Neer Dose Karnataka
Take a fresh look at your lifestyle.

Kannada News: 22 ರ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದ ವಿವಾಹಿತೆ: ಗಂಡನನ್ನು ದೂರ ಮಾಡಿಕೊಳ್ಳಲು ಮಾಡಿದ ಪ್ಲಾನ್ ನಿಂದ ಏನಾಗಿದೆ ಗೊತ್ತೆ??

Kannada News: ಈಗಿನ ಕಾಲದಲ್ಲಿ ಅಕ್ರಮ ಸಂಬಂಧ ಎನ್ನುವುದು ಬಹಳ ಕಾಮನ್ ಎನ್ನುವ ಹಾಗೆ ಆಗಿಹೋಗಿದೆ. ಕೆಲವರು ಮದುವೆಗಿಂತ ಮೊದಲು ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡರೆ, ಇನ್ನು ಕೆಲವರು ಮದುವೆ ನಂತರ ಕೂಡ ಗಂಡನನ್ನು ಬಿಟ್ಟು ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡು, ತಮ್ಮ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಮತ್ತೊಬ್ಬ ಹುಡುಗನನ್ನು ಪ್ರೀತಿಸಿ ಗಂಡನನ್ನೇ ಕೊಲ್ಲುವುದು, ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಿ ಹೆಂಡತಿಯನ್ನೆ ಕೊಲ್ಲುವುದು, ಇಂಥಹ ಘಟನೆಗಳು ನಡೆಯುತ್ತಲೇ ಇದೆ. ಅದಕ್ಕೆ ಮತ್ತೊಂದು ಉದಾಹರಣೆ ಈಗ ಸಿಕ್ಕಿದ್ದು, ಕಡಪ (Kadapa) ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಅಷ್ಟಕ್ಕೂ ನಡೆದಿರುವುದು ಏನು ಎಂದರೆ, ಪೆದ್ದಮುಡಿಯಂ ಮಂಡಲದ ಕೊತ್ತಪಲ್ಲಿ ಗ್ರಾಮದಲ್ಲಿ 33 ವರ್ಷದ ಮಬ್ಬಿ ಹೆಸರಿನ ವಿವಾಹಿತ ಮಹಿಳೆ ಒಬ್ಬಳು 22 ವರ್ಷದ ವಂಶಿ ಕೃಷ್ಣಾರೆಡ್ಡಿ ಹೆಸರಿನ ಹುಡುಗನ ಜೊತೆಗೆ ಫೇಸ್‌ ಬುಕ್ ಮೂಲಕ ಪರಿಚಯ ಮಾಡಿಕೊಂಡಳು. ಮಬ್ಬಿಯ ಪತಿ ಕರೀಮುಲ್ಲಾ ಖಾನ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಬ್ಬಿ ಮತ್ತು ವಂಶಿಕೃಷ್ಣ ರೆಡ್ಡಿ ಇವರಿಬ್ಬರ ಪರಿಚಯವು ಕೆಲ ಸಮಯದ ನಂತರ ಅಕ್ರಮ ಸಂಬಂಧವಾಗಿ ಮುಂದುವರೆಯಿತು. ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಆ ಸಮಯಕ್ಕಾಗಲೇ ಮೂರು ಮಕ್ಕಳ ತಾಯಿಯಾಗಿದ್ದ ಮಬ್ಬಿ, ಗಂಡ ಮಕ್ಕಳನ್ನು ಬಿಟ್ಟು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗುವ ನಿರ್ಧಾರ ಕೈಗೊಂಡಳು. ಇದನ್ನು ಓದಿ.. Kannada Astrology: ಕೇವಲ ಮೂವತ್ತೇ ದಿನಗಳಲ್ಲಿ ಲಕ್ಷಾಧಿಪತಿ ಆಗಬೇಕು ಎಂದರೆ, ಇವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಾಕು. ಲಕ್ಷ್ಮಿ ದೇವಿ ಆಶೀರ್ವಾದ ಸಿಗುತ್ತದೆ.

ಇದರಿಂದ ವಂಶಿಕೃಷ್ಣ ರೆಡ್ಡಿ ಜೊತೆ ಸೇರಿ ಗಂಡನ ಹತ್ಯೆಗೆ ಭಾರೀ ಸ್ಕೆಚ್ ಪ್ಲಾನ್ ಮಾಡಿದಳು. ತನ್ನ ಮದ್ಯದ ಅಮಲಿನಲ್ಲಿ ಇದ್ದಾಗ ವಂಶಿಕೃಷ್ಣ ರೆಡ್ಡಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ, ನಂತರ ಇಬ್ಬರು ಸೇರಿ ಮಲಗಿದ್ದ ಕರೀಮುಲ್ಲಾ ಖಾನ್ ನ ಕುತ್ತಿಗೆಗೆ ತಂತಿಯಿಂದ ಬಿಗಿದು, ಆತನನ್ನು ನೇತುಹಾಕಿ ಕೊಲೆ ಮಾಡಿದ್ದಾರೆ. ನಂತರ ಯಾರಿಗೂ ಅನುಮಾನ ಬರದ ಹಾಗೆ ಗಂಡನ ಶವವನ್ನು ಗ್ರಾಮದಿಂದ ದೂರವಿದ್ದ ಪೊದೆಗೆ ಎಸೆದಿದ್ದಾರೆ. ನಂತರ ಮಬ್ಬಿ ತನ್ನ ಗಂಡನನ್ನು ಯಾರೋ ಕೊಂದಿದ್ದಾರೆ ಎಂದು ನಾಟಕವಾಡಿ, ಈ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ಪೊಲೀಸರಿಗೆ ಅನುಮಾನ ಬಂದು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಅಸಲಿ ಸತ್ಯ ಏನು ಎಂದು ಗೊತ್ತಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಓದಿ.. Cricket: ದಿನೇಶ್ ಕಾರ್ತಿಕ್ ರವರ ಫಿನಿಶರ್ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

Comments are closed.