Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ವಿಚ್ಚೇದನದ ನಂತರ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ ಸಮಂತಾ ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ 2017 ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾ ಹಾಗೂ ನಾಗಚೈತನ್ಯ ರವರು ಇದೇ ಅಕ್ಟೋಬರ್ 2ರಂದು ತಾವಿಬ್ಬರು ವಿವಾಹ ವಿಚ್ಛೇದನವನ್ನು ನೀಡಿದ್ದೇವೆ ಎಂಬುದು ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇವರಿಬ್ಬರು ದೂರ ಆಗುವ ಕುರಿತಂತೆ ಸ್ಪಷ್ಟನೆಯನ್ನು ನೀಡಿದ್ದರು. ತೆಲುಗು ಚಿತ್ರರಂಗದ ಎಲ್ಲರೂ ಅತ್ಯಂತ ಮೆಚ್ಚುವ ಜೋಡಿಯಾಗಿ ಇದ್ದಂತಹ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದು ಈಗ ಸಾಕಷ್ಟು ಸುದ್ದಿ ಮಾಡಿತ್ತು ಹಾಗೂ ಹಲವಾರು ಅಭಿಮಾನಿಗಳ ಮನಸ್ಸಿಗೂ ಕೂಡ ಬೇಸರವನ್ನುಂಟು ಮಾಡಿತ್ತು

ಇಷ್ಟು ಮಾತ್ರವಲ್ಲದೆ ಇಷ್ಟೊಂದು ಪ್ರೀತಿಯಿಂದ ಇದ್ದಂತಹ ಈ ದಂಪತಿಗಳು ಬೇರೆ ಆಗುವುದಕ್ಕೆ ಕಾರಣ ಏನೆಂಬುದನ್ನು ಕೂಡ ಇಬ್ಬರು ಹೇಳಿಕೊಂಡಿರಲಿಲ್ಲ ಹಾಗೂ ಯಾರಿಗೂ ಕೂಡ ಇದರ ಸುಳಿವು ಕೂಡ ಇರಲಿಲ್ಲ. ನಿಮ್ಮ ವಿವಾಹ ವಿಚ್ಛೇದನ ಪಡೆದ ನಂತರ ಸಂಬಂಧ ಅವರ ಕುರಿತಂತೆ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಷಯಗಳು ಅದರಲ್ಲಿ ಕೂಡ ಬೇಡದ ವಿಷಯಗಳು ಹರಿದಾಡಲು ಆರಂಭವಾಗಿದ್ದವು. ಈಗ ವಿವಾಹ ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ ನಟಿ ಸಮಂತಾ.

ಹೌದು ಸ್ನೇಹಿತರೆ ನಟಿ ಸಮಂತಾ ರವರು ಕೋರ್ಟ್ ಮೆಟ್ಟಿಲೇರಿದ ಕೆ ಮುಖ್ಯ ಕಾರಣವೆಂದರೆ ಅವರ ಕುರಿತಂತೆ ಇಲ್ಲಸಲ್ಲದ ಹೇಳಿಕೆ ಹಾಗೂ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಮಾಡಲಾಗಿತ್ತು. ಹೀಗಾಗಿ ಹಲವಾರು ಯುಟ್ಯೂಬ್ ಚಾನೆಲ್ ಹಾಗೂ ಸುದ್ದಿ ಮಾಧ್ಯಮಗಳ ವಿರುದ್ಧ ನೋಟಿಸ್ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನಾಡಿರುವ ವಕೀಲರೊಬ್ಬರ ವಿರುದ್ಧವೂ ಕೂಡ ನೋಟಿಸ್ ನೀಡಿದ್ದಾರೆ. ಒಬ್ಬರ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡಿದರೆ ಖಂಡಿತವಾಗಿ ಅವರ ಮನಸ್ಸಿಗೆ ಬೇಸರ ಉಂಟಾಗುವುದು ಖಂಡಿತ ಸ್ನೇಹಿತರೆ ಹೀಗಾಗಿ ನಟಿ ಸಂಬಂಧ ಅವರ ವಿಚಾರದಲ್ಲಿ ಕೂಡ ಹೀಗೆ ಆಗಿದ್ದು ಇದನ್ನು ಕಾನೂನಾತ್ಮಕವಾಗಿ ಅವರು ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಅಂಚಿ ಕೊಳ್ಳಿ.

Comments are closed.