Neer Dose Karnataka
Take a fresh look at your lifestyle.

ಪುನೀತ್ ರಾಜ್ ಕುಮಾರ್ ರವರ ಮಹತ್ವದ ಕನಸನ್ನು ಈಡೇರಿಸಲು ಸಿದ್ಧವಾದರೆ ಡಿ ಬಾಸ್, ಏನು ಗೊತ್ತೇ?? ಇದಪ್ಪ ಸ್ನೇಹ ಅಂದ್ರೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನಗಲಿ ಹಲವಾರು ದಿನಗಳು ಕಳೆದಿದ್ದರೂ ಕೂಡ ಅವರನ್ನು ಕಳೆದುಕೊಂಡಿರುವ ಕಹಿ ನೆನಪನ್ನು ನಮ್ಮಿಂದ ಅಳಿಸಲು ಯಾವ ಘಟನೆಗಳು ಕೂಡ ಸಹಕಾರಿ ಆಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿದ್ದಾರೆ ಅವರನ್ನು ನೆನಪು ಬಿಡಬಹುದಾಗಿತ್ತು. ಆದರೆ ಅವರು ಮಾಡಿರುವ ಸಮಾಜ ಸೇವೆಗಳು ಇಂದಿಗೂ ಅವರನ್ನು ಜನರ ಮನಸ್ಸಿನಲ್ಲಿ ಜೀವಂತವಾಗಿಟ್ಟಿದೆ.

ಅಸಂಖ್ಯಾತ ಗೋಶಾಲೆಗಳು ಅನಾಥಾಶ್ರಮಗಳು ಉಚಿತ ಶಾಲೆಗಳು ವೃದ್ಧಾಶ್ರಮಗಳು 1800 ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದರು. ಶಕ್ತಿಧಾಮ ಸಂಸ್ಥೆಯ ಮೂಲಕ ಹೆಣ್ಣುಮಕ್ಕಳಿಗೆ ಆಸರೆಯಾಗಿದ್ದರು. ತಾವು ಹಾಡಿದ್ದಕ್ಕಾಗಿ ಬರುತ್ತಿದ್ದಂತಹ ಸಂಭಾವನೆಯನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿದ್ದಂತಹ ಏಕೈಕ ನಟ ಪುನೀತ್ ರಾಜಕುಮಾರ್ ರವರು. ಇದಕ್ಕಾಗಿ ಅಪ್ಪು ಅವರನ್ನು ಕೊನೆಯ ಬಾರಿಗೆ ನೋಡಲು 25 ಲಕ್ಷಕ್ಕೂ ಅಧಿಕ ಜನರು ಬಂದಿದ್ದರು. ಇತ್ತೀಚಿಗೆ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ರವರು ಅಪ್ಪು ಅವರು ನೋಡಿಕೊಳ್ಳುತ್ತಿದ್ದಂತಹ 1800 ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಂದು ನಿರ್ಧಾರವನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಅವರ ಮನೆಗೆ ಹೋಗಿ ಅಶ್ವಿನಿ ಹಾಗೂ ರಾಘಣ್ಣ ಮತ್ತು ಶಿವಣ್ಣನವರಿಗೆ ಸಂತೈಸಿ ಅಲ್ಲಿಂದ ಪುನೀತ್ ರವರ ಸಮಾಧಿಗೆ ಹೋಗಿ ನಮಸ್ಕರಿಸಿ ಒಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೋಡಿಕೊಳ್ಳುತ್ತಿದ್ದ ಗೋಶಾಲೆಯನ್ನು ಇನ್ನು ಮುಂದೆ ತಾವೇ ನೋಡಿಕೊಳ್ಳುವುದಾಗಿ ಡಿ-ಬಾಸ್ ಹೇಳಿದ್ದಾರೆ. ಈ ಮೂಲಕ ತಮ್ಮ ಗೆಳೆಯನಿಗೆ ಗೌರವವನ್ನು ಸಲ್ಲಿಸಲು d-boss ರವರು ಪ್ರಯತ್ನಿಸುತ್ತಿದ್ದಾರೆ. ಇನ್ನು ಇದಕ್ಕೆ ಅಪ್ಪು ಕುಟುಂಬ ಅನುಮತಿ ನೀಡುವುದೇ ಅಥವಾ ಅಪ್ಪು ಕುಟುಂಬವೇ ಈ ಕಾರ್ಯಗಳನ್ನು ಮುಂದುವರೆಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಡಿ ಬಾಸ್ ಅವರ ಈ ಕಾರ್ಯಕ್ಕೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Comments are closed.