Neer Dose Karnataka
Take a fresh look at your lifestyle.

ನಮ್ಮನೆ ಯುವರಾಣಿ ಮೀರಾ ರವರಿಗೆ ಕುಲಾಯಿಸಿದ ಅದೃಷ್ಟ, ಸಿಹಿ ಸುದ್ದಿ ಹಂಚಿಕೊಂಡು ಅಂಕಿತ ಅಮರ್ ಹೇಳಿದ್ದೇನು ಗೊತ್ತೇ??

ಕಿರುತೆರೆಯಲ್ಲಿ ಮನೋರಂಜನೆಗೆ ಏನು ಕಡಿಮೆ ಇಲ್ಲ.. ಹೊಸಬರ ಆಗಮನದಿಂದ ಹೊಸ ಹೊಸ ಧಾರಾವಾಹಿ ಮತ್ತು ಟಿವಿ ಶೋ ಮುಕಾಂತರ ಪ್ರೇಕ್ಷಕರನ್ನು ಮನೋರಂಜಿಸುತ್ತಾ ಬರುತ್ತಿದ್ದಾರೆ. ಟಿವಿ ಅಲ್ಲಿ ಬರುವ ಧಾರವಾಹಿಗಳಾಗಲಿ ಟಿವಿ ಶೋಗಳಾಗಲಿ, ಅದರ ಸ್ಥಾನವನ್ನು ದಿನಗಳು ಕಳೆಯುತ್ತಿದ್ದಂತೆ ಉಳಿಯುವುದು ಕಷ್ಟಕರವಾಗುತ್ತದೆ. ಆದರೆ ಕಲರ್ಸ್ ಕನ್ನಡದಲ್ಲಿ ಬರುವ ನಮ್ಮನೆ ಯುವರಾಣಿ ಧಾರವಾಹಿ ಶುರುವಾಗಿ ವರ್ಷಗಳೇ ಕಳೆದಿವೆ. ಹೀಗಿದ್ದರೂ ಈ ಧಾರಾವಾಹಿಯ ವೀಕ್ಷಕರು ದಿನದಿಂದ ದಿನಕ್ಕೂ ಹೆಚ್ಚುತ್ತಿದ್ದಾರೆ ಹೊರೆತು ಎಂದಿಗೂ ಕುಗ್ಗಿಲ್ಲಾ, ಇದರ ಟಿ.ಆರ್.ಪಿ ಕೂಡ ಅದರ ಸ್ಥಾನವನ್ನು ಗಟ್ಟಿಮಾಡಿಕೊಂಡಿದೆ. ಇದೀಗ ಈ ಧಾರಾವಾಹಿಯ ಒಬ್ಬ ಪಾತ್ರದಾರಿಯದ ನಟಿ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಆ ನಟಿ ಯಾರೆಂದು ಮತ್ತು ಆ ಸುದ್ದಿ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ..

ನಮ್ಮನೆ ಯುವರಾಣಿಯ ಪಾತ್ರಧಾರಿಗಳೆಲ್ಲಾ ಎಷ್ಟು ಜನಪ್ರಿಯತೆ ಪಡೆದಿದ್ದಾರೆ ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ಹಾಗೆ ಇದೀಗ ಈ ಧಾರಾವಾಹಿಯಲ್ಲಿ ಮೀರಾ ಹಾಗೂ ಅನಿಕೇತ್ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಈ ವಿಚಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಆ ಸಮಯದಲ್ಲಿ ಮೀರಾ ಪಾತ್ರಧಾರಿಯಾದ ಅಂಕಿತಾ ಅಮರ್ ಅವರು ಎದೆ ತುಂಬಿ ಹಾಡುವೆನು ಶೋ ನಿರೂಪಕಿ ಆಗಿ ಕಾರ್ಯ ನಿರ್ವಹಿಸಿ, ನಟಿಯಾಗಿ ಮನ ಗೆದಿದ್ದ ಅವರು ಇದೀಗ ನಿರೂಪಕಿಯಾಗಿಯೂ ಎಲ್ಲರ ಮನ ಗೆದಿದ್ದಾರೆ. ನಮ್ಮ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಈ ನಟಿ ನಮ್ಮ ನೆಲೆದ ಸೊಗಡನ್ನು ಎತ್ತಿಹಿಡಿಯುತ್ತಿದ್ದಾರೆ. ಇದೀಗ ಇದೆ ನಟಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ತಮ್ಮ ನೆಚ್ಚಿನ ನಟಿಯನ್ನು ಕಿರುತೆರೆಯಲ್ಲಿ ನೋಡಿ ಕಣ್ಣುತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ಧಾರಾವಾಹಿಯಲ್ಲಿ ಕಾರಣಾಂತರಗಳಿಂದ ಅಂಕಿತ ಅವರ ಪಾತ್ರ ನೋಡಲು ಸಾಧ್ಯವಾಗಲಿಲ್ಲ. ಆ ನಂತರ ಟಿವಿ ಶೋ ಮುಕಾಂತರ ನಿರೂಪಕಿಯಾಗಿ ಇದ್ದ ಅಂಕಿತ ಅಮರ್ ಇದೀಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದಿದ್ದಾರೆ. ಆ ಸುದ್ದಿಯನ್ನು ಅಂಕಿತಾ ರವರೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಚಿತ್ರದ ನಟನಾಗಿ ದಿಯಾ ಸಿನೆಮಾ ಖ್ಯಾತಿಯ ಪೃಥ್ವಿ ಅಂಬಾರ್ ಅವರು ಆಯ್ಕೆಯಾಗಿದ್ದಾರೆ. ಇನ್ನು ಈ ಚಿತ್ರದ ಶೀರ್ಷಿಕೆ ಬಹಳ ವಿಭಿನ್ನ ವಾಗಿದ್ದು “ಅಬ ಜಬ ದಬ” ಎಂಬ ಟೈಟಲ್ ಹೊತ್ತು ಗಮನಾರ್ಹ ಕಥಾಹಂದರವನ್ನು ಹೆಣೆಯಲಾಗಿದೆ ಎಂದು ತಿಳಿಸಿದೆ ಚಿತ್ರತಂಡ.
ಇನ್ನು ಈ ಚಿತ್ರದ ಮುಹೂರ್ತ ಈಗಾಗಲೇ ನೆರವೇರಿದ್ದು ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ ಚಿತ್ರ ತಂಡ. ಇನ್ನು ಮೀರಾ ಪಾತ್ರದಲ್ಲಿ ಎಲ್ಲರ ಮನಸನ್ನು ಗೆದಿದ್ದ ಅಂಕಿತಾ ಇದೀಗ ಬೆಳ್ಳಿಯ ತೆರೆಯಮೇಲೆ ಇನ್ನು ಹೆಚ್ಚು ಯಶಸ್ಸನ್ನು ಪಡೆಯಲಿ ಎಂದು ನಾವೆಲ್ಲರೂ ಹಾರೈಸೋಣ.

Comments are closed.