Neer Dose Karnataka
Take a fresh look at your lifestyle.

ಅಭಿಮಾನಿಗಳು ಕೊಟ್ಟಿರುವುದು ಕೇವಲ 3 ಲಕ್ಷ ಅಲ್ಲ, 6 ಲಕ್ಷ, ಅಷ್ಟು ಕೊಟ್ಟರು ಒಂದು ರೂಪಾಯಿ ಸಿಗುವುದಿಲ್ಲ ನನಗೆ ಎಂದ ವಿಜಯಲಕ್ಷ್ಮಿ ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವುದು ಎಂದರೆ ನಟಿ ವಿಜಯಲಕ್ಷ್ಮಿ ಅವರು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಹೌದು ಸ್ನೇಹಿತರೆ ಕಾರವಾರದಿಂದ ಬೆಂಗಳೂರಿಗೆ ಬಂದ ಮೇಲೆ ಎರಡು ದಿನಗಳ ಅಂತರದಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಜನಸ್ನೇಹಿ ಯೋಗೇಶ್ ಎನ್ನುವವರು ಅವರಿಗೆ ಸಹಾಯ ಮಾಡಿ ತಾಯಿಯ ಕಾರ್ಯಗಳನ್ನು ಕೂಡ ಮುಗಿಸಿ ಕೊಡುತ್ತಾನೆ. ಇನ್ನು ಇದೇ ಸಂದರ್ಭದಲ್ಲಿ ಸಹಾಯ ಮಾಡಿ ಎಂದು ವಿಜಯಲಕ್ಷ್ಮಿಯವರು ವಿಡಿಯೋ ಮಾಡಿದಾಗ ಯೋಗೇಶ್ವರ್ ಅವರ ಖಾತೆ ಡೀಟೇಲ್ಸ್ ಅನ್ನು ನೀಡಿದ್ದರು.

ಆ ಸಂದರ್ಭದಲ್ಲಿ ಯೋಗೇಶ್ ರವರ ಖಾತೆಗೆ ಸಾಕಷ್ಟು ಹಣ ಬಂದಿತ್ತು. ಇದಾದ ನಂತರ ವಿಜಯಲಕ್ಷ್ಮಿಯವರು ತಮ್ಮ ಸಹೋದರರ ಖಾತೆಯನ್ನು ಮತ್ತೆ ನೀಡಿ ಅದಕ್ಕೆ ಹಣ ಹಾಕುವಂತೆ ಜನರಲ್ಲಿ ವಿಡಿಯೋ ಮಾಡಿ ಕಳುಹಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅವರು ಮಾಡಿರುವ ವಿಡಿಯೋದಿಂದ ಇಷ್ಟು ದಿನ ಅಂದುಕೊಂಡಿದ್ದೆಲ್ಲ ಸುಳ್ಳು ಎಂಬಂತೆ ಭಾವನೆ ಮೂಡಲು ಪ್ರಾರಂಭಿಸುತ್ತದೆ ಸ್ನೇಹಿತರೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜನಸ್ನೇಹಿ ಯೋಗೇಶ್ ರವರು 3ಲಕ್ಷ ಹಣ ಬಂದಿದೆ ಎಂಬುದಾಗಿ ಹೇಳಿ ವಾಣಿಜ್ಯ ಮಂಡಳಿಗೆ ಅದನ್ನು ನೀಡಿ ಬರುತ್ತಾರೆ.

ಇನ್ನು ಈಗ ಬಂದಿರುವ ವಿಡಿಯೋ ಪ್ರಕಾರ ವಿಜಯಲಕ್ಷ್ಮಿಯವರಿಗೆ ಆ ಹಣ ದೊರಕಿಲ್ಲವಂತೆ ಇದಕ್ಕಿಂತಲೂ ಹೆಚ್ಚು ಆಶ್ಚರ್ಯ ಪಡುವ ವಿಷಯವೆಂದರೆ ಒಟ್ಟಾಗಿದ್ದು 3ಲಕ್ಷ ಹಣವಂತ ಅಲ್ವಂತೆ ಸ್ನೇಹಿತರೆ ಬದಲಾಗಿ ಬರೋಬ್ಬರಿ ಆರು ಲಕ್ಷ ಹಣ ಎಂದು ಹೇಳುತ್ತಾರೆ. ಹೌದು ಸ್ನೇಹಿತರೆ 6 ಲಕ್ಷ ಹಣ ಒಟ್ಟಾಗಿದ್ದು ಇವರೆಲ್ಲ ಸೇರಿ ಜನರಿಗೆ ಯಾಮಾರಿಸು ತ್ತಿದ್ದಾರೆ ಎಂಬುದಾಗಿ ವಿಜಯಲಕ್ಷ್ಮಿ ಅವರು ಹೇಳುತ್ತಾರೆ. ಇನ್ನು ಒಂದು ನಯಾಪೈಸೆ ಹಣವೂ ಕೂಡ ವಾಣಿಜ್ಯ ಮಂಡಳಿಯಿಂದ ನನಗೆ ಸಿಕ್ಕಿಲ್ಲ ಇವರೆಲ್ಲ ನಾಟಕ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.