Neer Dose Karnataka
Take a fresh look at your lifestyle.

ಶಾಕಿಂಗ್ ಸುದ್ದಿ: ಪುನೀತ್ ರಾಜಕುಮಾರ್ ನಿಧಾನ ! ಡಾಕ್ಟರ್ ಹೇಳಿದ ಕಾರಣ ಕೇಳಿ ಕಣ್ಣೀರಿಟ್ಟು ಕುಟುಂಬ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಇಂದು ಕತ್ತಲೆಯ ದಿನ ಎಂದು ಹೇಳಿದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ. ಪ್ರತಿಭೆಯ ಚಿಲುಮೆಯಾಗಿದ್ದ ಅಂತಹ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಂದು ಸ್ವರ್ಗಸ್ಥ ರಾಗಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದ ಅತ್ಯಂತ ದೃಢಕಾಯ ವನ್ನು ಹೊಂದಿರುವ ನಟರಲ್ಲಿ ಅಗ್ರಸ್ಥಾನ ರಾಗಿ ಕಾಣಿಸುತ್ತಾರೆ. ಅಂತಹ ಗಟ್ಟಿಮುಟ್ಟಾಗಿದ್ದ ಒಳ್ಳೆಯ ಮನಸ್ಸಿನ ನಟ ಇಂದು ನಮ್ಮೊಂದಿಗೆ ಇಲ್ಲ ಎಂದರೆ ಖಂಡಿತವಾಗಿಯೂ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಕೂಡ ದುಃಖ ವಾಗುವುದರಲ್ಲಿ ಸಂದೇಹವೇ ಇಲ್ಲ.

ಹೌದು ಇಂದು ಬೆಳಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಭಜರಂಗಿ 2 ಚಿತ್ರತಂಡಕ್ಕೆ ಟ್ವಿಟರ್ನಲ್ಲಿ ಶುಭಾಶಯಗಳನ್ನು ಹಾರೈಸಿದ ನಂತರ ತಮ್ಮ ಜಿಮ್ ನಲ್ಲಿ ವರ್ಕೌಟ್ ಮಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದರು. ಇದೇ ಕೂಡಲೇ ಅವರನ್ನು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಸಿಜಿ ಮಾಡಿ ನಂತರ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಡಾಕ್ಟರ್ ಹೇಳಿದ ಮಾತಿಗೆ ಕುಟುಂಬಸ್ಥರು ಸಾಕಷ್ಟು ದುಃಖಿತರಾಗಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾದ ನಂತರ ಡಾಕ್ಟರ್ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಎಂಬುದಾಗಿ ತಿಳಿಸಿದರು, ಇದಕೆಲ್ಲ ಕಾರಣ ಅತಿಯಾದ ಕೆಲಸ ಇರಬಹುದು ಎಂದು ಕೂಡ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಮೂರು ಗಂಟೆಗಳ ಕಾಲ ಸತತವಾಗಿ ವೈದ್ಯರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡಿದ್ದರು. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಯಾವುದೇ ಚಿಕಿತ್ಸೆಗೂ ಕೂಡ ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಇನ್ನು ಒಂದರ್ಥದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಭೂಮಿಯನ್ನು ಬಿಟ್ಟು ಸ್ವರ್ಗದಲ್ಲಿರುವ ತಮ್ಮ ಪೋಷಕರ ಬಳಿಗೆ ಹೋಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಇಲ್ಲಿನ ಅಭಿಮಾನಿಗಳಿಗೆ ಅವರನ್ನು ಕಳೆದುಕೊಂಡಿರುವ ದುಃಖ ಯಾರು ಕೂಡ ಬರಿಸಲಾಗದು.

Comments are closed.