Neer Dose Karnataka
Take a fresh look at your lifestyle.

ಇದನ್ನೇ ವಿಧಿಯಾಟ ಎನ್ನೋದು, ಅಪ್ಪು ವನ್ನು ನೋಡಲು ಬರುತ್ತಿದ್ದ ಮಗಳು ಧೃತಿ, ಆದರೆ ಏನಾಗಿದೆ ಗೊತ್ತಾ?? ದೇವರು ಏನು ಬರೆದಿಟ್ಟಿದ್ದಾನೋ.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕರ್ನಾಟಕ ಈಗಾಗಲೇ ದುಃಖದ ಸೂರಾಗಿದೆ. ಅವರೇನು ನಮ್ಮ ಆಪ್ತ ಆಗಿರಲಿಲ್ಲ ಬಂಧು-ಬಳಗ ಕೂಡ ಆಗಿರಲಿಲ್ಲ ಅವರನ್ನು ಕೇವಲ ತೆರೆಯ ಮೇಲೆ ಮಾತ್ರ ನೋಡಿರುವುದು. ಆದರೂ ಕೂಡ ಅವರನ್ನು ಕಳೆದುಕೊಂಡಿರುವ ದುಃಖ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ದುಃಖಕ್ಕಿಂತ ಹೆಚ್ಚಾಗಿ ಆವರಿಸಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅವರ ಕೋಟ್ಯಾಂತರ ಅಭಿಮಾನಿಗಳು ತಬ್ಬಲಿ ಆಗಿದ್ದಾರೆ.

ಅಪ್ಪು ಅವರನ್ನು ಕಳೆದುಕೊಂಡಿರುವ ಅವರ ಪತ್ನಿ ಅಶ್ವಿನಿ ಹಾಗೂ ಎರಡನೇ ಮಗಳು ಅವರ ಪಾರ್ಥಿವ ಶರೀರದ ಬಳಿ ಏನು ತೋಚದಂತೆ ಕಂಗಾಲಾಗಿ ಕುಳಿತುಕೊಂಡಿದ್ದಾರೆ. ಶಿವಣ್ಣನವರು ಕೂಡ ತಮ್ಮ ಸಹೋದರನನ್ನು ಕಳೆದುಕೊಂಡು ಏನು ಮಾಡಲಿ ಎಂಬ ಗೊಂದಲದಲ್ಲಿ ಬಿದ್ದವರಂತೆ ದುಃಖದ ಛಾಯೆ ಯಲ್ಲಿದ್ದಾರೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ ಇಡೀ ಕನ್ನಡ ಚಿತ್ರರಂಗವೇ ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ನತ್ತ ಧಾವಿಸಿ ಬರುತ್ತಿದ್ದಾರೆ.

ನಿನ್ನೆ ನೀವು ಹಲವಾರು ವಿಡಿಯೋಗಳಲ್ಲಿ ನೋಡಿರಬಹುದು ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯಬಾರಿ ನೋಡಲು ಕಿಕ್ಕಿರಿದು ತುಂಬಿದ್ದರು. ಸದಾ ಒಳ್ಳೆಯ ವಿಚಾರಗಳಿಂದಲೇ ಹೆಸರುವಾಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೇಗೆ ಹಠಾತ್ತಾಗಿ ಹೃದಯಾಘಾತದಿಂದ ನಿಧನರಾಗಿರುವುದು ಎಲ್ಲರೂ ದೇವರನ್ನು ಶಪಿಸುವಂತೆ ಮಾಡಿದೆ. ಖಂಡಿತವಾಗಿಯೂ ಕನ್ನಡ ಚಿತ್ರರಂಗದಲ್ಲಿ ಅವರನ್ನು ತುಂಬಬಲ್ಲ ಅಂತಹ ಮತ್ತೊಂದು ವ್ಯಕ್ತಿತ್ವ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳು ದೃತಿ ಅಮೆರಿಕಾದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅಪ್ಪನ ಜೊತೆ ಫೋನಿನಲ್ಲಿ ಮಾತನಾಡಿದ್ದರು. ಆದರೆ ಈಗ ಅಪ್ಪ ನಿಶ್ಚಲ ದೇಹದ ಸ್ಥಿತಿಯಲ್ಲಿ ಮಲಗಿದ್ದಾರೆ ಎಂಬುದಾಗಿ ತಿಳಿದು ಕಂಗಾಲಾಗಿ ಅದೇ ಕೂಡಲೇ ಹೊರಟು ನಿಂತಿದ್ದಾರೆ ಆದರೆ ಅಲ್ಲಿ ಕೂಡ ಸಮಸ್ಯೆ ಎದುರಾಗಿದ್ದು ಗ್ರಹಚಾರ ಎನ್ನುವುದು ಇದಕ್ಕೆ.

