ ನಾನು ಅವರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂಬುದಾಗಿ ಶಪಥ ಮಾಡಿದ್ದರಂತೆ.

Comments are closed.