Neer Dose Karnataka
Take a fresh look at your lifestyle.

ಒಂದು ವಾರ ತಪ್ಪಿಸಿಕೊಂಡ ಸುದೀಪ್ ರವರಿಗೆ ಶಾಕ್ ನೀಡಿದ ಬಿಗ್ ಬಾಸ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಬಿಗ್ಬಾಸ್ ಎಂದರೆ ಕಿಚ್ಚ ಸುದೀಪ್ ಹಾಗೂ ಕಿಚ್ಚ ಸುದೀಪ್ ಎಂದರೆ ಬಿಗ್ ಬಾಸ್ ಎಂಬಂತಾಗಿದೆ. ಇದಕ್ಕೆಲ್ಲ ಕಾರಣ ಕಿಚ್ಚ ಸುದೀಪ್ ರವರು ಬಹಳ ಅದ್ಭುತವಾಗಿ ಕನ್ನಡ ಕಿರುತೆರೆಯಲ್ಲಿ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕೂಡ ಬಹಳ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಂದಿದ್ದಾರೆ. ಪ್ರತಿ ವಾರವೂ ಕೂಡ ಮನೆಯ ಮಂದಿಯನ್ನು ಮಾತನಾಡಿಸಿ ಒಬ್ಬರನ್ನು ಹೊರಗೆ ಕರೆದು ಮನೆಯಲ್ಲಿರುವ ಎಲ್ಲ ಊಹಾ ಪೋಹಗಳಿಗೆ ಬ್ರೇಕ್ ಹಾಕಿ ತಪ್ಪು ಮಾಡಿದವರಿಗೆ ಸರಿಯಾಗಿ ಕಡಕ್ ಮಾತುಗಳ ಮೂಲಕ ಸತ್ಯ ಏನು ಎಂಬುದು ಒಂದು ತಿಳಿಸಿ ಬಹಳ ಅತ್ಯದ್ಭುತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಅದೇ ಕಾರಣಕ್ಕಾಗಿ ಪ್ರೇಕ್ಷಕರು ಕಿಚ್ಚ ಸುದೀಪ್ ರವರು ವಾರಂತ್ಯದಲ್ಲಿ ಬರುತ್ತಿದ್ದಾರೆ ಎಂದ ತಕ್ಷಣ ಯಾವುದೇ ಕೆಲಸವಿದ್ದರೂ ಕೂಡ ಟಿವಿ ಮುಂದೆ ಕುಳಿತು ಕೊಳ್ಳುತ್ತಾರೆ. ಇನ್ನು ವೇದಿಕೆಯ ಮೇಲೆ ನಿಂತು ಕಿಚ್ಚ ಸುದೀಪ್ ಅವರು ಮಾತನಾಡುವ ಒಂದೊಂದು ಮಾತುಗಳು ನಿಜಕ್ಕೂ ಬಹಳ ಅರ್ಥ ಪೂರ್ಣವಾಗಿ ಇರುತ್ತವೆ, ಅದೇ ಕಾರಣಕ್ಕಾಗಿ ಪ್ರತಿ ವಾರವೂ ಕೂಡ ಟಿಆರ್ಪಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.

ಇನ್ನು ಇದೇ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಇತಿಹಾಸದಲ್ಲಿ ಕಿಚ್ಚ ಸುದೀಪ್ ರವರು ಅನಾರೋಗ್ಯದ ಕಾರಣ ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸಾಧ್ಯವಾಗದೇ ಕಾರ್ಯಕ್ರಮದಿಂದ ಒಂದು ವಾರದ ಮಟ್ಟಿಗೆ ದೂರವುಳಿದಿದ್ದಾರೆ, ಆದ ಕಾರಣ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಒಟ್ಟಾರೆಯಾಗಿ 8 ಕೋಟಿ ನೀಡಬೇಕಾಗಿದ್ದ ವಾಹಿನಿ ಒಂದು ಎಪಿಸೋಡ್ ತಪ್ಪಿಸಿಕೊಂಡಿದ್ದಕ್ಕಾಗಿ 57ಲಕ್ಷ ರೂಪಾಯಿಗಳನ್ನು ಕಡಿಮೆ ಮಾಡಿ ಉಳಿದ ಹಣವನ್ನು ಸಂಭಾವನೆಯನ್ನಾಗಿ ನೀಡಲಾಗುತ್ತದೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ.

Comments are closed.