ಹೌದು ಗೆಳೆಯರಿಗೆ ಅಪ್ಪನ ಸುದ್ದಿ ತಿಳಿದ ಕೂಡಲೇ ದೃತಿ ಅಮೆರಿಕಾದಿಂದ ಭಾರತಕ್ಕೆ ಹೊರಡಲು ಸಿದ್ಧರಾಗಿ ನಿಂತಿದ್ದರು. ಆದರೆ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿಮಾನ 6 ಗಂಟೆ ತಡವಾಗಿದ್ದು ಇಂದು ಮಧ್ಯಾಹ್ನ 11ಗಂಟೆಗೆ ಬರಬೇಕಾಗಿದ್ದ ಧೃತಿ ಯವರು ಇಂದು ಮಧ್ಯರಾತ್ರಿ ಬರಬಹುದಾದಂತಹ ಎಲ್ಲ ಸಾಧ್ಯತೆ ಇದೆ. ಅಪ್ಪನನ್ನು ಕೊನೆಯಬಾರಿ ನೋಡಲು ಕೂಡ ಆ ವಿಧಿ ಹಲವಾರು ಅಡಚಣೆಗಳನ್ನು ಅವರ ಹಿರಿಯ ಮಗಳಿಗೆ ಹಾಕುತ್ತಿರುವುದು ಇದು ಕೂಡ ಮತ್ತೊಂದು ದುಃಖದ ಸ್ಥಿತಿಯಾಗಿದೆ.

ಇನ್ನು ಈ ಕಾರಣದಿಂದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಂತಿಮ ವಿಧಿವಿಧಾನಗಳು ನಾಳೆ ಬೆಳಗ್ಗೆ ನಡೆಯಬೇಕಾಗಿತ್ತು ಅದನ್ನು ನಾಳೆ ಮಧ್ಯಾಹ್ನದ ಮೇಲೆ ನಡೆಸಲು ಯೋಜನೆ ಹಾಕಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅದೆಷ್ಟು ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಹೆಣ್ಣುಮಕ್ಕಳ ಶಾಲೆಗೆ ಮಾಡದ ಒಳ್ಳೆಯ ಕೆಲಸಗಳಿಲ್ಲ ಆದರೂ ಕೂಡ ದೇವರು ಅವರನ್ನು ಕರೆದುಕೊಂಡು ಹೋಗಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಅವರನ್ನು ಪ್ರೀತಿಸುವ ಜನರ ಕೂಗಾಗಿದೆ. ಇನ್ನು ಇಂದು ಅವರನ್ನು ಕಂಠೀರವ ಸ್ಟೇಡಿಯಂನಲ್ಲಿ ಪೂರ್ಣ ದಿನ ಅಭಿಮಾನಿಗಳಿಗಾಗಿ ಇರಿಸಲಾಗಿದ್ದು ನಾಳೆ ಎಲ್ಲ ವಿಧಿವಿಧಾನಗಳು ನಡೆಯಲಿದೆ. ಈಗಾಗಲೇ ಭಾರತ ಚಿತ್ರರಂಗದ ಎಲ್ಲಾ ಗಣ್ಯರು ಕೂಡ ಅವರಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಅಪ್ಪು ಜೊತೆಗಿರದ ಜೀವ ಎಂದಿಗಿಂತ ಸನಿಹ.

Comments are closed.