Neer Dose Karnataka
Take a fresh look at your lifestyle.

ಪುನೀತ್ ಅನ್ನ ಸಂತರ್ಪಣೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು ಯಾರು? ಶಿವಣ್ಣ ಅಥವಾ ಅಪ್ಪು ಪತ್ನಿ ಅಶ್ವಿನಿ ರವರಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರ ಅಗಲಿಕೆಯ 12ನೇ ದಿನದಂದು ಅಂದರೆ ನೆನ್ನೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 20000 ಜನರಿಗೆ ಊಟವನ್ನು ಹಾಕಿಸಬೇಕು ಎಂದು ಅಂದುಕೊಳ್ಳಲಾಗಿತ್ತು.

ಆದರೆ ಅಭಿಮಾನಿಗಳು ಜಾಸ್ತಿಯಾಗಿ ಬಂದಿದ್ದರಿಂದ ಮೂವತ್ತು ಸಾವಿರ ಜನರಿಗೆ ಊಟವನ್ನು ಹಾಕಿಸಲಾಗಿದೆ ಎಂಬುದಾಗಿ ತಿಳಿದುಬರುತ್ತಿದೆ. ಇನ್ನು ಊಟದ ಸಂದರ್ಭದಲ್ಲಿ ಸ್ವತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿಯಾಗಿರುವ ಅಶ್ವಿನಿ ಹಾಗೂ ರಾಘಣ್ಣ ಮತ್ತು ಶಿವಣ್ಣನವರು ಕಣ್ಣೀರು ಇಡುತ್ತಾ ಅಭಿಮಾನಿಗಳಿಗೆ ಊಟವನ್ನು ಬಡಿಸಿದರು. ಇನ್ನು ಈ ಅನ್ನಸಂತರ್ಪಣೆ ಕಾರ್ಯಕ್ಕಾಗಿ ದೊಡ್ಡ ಮನೆಯವರು ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಕೂಡ ಇದೆ. ಅಪ್ಪು ಅವರಿಗೆ ಮಾಂಸದೂಟ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಹೆಚ್ಚು ಜನರು ಊಟ ಮಾಡಿದ್ದು ಮಾಂಸಹಾರವನ್ನು. 5000 ಕೆಜಿ ಮಾಂಸವನ್ನು ಊಟಕ್ಕಾಗಿ ಬಳಸಲಾಗಿತ್ತು. 1000 ಜನರು ಬಾಣಸಿಗರು ಅಡುಗೆಯನ್ನು ತಯಾರು ಮಾಡಿದ್ದರು.

4000 ಕೆಜಿ ಸೋನಾಮಸೂರಿ ಅಕ್ಕಿ 750 ಲಿಟರ್ ಅಡುಗೆ ಎಣ್ಣೆ ಲೆಕ್ಕವಿಲ್ಲದಷ್ಟು ದಿನಸಿ ಸಾಮಾನುಗಳನ್ನು ಅಡುಗೆಗೆ ಪೂರೈಸಲಾಗಿತ್ತು. ಬಂದ ಅಭಿಮಾನಿಗಳೆಲ್ಲರೂ ಕೂಡ ಹೊಟ್ಟೆ ತುಂಬಾ ಊಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಈ ಮಹಾ ಅನ್ನಸಂತರ್ಪಣೆ ಕಾರ್ಯಕ್ಕಾಗಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇನ್ನು ಎಲ್ಲ ಜವಾಬ್ದಾರಿಗಳನ್ನು ಕೂಡ ಕೇವಲ ಒಬ್ಬರೇ ವಹಿಸಿಕೊಳ್ಳದೆ ದೊಡ್ಡ ಮನೆಯವರು ಎಲ್ಲರೂ ಕೂಡ ಒಟ್ಟಾಗಿ ನಿಂತು ಈ ಕಾರ್ಯವನ್ನು ಮಾಡಿದ್ದಾರೆ. ಹಾಗಾಗಿ ಈ ಖರ್ಚು ಕೂಡ ಎಲ್ಲರೂ ಸೇರಿ ಮಾಡಿದ್ದಾಗಿದೆ. ಬಂದ ಅಭಿಮಾನಿಗಳೆಲ್ಲರೂ ಊಟ ಮಾಡಿ ಅಪ್ಪುವಿನ ಆತ್ಮಕ್ಕೆ ಶಾಂತಿ ಕೋರಿ ಹೋಗಿದ್ದಾರೆ.

Comments are closed.