Neer Dose Karnataka
Take a fresh look at your lifestyle.

ಸೌಂದರ್ಯ, ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದ ಶ್ರೀದೇವಿ ರವರ ಕೊನೆಯ ದಿನ ನಡೆದದ್ದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ 80ರ ದಶಕದಲ್ಲಿ ಇಡೀ ಭಾರತದಲ್ಲಿ ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಂತಹ ಸ್ಟಾರ್ ನಟಿಯೆಂದರೆ ಖಂಡಿತವಾಗಿಯೂ ಅದು ನಟಿ ಶ್ರೀದೇವಿ ಅವರು. ಮೂಲತಹ ದಕ್ಷಿಣ ಭಾರತದವರಾಗಿದ್ದರು ಕೂಡ ಬಾಲಿವುಡ್ ನಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿ ರಾಣಿಯಂತೆ ಮೆರೆದವರು.

ಕನ್ನಡ ಚಿತ್ರರಂಗದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿದ ನಟಿ ಶ್ರೀದೇವಿ ಅವರು ಮುಂದೆ ತೆಲುಗು ತಮಿಳು ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡರು. ಆದರೆ ಅವರ ಮರಣ ವಾರ್ತೆ ಇಡೀ ಭಾರತೀಯ ಚಿತ್ರರಂಗಕ್ಕೆ ಅನಿರೀಕ್ಷಿತ ಆಘಾತವಾಗಿ ಪರಿಣಮಿಸಿತ್ತು. ಹಾಗಿದ್ದರೆ ಆ ದಿನ ಏನು ನಡೆಯಿತು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ. ಸೂಪರ್ ಸ್ಟಾರ್ ನಟಿ ಶ್ರೀದೇವಿ ಅವರು ಮೂರು ವರ್ಷಗಳ ಹಿಂದೆ ನಮ್ಮನ್ನೆಲ್ಲಾ ಅಗಲಿ ಸ್ವರ್ಗಸ್ಥರಾಗಿ ದ್ದಾರೆ. ಸಂಬಂಧಿಕರೊಬ್ಬರ ಮದುವೆಗೆ ದುಬೈಗೆ ಹೋದಂತಹ ನಟಿ ಶ್ರೀದೇವಿ ಅವರು ಅಂದಿನ ದಿನ ತಮ್ಮದೇ ರೂಮಿನ ಬಾತ್ ಟಬ್ ನಲ್ಲಿ ಶ’ವವಾಗಿ ಸಿಕ್ಕಿದ್ದರು. ಮೊದಮೊದಲಿಗೆ ಎಲ್ಲರೂ ಕೂಡ ಇದು ಬೇರೆಯವರು ಶ್ರೀದೇವಿ ಅವರನ್ನು ಮುಗಿಸಿದ್ದಾರೆ ಎಂಬುದಾಗಿ ಮಾತುಗಳು ಹರಿದಾಡಿತ್ತು.

ಆದರೆ ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಇದು ಕೇವಲ ಸಹಜ ಮರಣ ಎಂಬುದಾಗಿ ಫಲಿತಾಂಶ ಬಂದಿತ್ತು. ಯಾಕೆಂದರೆ ಮದುವೆ ಸಂತೋಷದಲ್ಲಿ ಅಷ್ಟೊಂದು ಸಂಭ್ರಮದಲ್ಲಿದ್ದ ಆರೋಗ್ಯವಂತ ನಟಿ ಒಂದೇ ಸಮನೆ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಯಾರಿಗೂ ಕೂಡ ನಂಬಲು ಸಾಧ್ಯವಿಲ್ಲ. ಹೀಗಾಗಿ ಇಡೀ ಭಾರತದಲ್ಲಿ ಶ್ರೀದೇವಿ ಅವರ ಮರಣದ ಸುದ್ದಿ ನಿರೀಕ್ಷೆಗೂ ಮೀರಿ ಹಲವಾರು ಸುದ್ದಿಗಳನ್ನು ಹುಟ್ಟುಹಾಕಿತ್ತು.

ಇತ್ತೀಚಿಗೆ ಕೂಡ ಸುಶಾಂತ್ ಸಿಂಗ್ ರಜಪೂತ್ ರವರ ಮರಣದ ಸುದ್ದಿಯನ್ನು ಸಿಬಿಐಗೆ ಒಪ್ಪಿಸಿ ಎಂದು ಕೇಳುವಾಗ ಶ್ರೀದೇವಿಯವರ ಮರಣದ ಸುದ್ದಿಯನ್ನು ಕೂಡ ಸಿಬಿಐಗೆ ಒಪ್ಪಿಸಿ ಎಂಬುದಾಗಿ ಹಲವಾರು ಕೂಗುಗಳು ಕೇಳಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಶ್ರೀದೇವಿಯವರ ಮರಣದ ತನಿಖೆ ನಡೆಯಲಿ ಎಂಬುದಾಗಿ ಅಭಿಮಾನಿಗಳು ಆಗ್ರಹಿಸಿದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಹೀಗೆ ಹಲವಾರು ಚಿತ್ರರಂಗಗಳ ಸ್ಟಾರ್ ನಟ ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವ ಶ್ರೀದೇವಿ ಅವರಿಗಿತ್ತು.

ಬಾಲನಟಿಯಾಗಿ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿ ನಂತರದ ವರ್ಷಗಳಲ್ಲಿ ಭಾರತ ಕಂಡಂತಹ ಅದ್ಭುತ ನಟಿಯರಲ್ಲಿ ಒಬ್ಬರಾಗಿ ಇಂದು ಅವರು ನಮ್ಮ ಜೊತೆಗೆ ಇಲ್ಲದಿದ್ದರೂ ಕೂಡ ಪ್ರಖ್ಯಾತರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನ ಮಾಡಬೇಕಾಗಿದ್ದ ಚೆಲುವೆ ಚಿತ್ರದಲ್ಲಿ ಶ್ರೀದೇವಿ ಅವರು ನಟಿಸಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ. ಶ್ರೀದೇವಿ ಅವರು ಇಂದು ನಮ್ಮ ಜೊತೆಗೆ ಇಲ್ಲದೆ ಇರಬಹುದು ಆದರೆ ಅವರ ಅನಿರೀಕ್ಷಿತ ಮರಣ ಇಂದಿಗೂ ಕೂಡ ಅವರನ್ನು ಅಭಿಮಾನಿಗಳ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಾಗಲಿಲ್ಲ. ಹಿಂದೆ ಇಂದು ಮುಂದೆ ಸದಾಕಾಲ ಇಡೀ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಾಯಕ ನಟಿಯರಲ್ಲಿ ಶ್ರೀದೇವಿ ಅವರು ಸದಾ ಅಗ್ರಸ್ಥಾನದಲ್ಲಿ ಇರುತ್ತಾರೆ.

Comments are closed.