Neer Dose Karnataka
Take a fresh look at your lifestyle.

ಮತ್ತಷ್ಟು ರಂಗೇರಿತು ಸರಿಗಮಪ ಚಾಂಪಿಯನ್ ಶಿಪ್, ವೇದಿಕೆಗೆ ಹೊಸ ಅತಿಥಿಯ ಎಂಟ್ರಿ. ಯಾರು ಗೊತ್ತೇ?? ಇದೀಗ ಅಸಲಿ ಆಟ ಶುರು.

ನಮಸ್ಕಾರ ಸ್ನೇಹಿತರೇ ಕನ್ನಡದ ಮೆಚ್ಚಿನ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮ. ಈ ಸಂಗೀತ ಶೋ ಪ್ರತಿ ಎಪಿಸೋಡ್ ಗಳೂ ಕೂಡ ತುಂಬಾನೇ ವಿಭಿನ್ನವಾಗಿರುತ್ತೆ. ಇಲ್ಲಿನ ಪ್ರತಿ ಸ್ಪರ್ಧಿಗಳು ಆಯ್ಕೆ ಮಾಡಿಕೊಳ್ಳುವ ಹಾಡುಗಳೂ ಕುಡ ಅತ್ಯದ್ಭುತವಾಗಿಯೇ ಇದ್ದು ಅವರುಗಳ ಗಾಯನವಂತೂ ಕೇಳಲೇ ಬೇಡಿ, ಕಿವಿಗೆ ಇನ್ನಿಲ್ಲದಷ್ಟು ತಂಪನ್ನು ಎರೆಯುತ್ತೆ.

ಇನ್ನು ಚ್ಯಾಂಪನ್ ಶಿಪ್ ಟ್ರೋಫಿ ಸರಿಗಮಪ ವೇದಿಕೆಯನ್ನು ಅಲಂಕರಿಸಿದೆ. 36 ಸ್ವರ್ಧಿಗಳೂ ಕೂಡ ಸ್ವರ ನಿನಾದದ ಮೂಲಕ ಟ್ರೋಫಿಗೆ ನಮನ ಸಲ್ಲಿಸಿದ್ದಾರೆ. ಇನ್ನು ತೀರ್ಪುಗಾರರಾದ ಅರ್ಜುನ್ ಜನ್ಯಾ ಮತ್ತಿತರರು ಟ್ರೋಫಿಗೆ ನಮಿಸಿ ಗೌರವ ಸೂಚಿಸಿದ್ದಾರೆ. ಇನ್ನು ಈ ಬಾರಿಯೂ ಸಂಗೀತ ಸಂಜೆ ಅದ್ಭುತವಾಗಿ ನೆರವೇರಲಿದೆ ಸರಿಗಮಪ ವೇದಿಕೆಯಲ್ಲಿ! ಹೌದು ನಿರಂತರ 6 ಗಂಟೆಗಳ ಕಾಲ ಸಂಗೀತ ಸುಧೆ ಹರಿಸಲಿದ್ದಾರೆ ಸ್ಪರ್ಧಿಗಳು.

ಕಳೆದ ಬಾರಿ ಶಿವಣ್ಣ ಸರಿಗಮಪ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು. ಅವರ ಹಾಡುಗಳನ್ನು ಹಾಡಿ, ಸ್ಪರ್ಧಿಗಳು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನೇ ಭಾವುಕರನ್ನಾಗಿ ಮಾಡಿದ್ದ ದೃಶ್ಯ ಮನಮೋಹಕವಾಗಿತ್ತು. ಇನ್ನು ಸ್ವರ ಮಾಂತ್ರಿಕ ಹಂಸಲೇಖ ಕೂಡ ಸಂತೋಷದ ಕಣ್ಣೀರು ಸುರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸರಿಗಮಪದಲ್ಲಿ ಒಬ್ಬೊಬ್ಬ ಸ್ಪರ್ಧಿಗಳದ್ದೂ ಒಂದೊಂದು ಗಾಯನ ಶೈಲಿ ಹಾಗಾಗಿ ಜನರನ್ನು ತುಂಬಾನೇ ಆಕರ್ಷಿಸುತ್ತಾರೆ. ಇನ್ನು ಶೃಂಗೇರಿ ಶ್ರೀ ಶಾರದಾಂಬೆಯ ಪಾದಾರವಿಂದಗಳಿಗೆ ಅರ್ಪಿಸಿ, ಆಶೀರ್ವಾದ ಪಡೆದು ತಂದ ಟ್ರೋಫಿ ಇದಾಗಿದ್ದು, ಸ್ಪರ್ಧಿಗಳಲ್ಲಿ ಹಾಡುವ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ. ಇನ್ನು ಯಾರಾಗ್ತಾರೆ ಈ ಟ್ರೋಫಿ ಗೆಲ್ಲುವ ಗಾಯಕ/ ಗಾಯಕಿ ಎನ್ನುವುದೇ ಸದ್ಯಕ್ಕಿರುವ ಕುತೂಹಲ!

Comments are closed.